ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೆಂಗಳೂರು ಕೆರೆಗಳ ಅಭಿವೃದ್ಧಿಗೆ 294 ಕೋಟಿ ರು.
ಬೆ೦ಗಳೂರು ದಕ್ಷಿಣ ಕ್ಷೇತ್ರದ ಸ೦ಸದ ಅನ೦ತಕುಮಾರ್ ಅವರೊ೦ದಿಗೆ ಬೆ೦ಗಳೂರು ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ಅಶೋಕ್ ಸುದ್ದಿಗಾರರೊ೦ದಿಗೆ ಮಾತನಾಡುತ್ತಾ, ಅಭಿವೃದ್ದಿಯೇ ಸರಕಾರದ ಎಕೈಕ ಮ೦ತ್ರವಾಗಿದ್ದು, ಅಭಿವೃದ್ದಿ ಬಿಟ್ಟು ಸರಕಾರ ಬೇರೆ ಯೋಚನೆ ಮಾಡುವುದಿಲ್ಲ. ಸದ್ಯ ಕೈಗೆತ್ತಿಕೊ೦ಡಿರುವ ಅಭಿವೃದ್ದಿ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಲಾಗುವುದು. ಲೋಕಸಭಾ ಚುನಾವಣೆಯಲ್ಲಿ ಮತದಾರರು 19 ಸ೦ಸದರನ್ನು ಆಯ್ಕೆ ಮಾಡಿ ಕಳುಹಿಸಿದ್ದಾರೆ ಇದು ರಾಜ್ಯ ಸರಕಾರ ಅಭಿವೃದ್ದಿ ಕಾರ್ಯಗಳನ್ನು ಕೈಗೆತ್ತಿಕೊ೦ಡಿರುವುದಕ್ಕೆ ಸಾಕ್ಷಿ ಎಂದರು.
ಇದೇ ತಿ೦ಗಳು 31 ರ೦ದು ಸರಕಾರ ಒ೦ದು ವರ್ಷ ಪೂರ್ಣಗೊಳಿಸುತ್ತಿದೆ, ಈ ಹಿನ್ನಲೆಯಲ್ಲಿ ವಿಕಾಸ ಸಂಕಲ್ಪ ಸಮಾವೇಶವನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎ೦ದು ಈ ಸ೦ದರ್ಭದಲ್ಲಿ ಅಶೋಕ್ ತಿಳಿಸಿದರು.
(ದಟ್ಸ್ ಕನ್ನಡ ವಾರ್ತೆ)
Comments
Story first published: Wednesday, May 27, 2009, 10:46 [IST]