233685lok sabha election 2009ಮಂಕುಬೂದಿ ಎರಚಲು ಸಾಧ್ಯವಿಲ್ಲದ ಇಂಕು!/news/2009/03/14/indelible-ink-by-mysore-paints-and-varnish.htmlಮೈಸೂರು, ಮಾ. 14 : ಏಪ್ರಿಲ್ ಮತ್ತು ಮೇನಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬಹಳ ದಿನಗಳವರೆಗೆ ಅಳಿಸಲಾಗದ ಗುರುತು ಮೂಡಿಸುವ ಸಂಗತಿ ಯಾವುದು? ರೌಡಿಗಳ ದರ್ಬಾರು, ರಾಜಕಾರಣಿಗಳ ಭ್ರಷ್ಟಾಚಾರ ಯಾವುದೂ ಅಲ್ಲ. ಅದು, ಮತ ಹಾಕಿದ ನಂತರ ಎಡ ತೋರುಬೆರಳಿನ ಮೇಲೆ ಹಾಕುವ ಮಸಿಯ ಗುರುತು.ಹೌದು, ಪಂಚಾಯತಿ ಚುನಾವಣೆಯಿರಲಿ, ವಿಧಾನಸಭೆ ಅಥವಾ ಲೋಕಸಭೆ ಚುನಾವಣೆಯೇ ಇರಲಿ, ಬ್ಯಾಲೆಟ್ 35223http://kannada.oneindia.com/img/2009/03/14-gangubai-hangal2.jpg233685lok sabha election 2009ಚುನಾವಣೆ : ಡಿವಿ ಗುಂಡಪ್ಪ ಕಂಡಂತೆ/literature/poem/2009/0317-poetic-rendering-on-election-by-dvg.htmlಇಂದು (ಮಾರ್ಚ್ 17) ಡಿವಿ ಗುಂಡಪ್ಪ ಅವರ ಜನ್ಮದಿನ. ಅವರ 'ಮಂಕುತಿಮ್ಮನ ಕಗ್ಗ' ಎಲ್ಲರಿಗೂ ಗೊತ್ತು. ಆದರೆ, 'ಮಹಾಚುನಾವಣೆ'ಯ ಬಗ್ಗೆಯೂ ಡಿವಿಜಿ ಅವರು ಕೆಲವು ಪದ್ಯಗಳನ್ನು ಬರೆದಿದ್ದಾರೆಂಬುದು ಹಲವರಿಗೆ ಗೊತ್ತಿರಲಿಕ್ಕಿಲ್ಲ. 1965ರಲ್ಲಿ ಬರೆದ ಆ ಪದ್ಯಗಳು ಇಂದಿಗೂ ಪ್ರಸ್ತುತವಾಗಿವೆಯೆಂದರೆ ನಮ್ಮ ರಾಜಕಾರಣವು ಅಂದಿಗೂ ಇಂದಿಗೂ ಬದಲಾಗಿಲ್ಲವೆಂಬುದು ವೇದ್ಯವಾಗುತ್ತದೆ.* ಎಚ್. ಆನಂದರಾಮ ಶಾಸ್ತ್ರೀಹೌದು. ರಾಜಕಾರಣವೆಂಬುದು ಕೊಳಕುಗಟ್ಟಿ ನಿಂತ ನೀರು. 35286http://kannada.oneindia.com/img/2009/03/17-dvg5.jpg233685lok sabha election 2009ಮಹಾಸಮರಕ್ಕೊಂದು ಮುನ್ನುಡಿ/news/2009/03/17/lok-sabha-election-2009-wake-up-call.htmlಪ್ರಜಾಪ್ರಭುತ್ವದಲ್ಲಿ ಇನ್ನೂ ಪ್ರಜೆಗಳ ಕೈಯ್ಯಲ್ಲಿ ಉಳಿದುಕೊಂಡಿರುವ ಏಕೈಕ ಅಸ್ತ್ರ ಮತದಾನದ ಹಕ್ಕು. ಇದಕ್ಕೂ ಕುತ್ತು ಬಂದರೆ ಆಶ್ಚರ್ಯವಿಲ್ಲ. ಮತದಾನದಲ್ಲಿ ಪಾಲ್ಗೊಳ್ಳದೆ ಸಿಕ್ಕಿದ ರಜೆಯನ್ನು ಕಂಬಳಿ ಹೊದ್ದು ಮಲಗಲು ಬಳಸಿಕೊಂಡರೆ ದೇಶ ಆಳಲು ಅರ್ಥಾತ್ ನಮ್ಮನ್ನು ಆಳಲು ಒಳ್ಳೆಯವರು ಬರಲು ಸಾಧ್ಯವೇ ಇಲ್ಲ. ಇದನ್ನು ಪ್ರಜಾತಂತ್ರದಲ್ಲಿ ನಂಬಿಕೆಯಿಟ್ಟಿರುವ ಪ್ರತಿಯೊಬ್ಬನೂ ಅರಿಯುವುದೊಳಿತು.* ಚಿದಂಬರ ಬೈಕಂಪಾಡಿ, ಸೂರತ್ಕಲ್, ಮಂಗಳೂರುಮತ್ತೊಂದು ಮಹಾಸಮರಕ್ಕೆ ಅಖಾಡ 35294http://kannada.oneindia.com/img/2009/03/17-politician2.jpg233685lok sabha election 2009ಬಿಜೆಪಿ ಅಭ್ಯರ್ಥಿಗಳ ಮೂರನೇ ಪಟ್ಟಿ ಪ್ರಕಟ/news/2009/03/17/15th-ls-poll-bjp-third-list-announced.htmlಬೆಂಗಳೂರು, ಮಾ. 17 : 15ನೇ ಲೋಕಸಭೆ ಚುನಾವಣೆಗೆ ಭಾರಿ ಸಿದ್ಧತೆಯಲ್ಲಿರುವ ಭಾರತೀಯ ಜನತಾ ಪಕ್ಷ ಇಂದು ನಾಲ್ಕು ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಮತ್ತೊಂದು ಪಟ್ಟಿಯನ್ನು ಬಿಡುಗಡೆ ಮಾಡಿದೆ. ಚುನಾವಣೆ ತಯಾರಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಗಿಂತ ಮುಂದೆ ಎನ್ನುವುದನ್ನು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಾಬೀತುಪಡಿಸಿರುವ ಬಿಜೆಪಿ, ಈಗಾಗಲೇ ಗೆಲುವಿನ ಕುದುರೆ ಎನ್ನುವ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ 35298http://kannada.oneindia.com/img/2009/03/17-janardhana-swamy1.jpg233685lok sabha election 2009ಚುನಾವಣೆಯೆಂಬ ಮಾಯೆಯ ಮಹಿಮೆ ಏನಿದೆಯೋ?/column/bhat/2009/0319-lok-sabha-election-who-knows-what-happens.htmlಒಂದೇ ಸಮನೆ ಸೂರ್ಯ ಉಗಿಯಲಾರಂಭಿಸಿದ್ದಾನೆ. ಬಿಸಿಲಗುಳ್ಳೆಗಳು ಒಡೆಯಲಾರಂಭಿಸಿವೆ. ನೆಲ ಕಾದ ಕಾವಲಿಯಂತಾಗಿದೆ. ನೀರಿನ ಪಸೆ ಕಾವಲಿ ಮೇಲೆ ಬಿದ್ದ ನೀರಿನ ಹನಿಗಳ ಹಾಗೆ ಆವಿಯಾಗುತ್ತಿವೆ. ಏಪ್ರಿಲ್, ಮೇ ಹೇಗಿರಬಹುದೆಂಬುದನ್ನು ಊಹಿಸಿದರೇ ಬೆವರು ಟಿಸಿಲೊಡೆಯುತ್ತವೆ. ಇಷ್ಟೂ ಸಾಲದೆಂಬಂತೆ ಚುನಾವಣೆ ಕಾವು ಕೊಡಲಾರಂಬಿಸಿದೆ. ಬಿಸಿಲಿನ ಝಳ ಹಾಗೂ ಚುನಾವಣೆ ಕಾವಿನ ಜುಗಲ್‌ಬಂದಿಯಲ್ಲಿ ಜನಸಾಮಾನ್ಯ ಚಕ್ರದಡಿಗೆ ಸಿಕ್ಕ ಲಿಂಬೆಹಣ್ಣಿನಂತಾಗಿದ್ದಾನೆ. ಎಲ್ಲ ರಾಜಕೀಯ 35348http://kannada.oneindia.com/img/2009/03/19-jyoti-basu1.jpg97595manmohan singhಬೆಂಗಳೂರಿಗೆ ಎನ್ಎಸ್ ಜಿ ಘಟಕ ಮಂಜೂರು?/news/2009/01/06/will-centre-set-up-nsg-unit-in-bengaluru.htmlನವದೆಹಲಿ, ಜ. 6 : ಸಾಫ್ಟವೇರ್ ತಂತ್ರಜ್ಞರ ತಾಣವಾಗಿರುವ ಬೆಂಗಳೂರಿಗೆ ರಾಷ್ಟ್ರೀಯ ತನಿಖಾ ಘಟಕ (ಎನ್ಎಸ್ ಜಿ) ಸ್ಥಾಪಿಸಬೇಕು ಎನ್ನುವುದು ಎಲ್ಲರ ಅನಿಸಿಕೆ ಹಾಗೂ ಒತ್ತಾಯವಾಗಿದೆ. ತಾಂತ್ರಿಕ, ವೈಜ್ಞಾನಿಕ ಹಾಗೂ ಶೈಕ್ಷಣಿಕವಾಗಿ ಮುಂದುವರಿದಿರುವ ಬೆಂಗಳೂರಿನ ರಕ್ಷಣೆಗೆ ಎನ್ಎಸ್ ಜಿ ಬೇಕೆಬೇಕು ಎಂದು ಕರ್ನಾಟಕ ಸರ್ಕಾರ ಹಾಗೂ ದೇಶದ ಪ್ರಮುಖ ಐಟಿ ಕಂಪನಿಗಳ ಮುಖ್ಯಸ್ಥರ ಒಕ್ಕೊರಲಿನ ಆಗ್ರಹವೂ ಕೇಂದ್ರ 33913http://kannada.oneindia.com/img/2009/01/06-cm-meets-pm1.jpg97595manmohan singhಯುಪಿಎ ಸರ್ಕಾರದ ಸಾಧನೆಯೇ ಶ್ರೀರಕ್ಷೆ, ಸೋನಿಯಾ/news/2009/02/25/end-factionalism-in-congress-sonia-gandhi.htmlನವದೆಹಲಿ, ಫೆ. 25 : ಪಕ್ಷದಲ್ಲಿರುವ ಮುಖಂಡರು ಒಳಜಗಳಗಳನ್ನು ಮರೆತು ಏಕತೆಯಿಂದ ಲೋಕಸಭೆ ಚುನಾವಣೆಯಲ್ಲಿ ಹೋರಾಟ ನಡೆಸುವಂತೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಪಕ್ಷದ ಮುಖಂಡರಿಗೆ ಕಿವಿಮಾತು ಹೇಳಿದರು. ಕಾಂಗ್ರೆಸ್ಸಿನ 14ನೇ ಸಂಸದೀಯ ಮಂಡಳಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮನಸ್ತಾಪ, ವೈಮನಸ್ಸು ಕೈಬಿಟ್ಟು ಒಗ್ಗಟ್ಟಿನಿಂದ ಚುನಾವಣೆ ಎದುರಿಸಿದರೆ ಮಾತ್ರ ಜಯಗಳಿಸಲು ಸಾಧ್ಯ ಎಂದರು. ಕಾಂಗ್ರೆಸ್ ನೇತೃತ್ವದ 34859http://kannada.oneindia.com/img/2009/02/25-sonia-gandhi.jpg97595manmohan singhಫೆ.26 ಯುಪಿಎ ಸರ್ಕಾರದ ಅಂತಿಮ ಅಧಿವೇಶನ/news/2009/02/26/farewell-session-of-14th-lok-sabha-on-feb26-upa.htmlನವದೆಹಲಿ. ಫೆ. 26 : 14 ನೇ ಲೋಕಸಭೆ ಅಧಿವೇಶನದ ಕೊನೆಯ ದಿನ ಆರಂಭವಾಗಿದ್ದು, ಯಪಿಎ ಸರ್ಕಾರದ ಅಂತಿಮ ಅಧಿವೇಶನ ಇದಾಗಲಿದೆ. ಈ ಹಿನ್ನೆಲೆಯಲ್ಲಿ ತಮ್ಮ ಸರ್ಕಾರದ ಅಂತಿಮ ಅಧಿವೇಶನದಲ್ಲಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಪಾಲ್ಗೊಂಡು ಸಂಸತ್ತು ಉದ್ದೇಶಿಸಿ ಭಾಷಣ ಮಾಡುವ ಸಾಧ್ಯತೆ ಇದೆ. ಪ್ರಧಾನಮಂತ್ರಿಯವರಿಗೆ ಕನಿಷ್ಠ ಎರಡು ತಿಂಗಳು ವಿಶ್ರಾಂತಿ ಅವಶ್ಯಕತೆ ಇದ್ದು, ಇಂದಿನ ಅಧಿವೇಶನ 34881http://kannada.oneindia.com/img/2009/02/26-india-parliament.jpg97595manmohan singhನಿಮ್ಮ ಸಲಹೆ ಬೇಕಿಲ್ಲ, ಮುಷರಫ್ ಗೆ ಮದಾನಿ ತಿರುಗೇಟು/news/2009/03/09/we-donot-need-musharraf-advice-says-madani.htmlನವದೆಹಲಿ, ಮಾ. 9 : ಭಾರತದಲ್ಲಿರುವ ಮುಸ್ಲಿಂ ತಮ್ಮ ಸಮಸ್ಯೆಗಳನ್ನು ತಾವೇ ಬಗೆಹರಿಸಿಕೊಳ್ಳುವಷ್ಟು ಶಕ್ತರಿದ್ದಾರೆ. ಇಲ್ಲಿನ ಮುಸ್ಲಿಂರನ್ನು ಒಡೆಯಲು ಪ್ರಯತ್ನಿಸಬೇಡಿ. ನಿಮ್ಮ ಪುಕ್ಕಟೆ ಸಲಹೆ ನಮಗೆ ಬೇಕಿಲ್ಲ ಎಂದು ರಾಜ್ಯ ಸಭಾ ಸದಸ್ಯ ಹಾಗೂ ಜಮಾತ್-ಇ-ಉಲೇಮಾ-ಇ-ಹಿಂದ್ ನ ಮುಖಂಡ ಮೆಹಮೂದ್ ಮದಾನಿ ಅವರು ಮುಷರಫ್ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ನವದೆಹಲಿಗೆ ಭೇಟಿ ನೀಡಿ ಸಂವಾದವೊಂದರಲ್ಲಿ ಪಾಲ್ಗೊಂಡಿದ್ದ ಪಾಕಿಸ್ತಾನದ 35098http://kannada.oneindia.com/img/2009/03/09-maulana-mahmood-madani1.jpg97595manmohan singhಮನಮೋಹನ್ ಸಿಂಗ್ ಮೇಲೆ ಭಾರಿ ಬೆಟ್ಟಿಂಗ್/news/2009/03/14/bookies-back-manmohan-for-another-term.htmlಮುಂಬೈ, ಮಾ.14: ಲೋಕಸಭೆ ಚುನಾವಣೆಗಳು ಬಂತೆಂದರೆ ಸಾಕು ದೇಶದೆಲ್ಲೆಡೆ ಹಬ್ಬದ ಸಂಭ್ರಮ ಸಡಗರ ನೆಲೆಸುತ್ತದೆ. ಚುನಾವಣೆಯಲ್ಲಿ ಕಪ್ಪುಹಣದ ಚಲಾವಣೆ, ಪ್ರಸ್ತುತ ಆರ್ಥಿಕ ಹಿಂಜರಿತದಲ್ಲಿ ಪ್ಲಸ್ ಪಾಯಿಂಟ್ ಆಗಲಿದೆ. ಇನ್ನು ಪ್ರಚಾರಕ್ಕಾಗಿ, ಬ್ಯಾನರ್, ಬಂಟಿಂಗ್ ಗಳಿಗೆ, ಪಕ್ಷದ ಕಾರ್ಯಕರ್ತರಿಗೆ, ವಾಹನಗಳ ಬಾಡಿಗೆ... ಹೀಗೆ ಪ್ರತಿ ಹಂತದಲ್ಲೂ ಝಣ ಝಣ ಎಂದು ಕುರುಡು ಕಾಂಚಾಣ ಕುಣಿಯಲಿದೆ. 35215http://kannada.oneindia.com/img/2009/03/14-manmohan.jpg108621prime ministerಅಡ್ವಾಣಿ ಪ್ರಧಾನಮಂತ್ರಿ ಆಗೋದು ಗ್ಯಾರಂಟಿ/news/2009/04/02/yeddyurappa-predicts-advani-becoming-pm-of-india.htmlರಾಯಚೂರು, ಏ. 2 : ಕಾಂಗ್ರೆಸ್ ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ಅವರು ನೀಡಿರುವ ಹೇಳಿಕೆ ಅಕ್ಷಮ್ಯ. ಆದರೆ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ನೀಡುತ್ತಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ. ಲೋಕಸಭೆ ಚುನಾವಣೆಯಲ್ಲಿ ಜನತೆಯೇ ಅವರಿಗೆ ತಕ್ಕೆ ಪಾಠ ಕಲಿಸುತ್ತಾರೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಕಿಡಿಕಾರಿದರು. ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ ನಾಯಕ 35672http://kannada.oneindia.com/img/2009/04/02-yediyurappa-oath1.jpg108621prime ministerರಾಜಕೀಯಕ್ಕೆ ಪ್ರಿಯಾಂಕಾ ಗಾಂಧಿ? /news/2009/04/13/rahul-gandhi-will-be-a-good-pm-says-priyanka.htmlಅಮೇಥಿ, ಏ. 13 : ಕಾಂಗ್ರೆಸ್ ಪಕ್ಷದ ಯುವರಾಜ ರಾಹುಲ್ ಗಾಂಧಿ ಭಾರತದ ದೇಶದ ಪ್ರಧಾನಮಂತ್ರಿಯಾಗುವುದು ಖಚಿತ ಎಂದು ಸಹೋದರಿ ಪ್ರಿಯಾಂಕಾ ಗಾಂಧಿ ಭವಿಷ್ಯ ನುಡಿದಿದ್ದಾರೆ. ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಪ್ರಿಯಾಂಕಾ ಕಾಂಗ್ರೆಸ್ ಪಕ್ಷದ ಮುಂದಿನ ಪ್ರಧಾನಮಂತ್ರಿ ಅಭ್ಯರ್ಥಿ ಮನಮೋಹನ್ ಸಿಂಗ್ ಎಂಬುದನ್ನು ಹೇಳುವ ಮೂಲಕ ಕ್ಷಣ ಕಾಲ ಹುಟ್ಟಿದ್ದ ಹೊಸಗಾಳಿಗೆ ತೆರೆ ಎಳೆದರು. ಮುಂದಿನ 35897http://kannada.oneindia.com/img/2009/04/13-rahul-gandhi1.jpg108621prime ministerಪ್ರಧಾನಿ ಪಟ್ಟಕ್ಕೆ ಸಿಂಗ್ ಸೂಕ್ತ ವ್ಯಕ್ತಿ : ರಾಹುಲ್/news/2009/05/03/manmohan-singh-is-the-right-candidate-for-pm-rahul.htmlನವದೆಹಲಿ, ಮೇ 3 : ಪ್ರಧಾನಿ ಪಟ್ಟವನ್ನು ಕಾಂಗ್ರೆಸ್ ನ ಯುವನಾಯಕರಿಗೆ ಬಿಟ್ಟುಕೊಡಲು ಸಿದ್ಧರಿರುವುದಾಗಿ ಹೇಳಿದ ಬೆನ್ನ ಹಿಂದೆಯೇ ಪ್ರಧಾನಿ ಪಟ್ಟಕ್ಕೆ ಡಾ. ಮನಮೋಹನ ಸಿಂಗ್ ಅವರೇ ಸೂಕ್ತ ಮತ್ತು ಅತ್ಯುತ್ತಮ ಅಭ್ಯರ್ಥಿ ಎಂದು ಹೇಳಿರುವ ರಾಹುಲ್ ಗಾಂಧಿ ಗೊಂದಲ ಶಮನಕ್ಕೆ ಮುಂದಾಗಿದ್ದಾರೆ.ಡಾ. ಮನಮೋಹನ ಸಿಂಗ್ ಅವರು ಪ್ರಧಾನಿ ಗದ್ದುಗೆಗೆ ಕಾಂಗ್ರೆಸ್ ಪಕ್ಷದ ಸರ್ವಾನುಮತದ ಅಭ್ಯರ್ಥಿಯಾಗಿದ್ದಾರೆ. ಈ 36365http://kannada.oneindia.com/img/2009/05/03-rahul-gandhi1.jpg108621prime ministerಮಹಾನ್ ಭಾರತಕ್ಕೆ ಎಷ್ಟೊಂದು ಪ್ರಧಾನಿಗಳು!/column/humor/2009/0509-who-will-become-prime-minister-of-india.htmlಭಾರತದ ಪ್ರಧಾನಮಂತ್ರಿಯ ಹುದ್ದೆಗೆ ಈ ಸಲ ಭಾರೀ ಪೈಪೋಟಿ ಏರ್ಪಟ್ಟಿದೆ. ಜನಪ್ರತಿನಿಧಿಗಳನ್ನು ಜನರೇ ಆರಿಸಿದರೂ ಪ್ರಧಾನಿಯನ್ನು ಆರಿಸುವ ಅಧಿಕಾರ ಸಾಮಾನ್ಯನಿಗಿಲ್ಲ, ವಿಪರ್ಯಾಸ. ಯಾರು ಯಾರೊಂದಿಗೆ ಕೈಹಿಡಿದು ಯಾರನ್ನು ಪ್ರಧಾನಿ ಮಾಡುತ್ತಾರೋ ಯಾರಿಗೆ ಗೊತ್ತು. ಅಂತೂ ಪ್ರಧಾನಿ ಹುದ್ದೆಗಾಗಿ ಅಂತಿಂಥವರ ಜೊತೆ ಎಂತೆಂಥವರೂ ಪೈಪೋಟಿಗೆ ಬಿದ್ದಿದ್ದಾರೆ. ಯಾರ್ಯಾರಿದ್ದಾರೆ ನೀವೇ ನೋಡಿ.* ರಾಮ್, ಬೆಂಗಳೂರು'ಮನಮೋಹಕ'ವಾಗಿ ದೇಶ ಆಳಿದ್ದಾರೆ, ಆದ್ದರಿಂದ ಮನಮೋಹನ್ 36504http://kannada.oneindia.com/img/2009/05/09-politicians1.jpg108621prime ministerರಾಹುಲ್ ಗಾಂಧಿಯತ್ತ ಕಾಂಗ್ರೆಸ್ ಚಿತ್ತ/cj/chidambar-baikampady/2009/0512-all-eyes-on-rahul-gandhi.htmlಕಾಂಗ್ರೆಸ್ ಪಕ್ಷದಲ್ಲಿ ಡಾ.ಸಿಂಗ್ ಹೊರತುಪಡಿಸಿದರೆ ಎಲ್ಲರೂ ಒಪ್ಪುವ ನಾಯಕ ಅಂತಾದರೆ ಸೋನಿಯಾರನ್ನು ಬಿಟ್ಟರೆ ರಾಹುಲ್ ಗಾಂಧಿ ಮಾತ್ರ. ಇಂಥ ಪರಿಸ್ಥಿತಿ ಫಲಿತಾಂಶದ ಬಳಿಕ ನಿರ್ಮಾಣವಾದರೆ ಅಚ್ಚರಿ ಪಡಬೇಕಾಗಿಲ್ಲ. ಡಾ.ಸಿಂಗ್ ಪ್ರಧಾನಿಯಾದರೆ ಬೆಂಬಲವಿಲ್ಲ, ಅವರಲ್ಲದ ನಾಯಕ ಆದರೆ ಓಕೆ ಅಂತ ಎಡರಂಗ ಕ್ಯಾತೆ ತೆಗೆದರೆ ಕಾಂಗ್ರೆಸ್ ಪಕ್ಷದಲ್ಲಿ ರಾಹುಲ್ ಹೆಸರು ತೇಲಿಬರವುದು ಗ್ಯಾರಂಟಿ. ಇದಕ್ಕೆ ಪೂರಕವಾಗಿ ಕಾಂಗ್ರೆಸ್ಸಿನಲ್ಲಿಯೇ ಸಾಕಷ್ಟು 36552http://kannada.oneindia.com/img/2009/05/12-rahul-gandhi3.jpgnews"> ಮರುಆಯ್ಕೆಯಾಗುವ ಮೊದಲೇ ಗುಳೆಕಿತ್ತ ಪ್ರಧಾನಿ | Manmohan Singh | Prime Minister | Residence | Lok Sabha Election 2009 - ಮರುಆಯ್ಕೆಯಾಗುವ ಮೊದಲೇ ಗುಳೆಕಿತ್ತ ಪ್ರಧಾನಿ - Kannada Oneindia

ಮರುಆಯ್ಕೆಯಾಗುವ ಮೊದಲೇ ಗುಳೆಕಿತ್ತ ಪ್ರಧಾನಿ

Manmohan Singh
ನವದೆಹಲಿ, ಮೇ 15 : 15ನೇ ಲೋಕಸಭೆ ಚುನಾವಣೆಯ ಮತೆ ಎಣಿಕೆ ಪ್ರಾರಂಭವಾಗಲು ಕ್ಷಣಗಣನೆ ಪ್ರಾರಂಭವಾಗಿರುವ ಹೊತ್ತಲ್ಲೇ ಪ್ರಧಾನಿ ಮನಮೋಹನ ಸಿಂಗ್ ಅವರು ಅಧಿಕೃತ ನಿವಾಸ ಬಿಟ್ಟು ಬೇರೆ ಮನೆ ಹುಡುಕುತ್ತಿರುವುದು ಕಾಂಗ್ರೆಸ್ ಪಾಳಯ ಸೇರಿದಂತೆ ರಾಜಕೀಯ ಅಂಗಳದಲ್ಲಿ ಭಾರೀ ಸುದ್ದಿಗೆ ಗ್ರಾಸವಾಗಿದೆ.

ಮುಂದಿನ ಪ್ರಧಾನಿ ತಾವೇ ಆಗುವ ಕುರಿತು ಸಿಂಗ್ ಅವರಿಗೇ ಅನುಮಾನಗಳೆದ್ದಿರುವ ಕಾರಣ ಮನೆ ಬದಲಾಯಿಸಲು ಅವರು ಮನಸು ಮಾಡಿರುವುದಾಗಿ ಕೇಳಿಬರುತ್ತಿದೆ. ಒಂದು ವೇಳೆ ಯುಪಿಎ ಮೈತ್ರಿಕೂಟಕ್ಕೆ ಬೆಂಬಲ ಸೂಚಿಸುವ ಮೊದಲು ಎಡರಂಗ ಪ್ರಧಾನಿ ಅಭ್ಯರ್ಥಿ ಬದಲಾವಣೆ ಬಯಸುವ ಊಹಾಪೋಹ ಎದ್ದಿರುವುದರಿಂದ ಅವರು ಈ ನಿರ್ಣಯಕ್ಕೆ ಬಂದಿದ್ದಾರೆನ್ನಲಾಗಿದೆ. ಅಮೆರಿಕದೊಂದಿಗೆ ಅಣುಬಂಧಕ್ಕೆ ಸಿಂಗ್ ಪಟ್ಟುಹಿಡಿದಿದ್ದರಿಂದ ಎಡರಂಗ ಮುನಿಸಿಕೊಂಡು ಯುಪಿಎ ಮೈತ್ರಿಯನ್ನು ತೊರೆದಿತ್ತು.

ಪ್ರಧಾನಿಯ ವಿಶೇಷ ಭದ್ರತಾ ತಂಡ ಈಗಾಗಲೆ ದೆಹಲಿಯಲ್ಲಿ ನಾಲ್ಕು ಬಂಗಲೆಗಳನ್ನು ನೋಡಿದೆ. ಹುದ್ದೆಯಲ್ಲಿರುವಾಗಲೇ ಪ್ರಧಾನಿಯೊಬ್ಬರು ಅಧಿಕೃತ ನಿವಾಸ ತ್ಯಜಿಸಲು ಇಚ್ಛಿಸಿದ್ದು ಇದೇ ಮೊದಲು.

ಈ ಬೆಳವಣಿಗೆಯಿಂದ ಗಲಿಬಿಲಿಗೊಳಗಾಗಿರುವ ಕಾಂಗ್ರೆಸ್, ಇದಕ್ಕೆ ಬೇರೇನೂ ಅರ್ಥ ಕಲ್ಪಿಸಬಾರದೆಂದು ತೇಪೆ ಹಚ್ಚಲು ಮುಂದಾಗಿದೆ. ಕಾಂಗ್ರೆಸ್ ಸೋಲುವ ಭೀತಿ ಎದುರಿಸಿದ್ದರಿಂದ ಪ್ರಧಾನಿ ಹೀಗೆ ಮಾಡಿದ್ದಾರೆಂದು ಭಾವಿಸಬಾರದು. ಮರು ಆಯ್ಕೆಯಾಗುವವರೆಗೆ ಕ್ಷಣಕಾಲವೂ ಅಧಿಕೃತ ನಿವಾಸದಲ್ಲಿ ಇರಲು ಅವರು ಬಯಸದ್ದರಿಂದ ಹೀಗೆ ಮಾಡಿದ್ದಾರೆ ಎಂದು ಕಾಂಗ್ರೆಸ್ ವಕ್ತಾರರು ಹೇಳಿಕೆ ನೀಡಿದ್ದಾರೆ.

ಹೊಂದಾಣಿಕೆ, ಮೈತ್ರಿಕೂಟ, ಒಳಹೊರ ಲೆಕ್ಕಾಚಾರ, ಸಾಧಕ ಬಾಧಕಗಳ ಬಗ್ಗೆ ಮನಮೋಹನ ಸಿಂಗ್ ಅವರು ತಲೆಕೆಡಿಸಿಕೊಂಡಿಲ್ಲ. ಬಂದ ಪರಿಸ್ಥಿತಿಯನ್ನು ಎದುರಿಸುವ ನಿಟ್ಟಿನಲ್ಲಿ ಮುಂದಿನ ಪ್ರಧಾನಿಗೆ ಜಾಗ ಖಾಲಿ ಮಾಡಿಕೊಟ್ಟಿದ್ದಾರೆ. ಪ್ರಧಾನಿ ಸ್ಥಾನಕ್ಕೆ ಯುವ ನಾಯಕ ರಾಹುಲ್ ಗಾಂಧಿ ಅವರನ್ನು ಹೆಸರಿಸಿ ಸಿಂಗ್ ಅವರೇ ಕೆಲ ದಿನಗಳ ಹಿಂದೆ ಗೊಂದಲ ಸೃಷ್ಟಿಸಿದ್ದರು. ಎಡಪಕ್ಷಗಳು ಕೂಡ ಅವರೇ ಪ್ರಧಾನಿಯಾಗುವ ಕುರಿತು ಒಲವು ತೋರಿಸುತ್ತಿಲ್ಲ.

(ಏಜೆನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+