233685lok sabha election 2009ಮಂಕುಬೂದಿ ಎರಚಲು ಸಾಧ್ಯವಿಲ್ಲದ ಇಂಕು!/news/2009/03/14/indelible-ink-by-mysore-paints-and-varnish.htmlಮೈಸೂರು, ಮಾ. 14 : ಏಪ್ರಿಲ್ ಮತ್ತು ಮೇನಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬಹಳ ದಿನಗಳವರೆಗೆ ಅಳಿಸಲಾಗದ ಗುರುತು ಮೂಡಿಸುವ ಸಂಗತಿ ಯಾವುದು? ರೌಡಿಗಳ ದರ್ಬಾರು, ರಾಜಕಾರಣಿಗಳ ಭ್ರಷ್ಟಾಚಾರ ಯಾವುದೂ ಅಲ್ಲ. ಅದು, ಮತ ಹಾಕಿದ ನಂತರ ಎಡ ತೋರುಬೆರಳಿನ ಮೇಲೆ ಹಾಕುವ ಮಸಿಯ ಗುರುತು.ಹೌದು, ಪಂಚಾಯತಿ ಚುನಾವಣೆಯಿರಲಿ, ವಿಧಾನಸಭೆ ಅಥವಾ ಲೋಕಸಭೆ ಚುನಾವಣೆಯೇ ಇರಲಿ, ಬ್ಯಾಲೆಟ್ 35223http://kannada.oneindia.com/img/2009/03/14-gangubai-hangal2.jpg233685lok sabha election 2009ಚುನಾವಣೆ : ಡಿವಿ ಗುಂಡಪ್ಪ ಕಂಡಂತೆ/literature/poem/2009/0317-poetic-rendering-on-election-by-dvg.htmlಇಂದು (ಮಾರ್ಚ್ 17) ಡಿವಿ ಗುಂಡಪ್ಪ ಅವರ ಜನ್ಮದಿನ. ಅವರ 'ಮಂಕುತಿಮ್ಮನ ಕಗ್ಗ' ಎಲ್ಲರಿಗೂ ಗೊತ್ತು. ಆದರೆ, 'ಮಹಾಚುನಾವಣೆ'ಯ ಬಗ್ಗೆಯೂ ಡಿವಿಜಿ ಅವರು ಕೆಲವು ಪದ್ಯಗಳನ್ನು ಬರೆದಿದ್ದಾರೆಂಬುದು ಹಲವರಿಗೆ ಗೊತ್ತಿರಲಿಕ್ಕಿಲ್ಲ. 1965ರಲ್ಲಿ ಬರೆದ ಆ ಪದ್ಯಗಳು ಇಂದಿಗೂ ಪ್ರಸ್ತುತವಾಗಿವೆಯೆಂದರೆ ನಮ್ಮ ರಾಜಕಾರಣವು ಅಂದಿಗೂ ಇಂದಿಗೂ ಬದಲಾಗಿಲ್ಲವೆಂಬುದು ವೇದ್ಯವಾಗುತ್ತದೆ.* ಎಚ್. ಆನಂದರಾಮ ಶಾಸ್ತ್ರೀಹೌದು. ರಾಜಕಾರಣವೆಂಬುದು ಕೊಳಕುಗಟ್ಟಿ ನಿಂತ ನೀರು. 35286http://kannada.oneindia.com/img/2009/03/17-dvg5.jpg233685lok sabha election 2009ಮಹಾಸಮರಕ್ಕೊಂದು ಮುನ್ನುಡಿ/news/2009/03/17/lok-sabha-election-2009-wake-up-call.htmlಪ್ರಜಾಪ್ರಭುತ್ವದಲ್ಲಿ ಇನ್ನೂ ಪ್ರಜೆಗಳ ಕೈಯ್ಯಲ್ಲಿ ಉಳಿದುಕೊಂಡಿರುವ ಏಕೈಕ ಅಸ್ತ್ರ ಮತದಾನದ ಹಕ್ಕು. ಇದಕ್ಕೂ ಕುತ್ತು ಬಂದರೆ ಆಶ್ಚರ್ಯವಿಲ್ಲ. ಮತದಾನದಲ್ಲಿ ಪಾಲ್ಗೊಳ್ಳದೆ ಸಿಕ್ಕಿದ ರಜೆಯನ್ನು ಕಂಬಳಿ ಹೊದ್ದು ಮಲಗಲು ಬಳಸಿಕೊಂಡರೆ ದೇಶ ಆಳಲು ಅರ್ಥಾತ್ ನಮ್ಮನ್ನು ಆಳಲು ಒಳ್ಳೆಯವರು ಬರಲು ಸಾಧ್ಯವೇ ಇಲ್ಲ. ಇದನ್ನು ಪ್ರಜಾತಂತ್ರದಲ್ಲಿ ನಂಬಿಕೆಯಿಟ್ಟಿರುವ ಪ್ರತಿಯೊಬ್ಬನೂ ಅರಿಯುವುದೊಳಿತು.