ಗಣಿಗಾರಿಕೆ ನಿಲ್ಲಿಸಲು ಸುಪ್ರಿಂಕೋರ್ಟ್ ಹೇಳಿಲ್ಲ, ರೆಡ್ಡಿ

ಈ ವಿವಾದ ಅಂತರಾಜ್ಯ ವಿಷಯವಲ್ಲ. ಆಂಧ್ರಪ್ರದೇಶದೊಳಗೇ ಇರುವ ಗಣಿಗಳಿಗೆ ಸಂಬಂದಿಸಿದ್ದಾಗಿದೆ. ಈ ಬಗ್ಗೆ ಸಮೀಕ್ಷೆ ನಡೆಸುವಂತೆ ಆಂಧ್ರಪ್ರದೇಶ ಹೈಕೋರ್ಟ್ ವಿಭಾಗೀಯ ಪೀಠ ನೀಡಿದ ಆದೇಶದಂತೆ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಿ ಈ ಹಿಂದೆ ಕಂದಾಯ, ಅರಣ್ಯ, ಗಣಿ ಮತ್ತು ಭೂವಿಜ್ಞಾನ ಇಲಾಖೆಗಳ ವತಿಯಿಂದ ನಡೆಸಲಾಗಿದೆ. ಈ ಕುರಿತ ವರದಿಯನ್ನು ಆಂಧ್ರಪ್ರದೇಶ ಹೈಕೋರ್ಟ್ ಗೆ ಸಲ್ಲಿಸಲಾಗಿದೆ ಎಂದು ಅವು ತಿಳಿಸಿದರು.
ಆರು ವಾರದೊಳಗೆ ಸಮೀಕ್ಷೆ ವರದಿ ಸಲ್ಲಿಸಬೇಕು ಎಂದು ಸುಪ್ರಿಂಕೋರ್ಟ್ ಆದೇಶ ನೀಡಿದೆ. ಆದರೆ ಸಮೀಕ್ಷೆಯನ್ನು ಭಾರತೀಯ ಸರ್ವೆ ಇಲಾಖೆಯಿಂದಲೇ ಮಾಡಿಸಬೇಕು ಅಥವಾ ರಾಜ್ಯ ಸರಕಾರದಿಂದ ಮಾಡಬೇಕು ಎಂಬ ಯಾವುದೇ ನಿರ್ದೇಶನವನ್ನು ಅದು ನೀಡಿಲ್ಲ. ಕಾನೂನಿನ ಪ್ರಕಾರವೇ ತಾವು ಗಣಿಗಾರಿಕೆ ನಡೆಸುತ್ತಿದ್ದು, ಎಲ್ಲೂ ಅಕ್ರಮ ನಡೆದಿಲ್ಲ. ಆದ್ದರಿಂದ ಗಣಿಗಾರಿಕೆ ಸ್ಥಗಿತಗೊಳಿಸುವ ಪ್ರಶ್ನೆಯೇ ಇಲ್ಲ ಎಂದು ರೆಡ್ಡಿ ಸ್ಪಷ್ಟಪಡಿಸಿದರು.
(ದಟ್ಸ್ ಕನ್ನಡ ವಾರ್ತೆ)
ಗಣಿಗಾರಿಕೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ : ರೆಡ್ಡಿ












Click it and Unblock the Notifications