ಶಿವಮೊಗ್ಗ ರೆವಿನ್ಯೂ ಇನ್ಸ್ಪೆಕ್ಟರ್ ಲೋಕಾಯುಕ್ತರ ಬಲೆಗೆ

25 ಸಾವಿರ ರು. ಲಂಚ ಕೊಟ್ಟರೆ ಮಾತ್ರ ಖಾತಾ ಎಕ್ಸ್ ಟ್ರಾಕ್ಟ್ ಕೊಡುವುದಾಗಿ ಬಲವಂತ ಮಾಡಿದ್ದ ರೆವಿನ್ಯೂ ಇನ್ಸ್ಪೆಕ್ಟರ್ ಆರ್.ಮಂಜುನಾಥ್ ವಿರುದ್ಧ ಬುಧವಾರದಂದು ಸಂಜೆ 4ಕ್ಕೆ ಅಣ್ಣಾನಗರದ ಮುಸ್ತಾಕ್ ಅಹಮ್ಮದ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ದೂರು ಪಡೆದ ಲೋಕಾಯುಕ್ತ ಡಿವೈಎಸ್ಪಿಯಾಗಿರುವ ಗಂಗಾಧರಪ್ಪ ಮತ್ತು ತನಿಖಾಧಿಕಾರಿ ಎಂ.ಎನ್.ಕರಿಬಸವನ ಗೌಡರವರು ಬಲೆಯನ್ನು ಸಿದ್ಧ ಪಡಿಸಿದರು. ಎಫ್.ಐ.ಆರ್. ದಾಖಲಿಸಿಕೊಂಡ ನಂತರ ದೂರು ನೀಡಿದ ಮುಸ್ತಾಕ್ ಅಹಮ್ಮದ್ ಕೈಗೆ 25 ಸಾವಿರ ರೂ. ನಗದನ್ನು ನೀಡಿ ಬುಧವಾರ ರಾತ್ರಿ 8 ಗಂಟೆಗೆ ನಗರಸಭೆ ಕಂದಾಯ ವಿಭಾಗಕ್ಕೆ ಕಳುಹಿಸಿದರು. ಅಲ್ಲಿ ಮುಸ್ತಾಕ್ ಅಹಮ್ಮದ್ರನ್ನು ಕಾಯುತ್ತಾ ಕುಳಿತಿದ್ದ ಮಂಜುನಾಥ್ ಹಣ ಪಡೆದುಕೊಂಡವನೇ ತನ್ನ ಪ್ಯಾಂಟಿನ ಜೇಬಿನಲ್ಲಿ ತೂರಿಸಿಕೊಂಡ. ಅಲ್ಲಿಯೇ ಕಾಯುತ್ತಾ ನಿಂತಿದ್ದ ಡಿ.ವೈ.ಎಸ್.ಪಿ. ಗಂಗಾಧರಪ್ಪ ಹಾಗೂ ತನಿಖಾಧಿಕಾರಿ ಎಂ.ಎನ್. ಕರಿಬಸವನಗೌಡ ಮತ್ತು ಸಿಬ್ಬಂದಿಗಳು ರೆವಿನ್ಯೂ ಇನ್ಸ್ಪೆಕ್ಟರ್ ಮಂಜುನಾಥ್ನನ್ನು ಬಂಧಿಸಿ ಆತನ ಬಳಿ ಇದ್ದ ಲಂಚದ ಹಣವನ್ನು ವಶಕ್ಕೆ ತೆಗೆದುಕೊಂಡರು.
ಘಟನೆಯ ವಿವರ:
ಮುಸ್ತಾಕ್ ಅಹಮ್ಮದ್ ಅಣ್ಣಾನಗರದಲ್ಲಿ 162 ಮತ್ತು 163 ಸರ್ವೆ ನಂಬರಿನಲ್ಲಿ ಮನೆಗಳನ್ನು ಕಟ್ಟಿಕೊಂಡಿದ್ದು, 163ರ ಸರ್ವೆ ನಂಬರಿನಲ್ಲಿರುವ ಮನೆಯನ್ನು 2004ರಲ್ಲಿ ನಿರ್ಮಿಸಿದ್ದರು. 162 ಸರ್ವೆ ನಂಬರಿನ ಮನೆಯನ್ನು 1993ರಲ್ಲಿ ಕಟ್ಟಿಕೊಂಡಿದ್ದರು. ಈ ಸಂಬಂಧ 163 ಸರ್ವೆ ನಂಬರಿನಲ್ಲಿರುವ ಮನೆಯನ್ನು ಮಾರಾಟ ಮಾಡುವ ಉದ್ದೇಶದಿಂದ ಖಾತಾ ಎಕ್ಸ್ ಟ್ರಾಕ್ಟ್ ಪಡೆಯಲು ಅಣ್ಣಾನಗರ ಬಡಾವಣೆಯ ರೆವಿನ್ಯೂ ಇನ್ಸ್ಪೆಕ್ಟರ್ ಆಗಿರುವ ಮಂಜುನಾಥ್ರವರನ್ನು ಸಂಪರ್ಕಿಸಿ ಅರ್ಜಿ ನೀಡಿದ್ದರು.
ಕಂದಾಯ ಬಾಕಿ ಇಲ್ಲದಿದ್ದರೂ 25 ಸಾವಿರ ರು. ಲಂಚ ನೀಡಿದರೆ ಮಾತ್ರ ಖಾತಾ ಎಕ್ಸ್ ಟ್ರಾಕ್ಟ್ ನೀಡುವುದಾಗಿ ಮಂಜುನಾಥ್ ಪಟ್ಟುಹಿಡಿದಿದ್ದ. ಮಂಜುನಾಥ್ ವರ್ತನೆಯಿಂದ ಬೇಸತ್ತ ಮುಸ್ತಾಕ್ ಅಹಮ್ಮದ್ ಬುಧವಾರದಂದು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications