ಚಿತ್ರದುರ್ಗ ; ಎತ್ತಿನ ಗಾಡಿ ಹಳ್ಳಕ್ಕೆ ಉರುಳಿ 19 ಸಾವು

ಮೃತರ ಸಂಬಂಧಿಕರ ಅಕ್ರಂದನ ಮುಗಿಲು ಮುಟ್ಟಿದ್ದು, ಮದುವೆಗೆ ಹೋದ ಜನರು ಮಸಣ ಸೇರಿದಂತಾಗಿದೆ. ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ ಕರುಣಾಕರರೆಡ್ಡಿ ಘಟನೆಗೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಜಿಲ್ಲಾಧಿಕಾರಿ ಆದಿತ್ಯಾ ಬಿಸ್ವಾಸ್ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಎತ್ತಿನಗಾಡಿಯಲ್ಲಿ ಸುಮಾರು 28 ಜನರಿದ್ದರು. 19 ಮೃತದೇಹಗಳು ಸಿಕ್ಕಿವೆ. ಮೃತಪಟ್ಟವರು ವೆಂಕಟಾಪುರ ಗ್ರಾಮದವರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಉಳಿದವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಮಾಚೇನಹಳ್ಳಿಯಲ್ಲಿದ್ದ ಮದುವೆ ಕಾರ್ಯ ಮುಗಿಸಿಕೊಂಡು ವೆಂಕಟಾಪುರಕ್ಕೆ ತೆರಳುತ್ತಿದ್ದರು. ರಾಂಪುರ ಸಮೀಪದ ಹಗರಿಹಳ್ಳದ ಮೇಲೆ ಗಾಡಿ ತೆರಳುತ್ತಿದ್ದ ಸಮಯದಲ್ಲಿ ಕಿರಿದಾದ ದಾರಿಯಿದ್ದರಿಂದ ಎತ್ತಿನಗಾಡಿ ದಾರಿಯಲ್ಲಿದ್ದ ತಗ್ಗಿಗೆ ಬಿದ್ದು ಹಳ್ಳಕ್ಕೆ ಉರುಳಿದೆ.
ಹಗರಿಹಳ್ಳದ ಮೇಲಿದ್ದ ತೆಗ್ಗಿನ ಮೇಲೆ ಎತ್ತಿನಗಾಡಿ ಹೋಗಿದ್ದೆ ಈ ಅನಾಹುತಕ್ಕೆ ಕಾರಣವಾಗಿದೆ. ಇಬ್ಬರು ಸ್ಥಿತಿ ಗಂಭೀರವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಎಂಟು ಮಂದಿಯ ಶೋಧ ಕಾರ್ಯ ಮುಂದುವರೆದಿದೆ. ಮಂಗಳವಾರ ಬಿದ್ದ ಭಾರಿ ಮಳೆಯಿಂದ ಹಗರಿಹಳ್ಳ ತುಂಬಿ ಹರಿಯುತ್ತಿತ್ತು ಎಂದು ಚಿತ್ರದುರ್ಗ ಸಹಾಯಕ ಎಸ್ಪಿ ಶಿವರಾಮರೆಡ್ಡಿ ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications