ಶೀಘ್ರ ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ

ಕಳೆದ ಆರು ತಿ೦ಗಳಿನಿ೦ದ ಸಿದ್ದರಾಮಯ್ಯಗೆ ವಿಪಕ್ಷ ನಾಯಕನ ಪಟ್ಟ ಇನ್ನೇನು ಸಿಕ್ಕೇಬಿಟ್ಟಿತೇನೋ ಎ೦ಬ೦ತಿದ್ದರೂ ಕೊನೆ ಕ್ಷಣದಲ್ಲಿ ಕೈತಪ್ಪುತಿತ್ತು. ಈ ಬಾರಿ ಕಾಂಗ್ರೆಸ್ ಕೇ೦ದ್ರದಲ್ಲಿ ಒಕ್ಕಲಿಗ, ಹಿ೦ದುಳಿದ ವರ್ಗ ಮತ್ತು ದಲಿತ ಸಮುದಾಯದವರಿಗೆ ಸಚಿವ ಸ್ಥಾನಮಾನ ನೀಡಿದೆ. ಮೂರನೇ ಸ್ಥಾನದಲ್ಲಿರುವ ಕುರುಬ ಸಮುದಾಯದ ಸಿದ್ದು ಅವರಿಗೆ ವಿಧಾನಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ನೀಡಿ ಆ ಸಮುದಾಯವನ್ನು ಪಕ್ಷದೆಡೆಗೆ ಸೆಳೆಯುವ ಕಸರತ್ತು ನಡೆದಿದೆ. ಆದರೆ, ಈ ಸ್ಥಾನಕ್ಕೆ ಪಕ್ಷದೊಳಗಿರುವ ಹಳೆಯ ತಲೆಗಳು ಮುಖ್ಯವಾಗಿ ಡಿ ಕೆ ಶಿವಕುಮಾರ್ ಮತ್ತು ಪರಮೇಶ್ವರಪ್ಪ ಯಾವ ರೀತಿ ಲಾಭಿ ನಡೆಸುತ್ತಾರೆ ಎನ್ನುವುದನ್ನು ಕಾದು ನೋಡಬೇಕು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications