ಬೋಫೋರ್ಸ್ ಹಗರಣ: ಕ್ವಟ್ರೋಚಿ ಆರೋಪ ಮುಕ್ತ
ಸ್ವೀಡಿಷ್
ಮೂಲದ
ಬೋಫೋರ್ಸ್
ಫಿರಂಗಿಯನ್ನು
ಎಬಿ
ಬೋಫೋರ್ಸ್
ನಿಂದ
ಆಗಿನ
ಪ್ರಧಾನಿ
ರಾಜೀವ್
ಗಾಂಧಿ
ಖರೀದಿಸಿದ್ದರು.
ದಳ್ಳಾಳಿ
ಮುಖಾಂತರ
ನಡೆದ
ಈ
ವ್ಯವಹಾರದಲ್ಲಿ
ಅದಲು
ಬದಲಾದ
ಮೊತ್ತ
ಮಾತ್ರ
ಇಂದಿಗೂ
ಗೋಪ್ಯವಾಗಿ
ಉಳಿದಿದೆ.
ಆದರೆ
ಈ
ಬಗ್ಗೆ
ಅನೇಕ
ಪ್ರಶ್ನೆಗಳು
ಹುಟ್ಟಿದಾಗ
ವಿನ್
ಛಡ್ಡಾ(38
ಕೋ.ರು),
ಲಂಡನ್
ನ
ಹಿಂದೂಜಾ(16
ಕೋ.
ರು)
ಹಾಗೂ
ಏಇ
ಸರ್ವೀಸಸ್
ಗಳು
ದಳ್ಳಾಳಿ
ಹಣ
ಪಡೆದಿರುವುದು
ಖಾತ್ರಿಯಾಯಿತು.
ಆದರೆ
ಇವರುಗಳ
ಮೇಲೆ
ಯಾವುದೇ
ಕೇಸ್
ಊರ್ಜಿತಗೊಳ್ಳದೇ
ಖುಲಾಸೆಯಾಗಿ
ವರ್ಷಗಳು
ಕಳೆದಿವೆ.
1992 ರಲ್ಲಿ ಸ್ವೀಡನ್ ನ ಪತ್ರಿಕೆ ಡಜೆನ್ಸ್ ನೈಹೆಟೆರ್ ವರದಿಯಂತೆ, 'ಆಗಿನ ಪ್ರಧಾನಿ ರಾಜೀವ್ ಗಾಂಧಿಗೆ ಏಇ ಸರ್ವೀಸ್ ಮೂಲಕ ಬೋಫೋರ್ಸ್ ಖರೀದಿ ಸಾಧ್ಯವಾಯಿತು. ಹಾಗೂ ರಾಜೀವ್ ಗೆ ಅಪಾರ ಹಣ ಸಂದಾಯವಾಗಿದೆ ' ಎನ್ನಲಾಗಿದೆ. ಇದಲ್ಲದೆ ಹಗರಣದ ಪ್ರಮುಖ ಆರೋಪಿ ಕ್ವಟ್ರೋಚಿ, ಗಾಂಧಿ ಕುಟುಂಬಕ್ಕೆ ಪರಮಾಪ್ತನಾಗಿದ್ದು, ಆತನ ಕೊಲ್ಬಾರ್ ಇನ್ವೆಸ್ಟ್ ಮೆಂಟ್ ಹಾಗೂ ಸ್ಸಿಸ್ ಖಾತೆಗೆ ಅಪಾರ ಹಣ ಸಂದಾಯವಾಗಿರುವುದು ಇಂಟರ್ ಪೋಲ್ ನ ಶಂಕೆಗೆ ಕಾರಣವಾಗಿ, ತನಿಖೆ ಶುರುವಾಯಿತು.
ನಂತರ ಎನ್ ಡಿಎ ಅಧಿಕಾರದಲ್ಲಿದ್ದಾಗ ಮಲೇಷಿಯಾದಲ್ಲಿ ಕ್ವಟ್ರೋಚಿಯ ನೆಲೆಯನ್ನು ಕಂಡ ಭಾರತದ ಆಗಿನ ವಿದೇಶಾಂಗ ಸಚಿವ ಜಸ್ವಂತ್ ಸಿಂಗ್ ಅವರು ಸಿಬಿಐಗೆ ಈ ಬಗ್ಗೆ ವಿಷಯ ತಿಳಿಸಿ, ಕೇಸ್ ಮತ್ತೆ ಜೀವ ತಂದಿದ್ದರು. ಆದರೆ ಇಂದು ಕ್ವಟ್ರೋಚಿ ಆರೋಪ ಮುಕ್ತನಾಗಿ ಹೊರಬಂದಿದ್ದು, ಸಖೇದಾಶ್ಚರ್ಯದಾಯಕವಾಗಿದೆ.
(ಏಜೆನ್ಸೀಸ್)