3 ರು.ಗೆ ಕೆಜಿ ಅಕ್ಕಿ; ಯುಪಿಎ ಸರಕಾರದ ಕಾರ್ಯಕ್ರಮ
ರಾಷ್ಟ್ರಪತಿಗಳು ಲೋಕಸಭಾ ಚುನಾವಣೆ ಬಳಿಕ ಗುರುವಾರ ಮೊದಲ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿ, ಆಂತರಿಕ ಭದ್ರತೆ, ಕೋಮು ಸಾಮರಸ್ಯ ರಕ್ಷಣೆ, ಆಡಳಿತಾತ್ಮಕ ಸುಧಾರಣೆ, ಮಹಿಳೆಯರ ಅಭ್ಯುದಯಕ್ಕೆ ಸಂಘಟಿತ ಯತ್ನ ಮತ್ತು ಇತರ ಅವಕಾಶ ವಂಚಿತ ವರ್ಗಗಳ ಕಲ್ಯಾಣಕ್ಕೆ ಸರಕಾರ ಗರಿಷ್ಠ ಆದ್ಯತೆ ನೀಡಲಿದೆ ಎಂದು ರಾಷ್ಟ್ರಪತಿ ಹೇಳಿದರು.
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆಯಡಿ ಉದ್ಯೋಗ ಪರವಾನಿಗೆ ವ್ಯಾಪ್ತಿಯನ್ನು ಹಿಗ್ಗಿಸಲಾಗುವುದು, ಮುಂಚೂಣಿ ಕಾರ್ಯಕ್ರಮಗಳ ವ್ಯಾಪ್ತಿಗೆ ಆರೋಗ್ಯ, ಶಿಕ್ಷಣ, ಗ್ರಾಮೀಣ ಮೂಲ ಸೌಕರ್ಯ ಮತ್ತು ನಗರ ನವೀಕರಣ ಯೋಜನೆಗಳೂ ಸೇರುತ್ತವೆ ಎಂದವರು ತಿಳಿಸಿದರು.
ನೂತನ ಸರಕಾರ ತನ್ನ ಮೊದಲ ನೂರು ದಿನ ಪೂರೈಸುವ ಮುನ್ನ ಸದನದಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸುವುದೆಂದು ಹೇಳಿದ ಅವರು ಪಂಚಾಯತ್ ಮತ್ತು ಇತರ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ. 50ರ ಕೋಟಾ ಒದಗಿಸಲಾಗುವುದೆಂದು ಹೇಳಿದರು. ಮಹಿಳೆಯರ ಕಲ್ಯಾಣ ಸಂಬಂಧಿ ಯೋಜನೆಗಳ ತ್ವರಿತ ಅನುಷ್ಠಾನಕ್ಕಾಗಿ ಮಹಿಳಾ ಸಶಕ್ತೀಕರಣದ ರಾಷ್ಟ್ರೀಯ ಅಭಿಯಾನಕ್ಕೆ ವಿಶೇಷ ಒತ್ತು ನೀಡ ಲಾಗುವುದು ಎಂದರು.
(ಏಜೆನ್ಸೀಸ್)