ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಉಪಸಭಾಪತಿ ಸ್ಥಾನಕ್ಕೆ ಬಿಜೆಪಿಯ ಕರಿಯಾ ಮುಂಡ
ಜಾರ್ಜಂಡ್ ನಿಂದ ಆರು ಬಾರಿ ಲೋಕಸಭೆಗೆ ಆಯ್ಕೆಯಾಗಿರುವ ಕರಿಯಾ ಮುಂಡ ದಲಿತ ಮುಖಂಡರೂ ಆಗಿದ್ದಾರೆ. ಕೇಂದ್ರದಲ್ಲಿ ಎನ್ ಡಿ ಎ ನೇತೃತ್ವದ ವಾಜಪೇಯಿ ಸರಕಾರದಲ್ಲಿ ಸಂಪುಟ ದರ್ಜೆ ಸಚಿವರಾಗಿಯೂ ಮುಂಡ ಕಾರ್ಯನಿರ್ವಹಿಸಿದ್ದಾರೆ.
ಬಿಹಾರದ ರಾಂಚಿ ( ಪ್ರಸ್ತುತ ಜಾರ್ಖಂಡ್ ರಾಜಧಾನಿ )ಜಿಲ್ಲೆಯಲ್ಲಿ 1963ರಲ್ಲಿ ಜನಿಸಿದ ಮುಂಡ ಸ್ನಾತಕೋತ್ತರ ಪದವಿಧರರು. ಕುಂತಿ ಬುಡಕಟ್ಟು ಕ್ಷೇತ್ರದಿಂದ ಹಲವಾರು ಬಾರಿ ಲೋಕಸಭೆಗೆ ಮುಂಡ ಆಯ್ಕೆಯಾಗಿದ್ದಾರೆ. ಲೋಕಸಭಾ ಸ್ಪೀಕರ್ ಹುದ್ದೆಗೆ ದಲಿತ ಮುಂದಾಳು ಮೀರಾ ಕುಮಾರ್ ಅವರನ್ನು ಕಾಂಗ್ರೆಸ್ ಪಕ್ಷ ಸೂಚಿಸಿದೆ. ಇದರ ಬೆನ್ನಲ್ಲೇ ಉಪಸಭಾಪತಿ ಹುದ್ದೆಗೆ ಬಿಜೆಪಿ ಮತ್ತೊಬ್ಬ ದಲಿತ ಮುಖಂಡನ ಹೆಸರನ್ನು ಸೂಚಿಸಿರುವುದು ವಿಶೇಷ.
(ಏಜೆನ್ಸೀಸ್)
Comments
Story first published: Tuesday, June 2, 2009, 12:23 [IST]