* ಚಿದಂಬರ ಬೈಕಂಪಾಡಿ, ಸೂರತ್ಕಲ್, ಮಂಗಳೂರುಮತ್ತೊಂದು ಮಹಾಸಮರಕ್ಕೆ ಅಖಾಡ 35294http://kannada.oneindia.com/img/2009/03/17-politician2.jpg233685lok sabha election 2009ಬಿಜೆಪಿ ಅಭ್ಯರ್ಥಿಗಳ ಮೂರನೇ ಪಟ್ಟಿ ಪ್ರಕಟ/news/2009/03/17/15th-ls-poll-bjp-third-list-announced.htmlಬೆಂಗಳೂರು, ಮಾ. 17 : 15ನೇ ಲೋಕಸಭೆ ಚುನಾವಣೆಗೆ ಭಾರಿ ಸಿದ್ಧತೆಯಲ್ಲಿರುವ ಭಾರತೀಯ ಜನತಾ ಪಕ್ಷ ಇಂದು ನಾಲ್ಕು ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಮತ್ತೊಂದು ಪಟ್ಟಿಯನ್ನು ಬಿಡುಗಡೆ ಮಾಡಿದೆ. ಚುನಾವಣೆ ತಯಾರಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಗಿಂತ ಮುಂದೆ ಎನ್ನುವುದನ್ನು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಾಬೀತುಪಡಿಸಿರುವ ಬಿಜೆಪಿ, ಈಗಾಗಲೇ ಗೆಲುವಿನ ಕುದುರೆ ಎನ್ನುವ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ 35298http://kannada.oneindia.com/img/2009/03/17-janardhana-swamy1.jpg233685lok sabha election 2009ಚುನಾವಣೆಯೆಂಬ ಮಾಯೆಯ ಮಹಿಮೆ ಏನಿದೆಯೋ?/column/bhat/2009/0319-lok-sabha-election-who-knows-what-happens.htmlಒಂದೇ ಸಮನೆ ಸೂರ್ಯ ಉಗಿಯಲಾರಂಭಿಸಿದ್ದಾನೆ. ಬಿಸಿಲಗುಳ್ಳೆಗಳು ಒಡೆಯಲಾರಂಭಿಸಿವೆ. ನೆಲ ಕಾದ ಕಾವಲಿಯಂತಾಗಿದೆ. ನೀರಿನ ಪಸೆ ಕಾವಲಿ ಮೇಲೆ ಬಿದ್ದ ನೀರಿನ ಹನಿಗಳ ಹಾಗೆ ಆವಿಯಾಗುತ್ತಿವೆ. ಏಪ್ರಿಲ್, ಮೇ ಹೇಗಿರಬಹುದೆಂಬುದನ್ನು ಊಹಿಸಿದರೇ ಬೆವರು ಟಿಸಿಲೊಡೆಯುತ್ತವೆ. ಇಷ್ಟೂ ಸಾಲದೆಂಬಂತೆ ಚುನಾವಣೆ ಕಾವು ಕೊಡಲಾರಂಬಿಸಿದೆ. ಬಿಸಿಲಿನ ಝಳ ಹಾಗೂ ಚುನಾವಣೆ ಕಾವಿನ ಜುಗಲ್‌ಬಂದಿಯಲ್ಲಿ ಜನಸಾಮಾನ್ಯ ಚಕ್ರದಡಿಗೆ ಸಿಕ್ಕ ಲಿಂಬೆಹಣ್ಣಿನಂತಾಗಿದ್ದಾನೆ. ಎಲ್ಲ ರಾಜಕೀಯ 35348http://kannada.oneindia.com/img/2009/03/19-jyoti-basu1.jpg453938anandarama shastriಇದೀಗ ತಾನೇ ಬಂದಂತಹ ನಗೆ ಸುದ್ದಿಗಳು/column/humor/2009/0401-humorous-political-news-bytes.htmlರಾಜಕೀಯದಲ್ಲಿ ಕಾಲು ಎಳೆಯುವುದು, ಕೆಸರೆರಚಾಟವಾಡುವುದು, ಕಟಕಿಯಾಡುವುದು ಸೂರ್ಯ ಪೂರ್ವ ದಿಕ್ಕಿನಲ್ಲಿ ಹುಟ್ಟಿದಷ್ಟೇ ಸಹಜ. ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನಾವೂ ನಮ್ಮ ರಾಷ್ಟ್ರೀಯ ಪ್ರತಿನಿಧಿಗಳ ಕಾಲೆಳಿಯೋಣ, ಮಿತಿ ಮೀರದಂತೆ. ಇಲ್ಲಿವೆ ನೋಡಿ ಎಚ್. ಆನಂದರಾಮ ಶಾಸ್ತ್ರೀಯವರ ಹಾಸ್ಯಲೇಪಿತ ರಾಜಕೀಯ ಸುದ್ದಿ ಸ್ವಾರಸ್ಯಗಳು.ವರುಣ್‌ಗೆ ಒಂದು ವರ್ಷ ಶಿಕ್ಷೆವರುಣ್ ಗಾಂಧಿಗೆ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಲಾಗಿದೆ. 35655http://kannada.oneindia.com/img/2009/04/01-anandram-shastri1.jpg453938anandarama shastriಬಂಗಾರ-ಕುಮಾರ-ಮಧು-ಚಂದ್ರ-ಯಾನ/column/humor/2009/0406-madhu-kumar-bangarappa-unite.htmlರಾಜಕೀಯದಲ್ಲಿ ಯಾವುದೂ ಶಾಶ್ವತವಲ್ಲ. ಇಲ್ಲಿ ಸ್ನೇಹವೂ ಶಾಶ್ವತವಲ್ಲ, ವೈರತ್ವವೂ. ಅಧಿಕಾರ ಶಾಶ್ವತವಲ್ಲ, ಸಂಬಂಧವಂತೂ ಅಲ್ವೇಅಲ್ಲ, ಹಣ ಮತ್ತು ಕಳಂಕ ಹೊರತಾಗಿ. ಅಂದಿನ ಬದ್ಧ ವೈರಿಗಳು ಇಂದು ನಿನ್ನಂಥ ಅಪ್ಪ ಇಲ್ಲ, ನಿನ್ನಂಥ ಮಗನೂ ಇಲ್ಲ, ನಿನ್ನಂಥ ಬಂಧುವಿಲ್ಲ ಅಂತ ಅಪ್ಪಿಕೊಳ್ಳುವುದನ್ನು ನೋಡುವುದು ರಾಜಕೀಯದಲ್ಲಿ ಮಾತ್ರ ಸಾಧ್ಯ. ಅದನ್ನು ಸಾಧ್ಯವಾಗಿಸಿದವರು, ಕುಮಾರ್, ಮಧು ಮತ್ತು ಒನ್ ಅಂಡ್ ಓನ್ಲಿ 35761http://kannada.oneindia.com/img/2009/04/06-anandram-shastri2.jpg453938anandarama shastriಸ್ವರ್ಗ-ನರಕದಲ್ಲಿ ಪತ್ರಿಕಾಗೋಷ್ಠಿ!/column/humor/2009/0409-press-conference-in-hell-and-heaven.htmlಸ್ವರ್ಗ ಮತ್ತು ನರಕಗಳೆರಡರಲ್ಲಿಯೂ ಏಕಕಾಲಕ್ಕೆ ವಿಶೇಷ ಘಟಕಗಳನ್ನು ತೆರೆಯಲು ಈಚೆಗಷ್ಟೇ ನಿರ್ಧರಿಸಲಾಯಿತು. ಭೂಲೋಕದ ಮಾನವರಿಗಾಗಿ ಆ ಘಟಕಗಳಾದ್ದರಿಂದ ಆ ಬಗ್ಗೆ ಎರಡೂ ಕಡೆ ಪತ್ರಿಕಾಗೋಷ್ಠಿ ಏರ್ಪಡಿಸಿ ಭೂಲೋಕದ ಪತ್ರಕರ್ತರನ್ನು ಆಹ್ವಾನಿಸಲಾಯಿತು. ಪತ್ರಕರ್ತರಿಗಾಗಿ ಉಭಯ ಕಡೆಗಳಿಗೂ ದೇವೇಂದ್ರನ ಕಚೇರಿಯು ವಿಶೇಷ ಸಾರಿಗೆ ವ್ಯವಸ್ಥೆ ಮಾಡಿತ್ತು. ಕ್ಯಾಮೆರಾ, ಮೊಬೈಲ್ ಫೋನ್, ಕಂಪ್ಯೂಟರ್, ಚಿತ್ರಗ್ರಾಹಕ ಯಂತ್ರಗಳು ಹಾಗೂ ಧ್ವನಿಮುದ್ರಕ ಯಂತ್ರಗಳನ್ನು ನಿಷೇಧಿಸಲಾಗಿತ್ತು. 35853http://kannada.oneindia.com/img/2009/04/09-anandram-shastri2.jpg453938anandarama shastriಇಂಥ ರಾಜಕಾರಣಿಗಳನ್ನು ಪಡೆದ ನಾವೇ ಧನ್ಯರು!/column/humor/2009/0413-honest-secular-polite-politicians-karnataka.htmlನಮ್ಮ ರಾಜಕಾರಣಿಗಳು ಪಾಪ ಏನೂ ಗಳಿಸಿರುವುದಿಲ್ಲ. ಇವರ ಹೆಂಡತಿ ಟೈಲರಿಂಗೋ ಮತ್ತೊಂದೋ ಕೆಲಸ ಮಾಡಿ ಒಂದು ಕೇಜಿ ಬಂಗಾರ, ಎರಡು ಕ್ವಿಂಟಲ್ ಬೆಳ್ಳಿ, ಮೂರು ಬಂಗಲೆ, ನಾಲ್ಕು ಕಾರು, ಐದು ಲಕ್ಷ ನಗದು, ಆರು ಕೋಟಿ ರೂ. ಶೇರ್ ಸರ್ಟಿಫಿಕೇಟು, ಏಳೆಕರೆ ತೋಟ, ಎಂಟು ಸೈಟು, ಒಂಭತ್ತು ಕಪಾಟುಭರ್ತಿ ಉಡುಪು ಮತ್ತು ಹತ್ತು ಜಾತಿನಾಯಿ ಮಾಡಿಕೊಂಡಿರುತ್ತಾರೆ, ಅಷ್ಟೆ.* 35908http://kannada.oneindia.com/img/2009/04/13-politician1.jpg453938anandarama shastriನಮ್ಮ ರಾಜಕಾರಣಿಗಳು ಎಂಥವರೆಂದರೆ.../news/2009/04/23/these-are-our-politicians.htmlಚುನಾವಣೆ ಬಂತೆಂದರೆ ಸಾಕು, 'ದಾಸನ ಮಾಡಿಕೊ ಎನ್ನ, ಸ್ವಾಮಿ, ಸಾಸಿರ ನಾಮದ ಪ್ರಿಯ ಮತದಾರ', ಎಂದು ಮತದಾರನನ್ನು ಪ್ರಾರ್ಥಿಸುವ ಇವರು ಚುನಾವಣೆ ಮುಗಿದ ಬೆನ್ನಿಗೇ, 'ನೀನ್ಯಾಕೋ ನಿನ್ನ ಹಂಗ್ಯಾಕೋ ನಿನ್ನ ವೋಟಿನ ಬಲವೊಂದ್ ಸಿಕ್ತಲ್ಲ, ಸಾಕೋ', ಎಂದು ಮತದಾರನಿಗೆ ಬೆನ್ನುಹಾಕಿ ತಮ್ಮ ದಂತಗೋಪುರಗಳೆಡೆಗೆ ಹೊರಟುಹೋಗುತ್ತಾರೆ.* ಎಚ್. ಆನಂದರಾಮ ಶಾಸ್ತ್ರೀ, ಬೆಂಗಳೂರು ಅವನೊಬ್ಬ ವ್ಯಾಪಾರಿ. ಭಾರೀ ಶ್ರೀಮಂತ. ಆದರೂ 36157http://kannada.oneindia.com/img/2009/04/23-politician2.jpg382435votingಮಂಕುಬೂದಿ ಎರಚಲು ಸಾಧ್ಯವಿಲ್ಲದ ಇಂಕು!/news/2009/03/14/indelible-ink-by-mysore-paints-and-varnish.htmlಮೈಸೂರು, ಮಾ. 