ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮೇ 8 ರಂದು ಸಾರಿಗೆ ಅದಾಲತ್
ಬೆಂಗಳೂರು, ಮೇ.1: ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ಸಾರ್ವಜನಿಕ ಕುಂದುಕೊರತೆ ಹಾಗೂ ಸಲಹೆಗಳನ್ನು ಪಡೆಯುವ ಸಲುವಾಗಿ ಸಾರಿಗೆ ಅದಾಲತ್ ಅನ್ನು ಪ್ರತಿ ಎರಡು ತಿಂಗಳಿಗೊಮ್ಮೆ ಹಮ್ಮಿಕೊಳ್ಳುತ್ತಿದೆ.
ಅದರಂತೆ ಮೇ 8 ರಂದು ಮಧ್ಯಾಹ್ನ 3.00 ಗಂಟೆಗೆ ಪ್ರಾದೇಶಿಕ ಸಾರಿಗೆ ಕಚೇರಿ, ಬೆಂಗಳೂರು (ಕೇಂದ್ರ) ಬಿಡಿಎ. ಕಾಂಪ್ಲೆಕ್ಸ್, ಕೋರಮಂಗಲ ಬೆಂಗಳೂರು 34 ಸಭಾಂಗಣ ದಲ್ಲಿ ಸಾರ್ವಜನಿಕರ ಕುಂದುಕೊರತೆಯನ್ನು ಆಲಿಸಲು ಏರ್ಪಡಿಸಲಾಗಿದೆ, ಈ ಕಚೇರಿ ವ್ಯಾಪ್ತಿಗೆ ಬರುವ ಸಾರ್ವಜನಿಕರು ತಮ್ಮ ಕುಂದುಕೊರತೆ ಮತ್ತು ಸಲಹೆಗಳನ್ನು ಅದಾಲತ್ನಲ್ಲಿ ಪಾಲ್ಗೊಂಡು ನೀಡಲು ಮನವಿ ಮಾಡಲಾಗಿದೆ.
(ದಟ್ಸ್ ಕನ್ನಡ ವಾರ್ತೆ)
Comments
Story first published: Friday, May 1, 2009, 12:45 [IST]