ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವೇಲುಪಿಲೈ ಪ್ರಭಾಕರನ್ ಸತ್ತಿಲ್ಲ, ಎಲ್ ಟಿಟಿಇ
ಶ್ರೀಲಂಕಾ ಸರಕಾರ ತಮಿಳರ ಮೇಲೆ ಸಾರಿರುವ ಯುದ್ಧದಲ್ಲಿ ಲಂಕಾತಮಿಳರ ಆರಾಧ್ಯದೈವ ವೇಲುಪಿಲೈ ಪ್ರಭಾಕರನ್ ಮೃತಪಟ್ಟಿಲ್ಲ, ಅವರು ಜೀವಂತವಾಗಿ ಸುರಕ್ಷಿತವಾಗಿ ಇದ್ದಾರೆ ಎಂದು ಎಲ್ ಟಿಟಇ ಅಂತಾರಾಷ್ಟ್ರೀಯ ವಕ್ತಾರ ಎಸ್ ಪತಮನತನ್ ತಿಳಿಸಿದ್ದಾರೆ ಎಂದು ವೆಬ್ ಸೈಟ್ ನಲ್ಲಿ ಪ್ರಕಟಿವಾಗಿದೆ. ಶ್ರೀಲಂಕಾ ಸರಕಾರ ಪ್ರಭಾಕರನ್ ಸತ್ತಿದ್ದಾರೆ ಎಂದು ಸುಳ್ಳು ಹೇಳಿಕೆ ನೀಡಿದೆ ಎಂದು ಅಸಮಾಧಾನಗೊಂಡಿರುವ ಅವರು, ಈ ವರದಿಯನ್ನು ಸಂಪೂರ್ಣವಾಗಿ ತಳ್ಳಿಹಾಕುವುದಾಗಿ ಹೇಳಿದ್ದಾರೆ.
ಅಮಾಯಕ ತಮಿಳರ ಮೇಲೆ ಶ್ರೀಲಂಕಾ ಸರಕಾರ ಯುದ್ಧ ನಡೆಸುತ್ತಿದೆ. ಲಂಕಾ ಸರಕಾರದ ದಾಳಿಯಿಂದಾಗಿ ಲಕ್ಷಾಂತರ ಜನ ತಮಿಳರು ಸಾವಿಗೀಡಾಗಿದ್ದಾರೆ. ಕೋಟ್ಯಂತರ ಜನ ವಸತಿಹೀನರಾಗಿದ್ದಾರೆ. ಶ್ರೀಲಂಕಾ ಸರಕಾರ ಮಾವವ ಹಕ್ಕುಗಳ ಉಲ್ಲಂಘನೆ ಕೃತ್ಯ ಎಸಗುತ್ತಿದೆ ಎಂದು ಎಲ್ ಟಿಟಿಇ ವಕ್ತಾರ ತಿಳಿಸಿದ್ದಾರೆ ಎಂದು ವೆಬ್ ಸೈಟ್ ಪ್ರಕಟಿಸಿದೆ.
(ಏಜನ್ಸೀಸ್)
ಪೂರಕ ಓದಿಗೆ: ಎಲ್ ಟಿಟಿಇ ಮುಖ್ಯಸ್ಥ ಪ್ರಭಾಕರನ್ ಹತ್ಯೆ
Comments
Story first published: Tuesday, May 19, 2009, 11:29 [IST]