ಎಸ್ ಎಂ ಕೃಷ್ಣ ಕೇಂದ್ರದ ವಿದೇಶಾಂಗ ಮಂತ್ರಿ ?
ನವದೆಹಲಿ,
ಮೇ. 21 : ಹಿರಿಯ ನಾಯಕ ಪ್ರಣಬ್ ಮುಖರ್ಜಿ ಹಣಕಾಸು ಮಂತ್ರಿಯಾಗುವುದು ಖಾತ್ರಿಯಾಗುತ್ತಿದ್ದಂತೆಯೇ ವಿದೇಶಾಂಗ ಖಾತೆಗೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಹೆಸರು ಬಲವಾಗಿ ಕೇಳಬರತೊಡಗಿದೆ. ಕೃಷ್ಣ ಜೊತೆಗೆ ಕೇಂದ್ರ ಸಚಿವರಾದ ಕಮಲನಾಥ್, ಕಪಿಲ್ ಸಿಬಲ್, ಸಲ್ಮಾನ್ ಖುರ್ಷೀದ್ ಅವರ ಹೆಸರಗಳು ಸೇರಿಕೊಂಡಿವೆ. ಅಲ್ಲದೇ ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದಿಂದ ಆಯ್ಕೆಯಾಗಿರುವ ವೀರಪ್ಪ ಮೊಯ್ಲಿ ಅವರಿಗೆ ಲೋಕಸಭೆಯ ಸ್ಪೀಕರ್ ಪಟ್ಟ ಸಿಗುವ ಸಾಧ್ಯತೆಗಳಿವೆ. id="toptextpromo">ಪಿ
ಚಿದಂಬರಂ ಅವರಿಗೆ ಗೃಹ ಖಾತೆ, ಜೈರಾಮ್ ರಮೇಶ್ ಅವರಿಗೆ ವಿದ್ಯುತ್ ನೀಡುವ ಕುರಿತು ಈಗಾಗಲೇ ತೀರ್ಮಾನಿಸಲಾಗಿದೆ. ಆದರೆ, ಪ್ರಣಬ್ ಮುಖರ್ಜಿ ಅವರಿಗೆ ಹಣಕಾಸು ನೀಡುವುದು ಸಹ ಅಂತಿಮಗೊಳಿಸಲಾಗಿದೆ. ಆದರೆ, ಮುಖರ್ಜಿ ಅವರ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆದಿದೆ. ಕರ್ನಾಟಕದ ಹಿರಿಯ ಕಾಂಗ್ರೆಸ್ಸಿಗ ಎನ್ ಎಂ ಕೃಷ್ಣ ಅವರಿಗೆ ಕೂಡಾ ವಿದೇಶಾಂಗ ಮಂತ್ರಿಗಿರಿಯ ರೇಸ್ ನಲ್ಲಿದ್ದಾರೆ. ಆದರೆ, ನಾಗರಿಕ ಪರಮಾಣು ಒಪ್ಪಂದ ವಿಷಯಕ್ಕೆ ಸಂಬಂಧಿಸಿದಂತೆ ಕಪಿಲ್ ಸಿಬಲ್ ಮಹತ್ವದ ಸ್ಥಾನ ವಹಿಸಿರುವ ಹಿನ್ನೆಲೆಯಲ್ಲಿ ಅವರು ಹೆಸರು ಕೃಷ್ಣಗಿಂತ ಮುಂಚೂಣಿಯಲ್ಲಿದೆ ಎನ್ನಲಾಗಿದೆ. id='are-slot-1' class='oiad oi-axt oiadv'> id='top-searched-articles'>(ಏಜನ್ಸೀಸ್)












Click it and Unblock the Notifications