ಸಿಎಂ ಮನೆ ಬಳಿ ಗೌಡ್ರರಿಂದ ರುದ್ರಯಾಗ
ಬೆಂಗಳೂರು, ಮೇ. 12 : ಲೋಕಸಭೆ ಚುನಾವಣೆ ಫಲಿತಾ೦ಶಕ್ಕೆ ಕೇವಲ ಐದು ದಿನ ಬಾಕಿ ಇರುವಾಗ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ನಡೆಸಿದ ಅತಿರುದ್ರ ಮಹಾಯಾಗ ಕುತೂಹಲಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಧಿಕೃತ ನಿವಾಸದ ಪಕ್ಕದಲ್ಲೇ ಇರುವ ಸುಬ್ರಮಣ್ಯಸ್ವಾಮಿ ದೇವಾಲಯದಲ್ಲಿ ಈ ಯಾಗ ನಡೆದಿದ್ದು, ಗೌಡರು ಏಕಾಂಗಿಯಾಗಿ ಇದರಲ್ಲಿ ಭಾಗವಹಿಸಿದ್ದರು.
ಹೋಮ, ಹವನ, ಯಜ್ಞ, ಯಾಗಾದಿ ದೇವೇಗೌಡರಿಗೆ ಹೊಸದೇನು ಅಲ್ಲ. ಆದರೆ ಮುಖ್ಯಮಂತ್ರಿ ನಿವಾಸ ಪಕ್ಕ ನಡೆಸಿದ ಈ ಯಾಗ ಹಲವು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಈ ದೇವಾಲಯದ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಲಾಗಿತ್ತು. ಎಂದಿನಂತೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರವೇಶವಿರಲಿಲ್ಲ. ಪಕ್ಷದ ಕೆಲ ಕಾರ್ಯಕರ್ತರು ಮಾತ್ರ ದೇವಾಲಯದ ಅಕ್ಕಪಕ್ಕದಲ್ಲಿದ್ದರು. ಮಧ್ಯಾಹ್ನ 3 ಘಂಟೆಯ ವೇಳೆಗೆ ಗೌಡರು ದೇವಾಲಯದಿಂದ ಹೊರಟರು. ಈ ಅತಿರುದ್ರ ಮಹಾಯಾಗಕ್ಕೆ ದೇವಾಲಯದ ಅರ್ಚಕರಲ್ಲದೆ ತಮಿಳುನಾಡಿನಿಂದ ಇಬ್ಬರು ಮತ್ತು ಕೇರಳದಿಂದ ಒಬ್ಬರು ಬಂದಿದ್ದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications