ಗಣಿಗಾರಿಕೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ : ರೆಡ್ಡಿ

ಸುದ್ದಿಗೋಷ್ಠಿಯಲ್ಲಿ ಭಾನುವಾರ ಸಚಿವಾಲಯದ ಸೂಚನೆ ಕುರಿತು ಪ್ರತಿಕ್ರಿಯಿಸಿದ ರೆಡ್ಡಿ, ಅರಣ್ಯ ಸಂರಕ್ಷಣೆ ಕಾಯಿದೆ 1980ನ್ನು ಉಲ್ಲಂಘನೆ ಮಾಡಿ ಗಣಿಗಾರಿಕೆ ನಡೆಸುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ಓಬಳಾಪುರಂ ಮೈನಿಂಗ್ ಕಂಪನಿಯ 2 ಗಣಿ, ಅನಂತಪುರ ಮೈನಿಂಗ್ ಕಾರ್ಪೊರೇಷನ್ ಕಂಪನಿ, ಬಳ್ಳಾರಿ ಕಬ್ಬಿಣ ಅದಿರು ಮತ್ತು ವೈ ಮಹಾಬಳೇಶ್ವರಪ್ಪ ಅಂಡ್ ಸನ್ಸ್ ಕಂಪನಿಗಳ ಗಣಿಗಾರಿಕೆ ಸ್ದಗಿತಕ್ಕೆ ಕ್ರಮಕೈಗೊಳ್ಳುವಂತೆ ಪತ್ರದಲ್ಲಿ ಕೇಂದ್ರ ಸರಕಾರ ಸೂಚಿಸಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಯಡಿಯೂರಪ್ಪ, ನಮ್ಮ ಸರಕಾರ ಗಣಿಗಾರಿಕೆಗೆ ಅನುಮತಿ ನೀಡಿಯೇ ಇಲ್ಲ. ಕಾಂಗ್ರೆಸ್, ಜೆಡಿಎಸ್ ಅಕ್ರಮ ಗಣಿಗಾರಿಕೆಯನ್ನು ಪೋಷಿಸಿಕೊಂಡು ಬಂದಿವೆ. ಅದರ ಪಾಪದ ಫಲವಾಗಿದೆ ಇದಾಗಿದೆ. ಈ ಹಿಂದೆ ಮಾಡಿದ ಪಾಪವನ್ನು ಅನುಭವಿಸಲಿ ಬಿಡಿ ಎಂದರು. ಈ ಮಧ್ಯೆ ಗಣಿ ಅಮಾನತು ಸೂಚನೆ ಹೊರಬೀಳುತ್ತಿದ್ದಂತೆಯೇ ಕಾಂಗ್ರೆಸ್ ರೆಡ್ಡಿ ಸಚಿವರ ಮೇಲೆ ಮುಗಿಬಿದ್ದಿದ್ದು, ಪ್ರರಣದ ಹೊಣೆ ಹೊತ್ತು ರೆಡ್ಡಿ ಸಚಿವರು ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಮುಖಂಡ ವಿ ಎಸ್ ಉಗ್ರಪ್ಪ ಆಗ್ರಹಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಬಳ್ಳಾರಿ ರೆಡ್ಡಿ ಸಹೋದರರಗಣಿ ಗುತ್ತಿಗೆ ಅಮಾನತು












Click it and Unblock the Notifications