ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಮತಾ ಬ್ಯಾನರ್ಜಿ ಮುಖ್ಯಮಂತ್ರಿ ಆಗ್ಬೇಕು : ಪ್ರಣಬ್
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಕಳೆದ ಮೂರು ದಶಕಗಳಿಂದ ಎಡಪಕ್ಷಗಳ ದುರಾಡಳಿತದಿಂದ ನರಳುತ್ತಿರುವ ಪಶ್ಚಿಮ ಬಂಗಾಲವನ್ನು ಮಮತಾ ಪಾರು ಮಾಡಲಿದ್ದಾರೆ ಎಂದರು. ತೃಣಮೂಲ ಕಾಂಗ್ರೆಸ್ ನೊಂದಿಗೆ ಕಾಂಗ್ರೆಸ್ ಚುನಾವಣೆ ಪೂರ್ವದಲ್ಲಿ ಮೈತ್ರಿ ಮಾಡಿಕೊಂಡಿರುವ ವಿಷಯಕ್ಕೆ ಹರ್ಷ ವ್ಯಕ್ತಪಡಿಸಿದ ಅವರು, ಮಮತಾ ಅವರ ಹೋರಾಟದ ಫಲವಾಗಿ ಜನರು ಅವರ ಪಕ್ಷಕ್ಕೆ ಈ ಬಾರಿ ಆಶೀರ್ವಾದ ಮಾಡಿದ್ದಾರೆ ಎಂದು ಹೇಳಿದರು.
ಮಮತಾ ಕೈಗಾರಿಕೆಗಳ ವಿರೋಧಿ ಎಂಬ ಹಣಪಟ್ಟಿಯನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಪ್ರಣಬ್, ಟಾಟಾ ನ್ಯಾನೋ ಕಾರು ಘಟಕದ ವಶದಲ್ಲಿದ್ದ ರೈತರ ಭೂಮಿಯನ್ನು ಮರಳಿ ನೀಡುವ ಕುರಿತು ಹೋರಾಟ ಮಾಡಿದರೆ ವಿನಃ, ಅಭಿವೃದ್ದಿ ವಿರೋಧಿಯಂತೂ ಖಂಡಿತ ಅಲ್ಲ ಎಂದರು. ಮುಂದಿನ ಮುಖ್ಯಮಂತ್ರಿಯಾಗಿ ಮಮತಾ ಅವರನ್ನು ನೋಡುವ ಆಸೆಯನ್ನು ಜನರು ವ್ಯಕ್ತಪಡಿಸುತ್ತಿದ್ದಾರೆ. ಕೆಂಪು ಕೋಟೆಯ ನಾಯಕರ ಸದ್ದಡಗಿಸಿ ಅವರು ಮುಖ್ಯಮಂತ್ರಿ ಪದವಿ ಆಲಂಕರಿಸುತ್ತಾರೆ ಎಂದು ಮುಖರ್ಜಿ ಹೇಳಿದರು.
(ಏಜನ್ಸೀಸ್)
Comments
ಕಾಂಗ್ರೆಸ್ congress ಪ್ರಣಬ್ ಮುಖರ್ಜಿ ಯುಪಿಎ upa pranab mukherjee west bengal ಪಶ್ಚಿಮ ಬಂಗಾಲ ಮಮತಾ ಬ್ಯಾನರ್ಜಿ mamata banerjee
Story first published: Wednesday, May 20, 2009, 12:33 [IST]