ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವಿಕಾಸ ಸಂಕಲ್ಪಕ್ಕೆ ಬಳ್ಳಾರಿ ಗಣಿ ಧಣಿಗಳು ಗೈರು
ಬಳ್ಳಾರಿ, ಜೂ.1: ಬೆಂಗಳೂರಿನಲ್ಲಿ ಭಾನುವಾರ ನಡೆದ ಬಿಜೆಪಿ ಸರಕಾರದ ವಿಕಾಸ ಸಂಕಲ್ಪ ಉತ್ಸವಕ್ಕೆ ಗಣಿ ಧಣಿಗಳಾದ ರೆಡ್ಡಿ ಸಹೋದರರು, ಸಚಿವ ಬಿ ಶ್ರೀರಾಮುಲು ಭಾಗವಹಿಸದೇ ಇರುವುದು ರಾಜಕೀಯ ವಲದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಯಡಿಯೂರಪ್ಪ ಮಂತ್ರಿ ಮಂಡಲದ ಬಹುತೇಕ ಸಚಿವರು, ಶಾಸಕರು ಹಾಜರಿದ್ದ ಕಾರ್ಯಕ್ರಮದಲ್ಲಿ ಗಣಿ ಧಣಿಗಳು ಮಾತ್ರ ಕಾಣೆಯಾಗಿದ್ದರು. ಸಚಿವರಾದ ಬಿ ಶ್ರೀರಾಮುಲು ಹಾಗೂ ಜಿ ಜನಾರ್ಧನರೆಡ್ಡಿ ಬಳ್ಳಾರಿಯಲ್ಲೇ ಉಳಿದುಕೊಂಡಿದ್ದು ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲ. ಸಾರ್ವಜನಿಕವಾಗಿಯೂ ಅವರು ಕಾಣಿಸಿಕೊಳ್ಳಲಿಲ್ಲ.
ವಿಕಾಸ ಸಂಕಲ್ಪದಲ್ಲಿ ಭಾಗವಹಿಸದಿರಲು ಕಾರಣ ಕೇಳಿದ ಪತ್ರಕರ್ತರಿಗೆ ಸಚಿವರು ಉತ್ತರಿಸಲು ನಿರಾಕರಿಸಿದರು. ಪದೇ ಪದೇ ಅದೇ ಪ್ರಶ್ನೆ ಕೇಳಿದ ಪತ್ರಕರ್ತರಿಗೆ ತಾವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸಿಟ್ಟಾದರು.
(ದಟ್ಸ್ ಕನ್ನಡ ವಾರ್ತೆ)
Comments
Story first published: Monday, June 1, 2009, 12:53 [IST]