ಭೂ ಮಾಫಿಯಾ ಅನೀಸ್ ದಾಳಿಗೆ ಕಾರಣ ?

ಆದರೆ, ಗುರುವಾರ ತಡರಾತ್ರಿ ನಡೆದ ಗುಂಡಿನ ದಾಳಿಯಲ್ಲಿ ದಾವೂದ್ ಇಬ್ರಾಹಿಂ ಮತ್ತು ಅತನ ಸಹೋದರ ಅನೀಸ್ ಮೇಲೆ 12 ಸುತ್ತು ಗುಂಡಿನ ದಾಳಿ ನಡೆಸಲಾಗಿದೆ. ಗುಂಡಿನ ದಾಳಿ ನಡೆಸಿದವರು ಯಾರೆಂಬುದೂ ಪತ್ತೆಯಾಗಿಲ್ಲ. ಆದರೆ, ಕರಾಚಿಯಲ್ಲಿರುವ ಸುಮಾರು 500 ಕೋಟಿ ರುಪಾಯಿಗಳ ಭೂಮಾಫಿಯಾಗೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ ಎನ್ನಲಾಗಿದೆ. ಅನೀಸ್ ಕುತ್ತಿಗೆಗೆ ಗುಂಡು ತಲುಲಿದೆ. ಅದರೆ, ಅಲ್ಲೇ ಇದ್ದ ದಾವೂದ್ ಪಾರಾಗಿದ್ದಾನೆ. ಆನೀಸ್ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದಾವೂದ್ ಕುಟುಂಬ ಸದಸ್ಯರು ದಾಳಿಯನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದು, ಇದೆಲ್ಲ ಮಾಧ್ಯಮಗಳ ಸೃಷ್ಟಿ ಎಂದು ಆರೋಪಿಸಿದ್ದಾರೆ. ದಾವೂದ್ ಕುಟುಂಬ ವಕೀಲ ಶ್ಯಾಮ್ ಕೇಶ್ವಾನಿ ಪ್ರತಿಕ್ರಿಯೆ ನೀಡಿದ್ದು, ಮಾಧ್ಯಮಗಳು ಮಾಡಿರುವ ಗುಂಡಿನ ದಾಳಿ ಪ್ರಕರಣದಿಂದ ದಾವೂದ್ ಕುಟುಂಬ ಆತಂಕಕ್ಕೆ ಒಳಗಾಗಿದೆ. ವಾಹಿನಿಗಳು ತಪ್ಪು ಸುದ್ದಿಯನ್ನು ಪ್ರಸಾರ ಮಾಡುತ್ತಿದ್ದು, ಮಾಧ್ಯಮಗಳ ಅಂದುಕೊಂಡಂತೆ ಯಾವ ಘಟನೆಯೂ ನಡೆದಿಲ್ಲ ಎನ್ನುತ್ತಿದ್ದಾರೆ.
(ಏಜನ್ಸೀಸ್)












Click it and Unblock the Notifications