ಸಿಎಂ ಮನೆ ಬಳಿ ಗೌಡ್ರರಿಂದ ರುದ್ರಯಾಗ

ಬೆಂಗಳೂರು, ಮೇ. 12 : ಲೋಕಸಭೆ ಚುನಾವಣೆ ಫಲಿತಾ೦ಶಕ್ಕೆ ಕೇವಲ ಐದು ದಿನ ಬಾಕಿ ಇರುವಾಗ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ನಡೆಸಿದ ಅತಿರುದ್ರ ಮಹಾಯಾಗ ಕುತೂಹಲಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಧಿಕೃತ ನಿವಾಸದ ಪಕ್ಕದಲ್ಲೇ ಇರುವ ಸುಬ್ರಮಣ್ಯಸ್ವಾಮಿ ದೇವಾಲಯದಲ್ಲಿ ಈ ಯಾಗ ನಡೆದಿದ್ದು, ಗೌಡರು ಏಕಾಂಗಿಯಾಗಿ ಇದರಲ್ಲಿ ಭಾಗವಹಿಸಿದ್ದರು.

ಹೋಮ, ಹವನ, ಯಜ್ಞ, ಯಾಗಾದಿ ದೇವೇಗೌಡರಿಗೆ ಹೊಸದೇನು ಅಲ್ಲ. ಆದರೆ ಮುಖ್ಯಮಂತ್ರಿ ನಿವಾಸ ಪಕ್ಕ ನಡೆಸಿದ ಈ ಯಾಗ ಹಲವು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಈ ದೇವಾಲಯದ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಲಾಗಿತ್ತು. ಎಂದಿನಂತೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರವೇಶವಿರಲಿಲ್ಲ. ಪಕ್ಷದ ಕೆಲ ಕಾರ್ಯಕರ್ತರು ಮಾತ್ರ ದೇವಾಲಯದ ಅಕ್ಕಪಕ್ಕದಲ್ಲಿದ್ದರು. ಮಧ್ಯಾಹ್ನ 3 ಘಂಟೆಯ ವೇಳೆಗೆ ಗೌಡರು ದೇವಾಲಯದಿಂದ ಹೊರಟರು. ಈ ಅತಿರುದ್ರ ಮಹಾಯಾಗಕ್ಕೆ ದೇವಾಲಯದ ಅರ್ಚಕರಲ್ಲದೆ ತಮಿಳುನಾಡಿನಿಂದ ಇಬ್ಬರು ಮತ್ತು ಕೇರಳದಿಂದ ಒಬ್ಬರು ಬಂದಿದ್ದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+