ಪ್ರಧಾನಿಯಾಗಿ ಮನಮೋಹನ್ ಮುಂದುವರಿಕೆ: ಕಾಂಗ್ರೆಸ್
ಈ ಚುನಾವಣೆಗೆ ಮನಮೋಹನ್ ಸಿಂಗ್ ಅವರೇ ನಮ್ಮ ಪ್ರಧಾನಿ ಅಭ್ಯರ್ಥಿ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜನಾರ್ದನ ದ್ವಿವೇದಿ ಸುದ್ದಿಗಾರರಿಗೆ ತಿಳಿಸಿದರು. ಭವಿಷ್ಯದಲ್ಲಿ ಪ್ರಧಾನ ಮಂತ್ರಿ ಹುದ್ದೆ ರಾಹುಲ್ ಗಾಂಧಿ ಅವರಿಗೆ ಕಾದಿರಿಸಲಾಗಿದೆ. ಅವರೇ ನಮ್ಮ ಪಕ್ಷದ ಮುಂದಾಳು ಎಂದು ದ್ವಿವೇದಿ ಹೇಳಿದರು.
ಪ್ರಧಾನ ಮಂತ್ರಿಗಳ ನಾಯಕತ್ವ, ಯುಪಿಎಗೆ ನೇತೃತ್ವ ವಹಿಸಿದ್ದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರಚುನಾವಣಾ ಪ್ರಚಾರದ ಮುಂದಾಳತ್ವದಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಅಧಿಕಾರದ ಚುಕ್ಕಾಣಿ ಹಿಡಿದಿದೆ ಎಂದು ದ್ವಿವೇದಿ ತಿಳಿಸಿದರು. ಎಡಪಕ್ಷಗಳ ಸಂಬಂಧದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅವರೊಂದಿಗಿನ ಸಂಬಂಧವನ್ನು ನಾವು ಕಳೆದುಕೊಳ್ಳಲಿಲ್ಲ. ಭಾರತ-ಅಮೆರಿಕ ನಡುವಿನ ಅಣು ಒಪ್ಪಂದದ ಸಂಬಂಧದಲ್ಲಿ ಅವರು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕೆ ಕೊಟ್ಟಿದ್ದ ಬೆಂಬಲವನ್ನು ಹಿಂಪಡೆದರು ಅಷ್ಟೇ ಎಂದರು.
(ಏಜೆನ್ಸೀಸ್)
ಮಹಾಚುನಾವಣೆ
2009
ಫಲಿತಾಂಶ
:
ಕ್ಷಣಕ್ಷಣದ
ಸುದ್ದಿ
ಲೋಕಸಭೆ
ಚುನಾವಣೆ
ಲೇಖನಗಳಿಗೆ
ಇಲ್ಲಿ
ಕ್ಲಿಕ್ಕಿಸಿ