ಮೈಸೂರಲ್ಲಿ ಗಂಡಸರಿಲ್ವೆ ವಿಶ್ವನಾಥ್ ಪ್ರಶ್ನೆ

ಸತತ ನಾಲ್ಕು ಬಾರಿ ಶಾಸಕರಾಗಿ ಶಂಕರಲಿಂಗೇಗೌಡರು, ಮೂರು ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ರಾಮದಾಸ್ ಅವರಿಗೆ ಅನುಭವವಿದೆ. ಇಬ್ಬರೂ ಬುದ್ಧಿವಂತಿಕೆಯಲ್ಲಿ ಕಡಿಮೆ ಏನಿಲ್ಲ. ಅವರಿಗೂ ಒಂದು ಅವಕಾಶ ನೀಡಲಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ವಿಶ್ವನಾಥ್ ಒತ್ತಾಯಿಸಿದರು.
ಕಳೆದ ಬಾರಿ ದಸರಾ ವೇಳೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಶೋಭಾ ಕರಂದ್ಲಾಜೆ ಉತ್ತಮ ಕೆಲಸ ಮಾಡಿದ್ದಾರೆ. ಆಡಳಿತ ವಿಷಯದಲ್ಲಿ ನಾನೆಂದೂ ರಾಜಕೀಯ ಮಾಡಲು ಹೋಗುವುದಿಲ್ಲ. ಆದರೆ ಸ್ವತ ಸಚಿವರೇ ಉಸ್ತುವಾರಿ ಸ್ಥಾನದಿಂದ ಕೈಬಿಡಿ ಎಂದು ಕೇಳಿಕೊಂಡಿರುವ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಸ್ಥಳೀಯ ಬಿಜೆಪಿ ಶಾಸಕನ್ನು ಹೆಸರಿಸಿದ್ದೇನೆ ಅಷ್ಟೇ ಎಂದು ವಿಶ್ವನಾಥ್ ವಿವರಿಸಿದರು.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications