ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸ್ವಿಸ್ ಬ್ಯಾಂಕ್ ನಲ್ಲಿರುವ ಕಪ್ಪುಹಣ ತರುತ್ತೇವೆ: ಕೇಂದ್ರ
ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಇಂದು ಅಫಿಡವಿಟ್ ಸಲ್ಲಿಸಿದೆ. ಸ್ವಿಸ್ ಬ್ಯಾಂಕ್ ನಲ್ಲಿನ ಭಾರತೀಯರ ರಹಸ್ಯ ಖಾತೆಗಳಲ್ಲಿರುವ ಹಣವನ್ನು ಹೊರತೆಗೆಯುವ ಕಾರ್ಯಗಳು ನಡೆಯುತ್ತಿವೆ ಎಂದು ಕೇಂದ್ರ ತನ್ನ ಅಫಿಡವಿಟ್ ನಲ್ಲಿ ಹೇಳಿದೆ. ಜೇಠ್ಮಲಾನಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಕೆ ಜಿ ಬಾಲಕೃಷ್ಣನ್ ನೇತೃತ್ವದ ವಿಭಾಗೀಯ ಕೈಗೆತ್ತಿಕೊಂಡಿತ್ತು.
ಆದರೆ ಈಗ ದೇಶದಲ್ಲಿ ಚುನಾವಣೆಗಳು ನಡೆಯುತ್ತಿವೆ. ಈಗ ಇದರ ವಿಚಾರಣೆಯ ಔಚಿತ್ಯವೇನು ಎಂದು ಪ್ರಶ್ನಿಸಿದ್ದರು ಹೆಚ್ಚುವರಿ ಸಾಲಿಸಿಟರ್ ಜೆನರಲ್ ಗೋಪಾಲ ಸುಬ್ರಹ್ಮಣ್ಯಂ. ಹಾಗಾಗಿ ಸರ್ವೋಚ್ಚ ನ್ಯಾಯಾಲಯ ವಿಚಾರಣೆಯನ್ನು ಮೇ 4ಕ್ಕೆ ಮುಂದೂಡಿತು. ಆದರೆ ಫಿರ್ಯಾದಿ ಜೇಠ್ಮಲಾನಿ ಅವರು ಸರಕಾರ ಈ ಬಗ್ಗೆ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಆಗ್ರಹಿಸಿದ್ದರು. ಹಾಗಾಗಿ ಈ ಸಂಬಂಧ ಸುಪ್ರೀಂ ಕೋರ್ಟ್ ಗೆ ಕೇಂದ್ರ ಸರಕಾರ ಅಫಿಡವಿಟ್ ಸಲ್ಲಿಸಿದೆ.
(ಏಜೆನ್ಸೀಸ್)
ನವದೆಹಲಿ new delhi supreme court ಸುಪ್ರೀಂ ಕೋರ್ಟ್ ಕೆ ಜಿ ಬಾಲಕೃಷ್ಣನ್ swiss bank ಸ್ವಿಸ್ ಬ್ಯಾಂಕ್ ರಾಮ್ ಜೇಠ್ಮಲಾನಿ ಕಪ್ಪುಹಣ ram jethmalani kg balakrishnan
Story first published: Saturday, May 2, 2009, 17:25 [IST]