14 : ಏಪ್ರಿಲ್ ಮತ್ತು ಮೇನಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬಹಳ ದಿನಗಳವರೆಗೆ ಅಳಿಸಲಾಗದ ಗುರುತು ಮೂಡಿಸುವ ಸಂಗತಿ ಯಾವುದು? ರೌಡಿಗಳ ದರ್ಬಾರು, ರಾಜಕಾರಣಿಗಳ ಭ್ರಷ್ಟಾಚಾರ ಯಾವುದೂ ಅಲ್ಲ. ಅದು, ಮತ ಹಾಕಿದ ನಂತರ ಎಡ ತೋರುಬೆರಳಿನ ಮೇಲೆ ಹಾಕುವ ಮಸಿಯ ಗುರುತು.ಹೌದು, ಪಂಚಾಯತಿ ಚುನಾವಣೆಯಿರಲಿ, ವಿಧಾನಸಭೆ ಅಥವಾ ಲೋಕಸಭೆ ಚುನಾವಣೆಯೇ ಇರಲಿ, ಬ್ಯಾಲೆಟ್ 35223http://kannada.oneindia.com/img/2009/03/14-gangubai-hangal2.jpg382435votingಮಹಾಸಮರಕ್ಕೊಂದು ಮುನ್ನುಡಿ/news/2009/03/17/lok-sabha-election-2009-wake-up-call.htmlಪ್ರಜಾಪ್ರಭುತ್ವದಲ್ಲಿ ಇನ್ನೂ ಪ್ರಜೆಗಳ ಕೈಯ್ಯಲ್ಲಿ ಉಳಿದುಕೊಂಡಿರುವ ಏಕೈಕ ಅಸ್ತ್ರ ಮತದಾನದ ಹಕ್ಕು. ಇದಕ್ಕೂ ಕುತ್ತು ಬಂದರೆ ಆಶ್ಚರ್ಯವಿಲ್ಲ. ಮತದಾನದಲ್ಲಿ ಪಾಲ್ಗೊಳ್ಳದೆ ಸಿಕ್ಕಿದ ರಜೆಯನ್ನು ಕಂಬಳಿ ಹೊದ್ದು ಮಲಗಲು ಬಳಸಿಕೊಂಡರೆ ದೇಶ ಆಳಲು ಅರ್ಥಾತ್ ನಮ್ಮನ್ನು ಆಳಲು ಒಳ್ಳೆಯವರು ಬರಲು ಸಾಧ್ಯವೇ ಇಲ್ಲ. ಇದನ್ನು ಪ್ರಜಾತಂತ್ರದಲ್ಲಿ ನಂಬಿಕೆಯಿಟ್ಟಿರುವ ಪ್ರತಿಯೊಬ್ಬನೂ ಅರಿಯುವುದೊಳಿತು.* ಚಿದಂಬರ ಬೈಕಂಪಾಡಿ, ಸೂರತ್ಕಲ್, ಮಂಗಳೂರುಮತ್ತೊಂದು ಮಹಾಸಮರಕ್ಕೆ ಅಖಾಡ 35294http://kannada.oneindia.com/img/2009/03/17-politician2.jpg382435votingನಗೆಯು ಬರುತಿದೆ ನಮಗೆ ನಗೆಯು ಬರುತಿದೆ.../column/manikanth/2009/0415-open-letter-to-karnataka-politicians.htmlಸಂಸದರಾಗುವ ಕನಸಿನೊಂದಿಗೇ ಓಡಾಡುತ್ತಿರುವ ನಾಯಕರುಗಳಿಗೆ-ನಮಸ್ಕಾರ.ಮಹನೀಯರೆ, ಚುನಾವಣೆ ನಡೆವ ದಿನ ಹತ್ತಿರಾಗುತ್ತಿದೆ. ಈ ಸಂದರ್ಭದಲ್ಲಿಯೇ ನೀವು ಮನೆ ಮನೆಯ ಬಾಗಿಲು ತಟ್ಟುತ್ತಿದ್ದೀರಿ. ದೊಡ್ಡವರು, ಚಿಕ್ಕವರು, ಮುದುಕರು, ಮಕ್ಕಳಿಗೂ ಡೈವ್ ಹೊಡೆಯುತ್ತಿದ್ದೀರಿ. ಅಪರಿಚಿತರಿಗೂ ಕೈ ಮುಗಿಯುತ್ತಿದ್ದೀರಿ. ಕಂಡವರ ಮುಂದೆಲ್ಲಾ ಇಷ್ಟಗಲ ಹಲ್ಲು ಕಿಸಿದು, ಅವರ ಕೈ ಹಿಡಿದು- ಇದನ್ನು ಕಾಲು ಅಂತ ತಿಳ್ಕೊಳ್ಳಿ. ಮನೆ ಬಾಗಿಲಿಗೆ ಬಂದು ಭಿಕ್ಷೆ ಕೇಳ್ತಾ 35961http://kannada.oneindia.com/img/2009/04/15-politician2.jpg382435votingಮತದಾನ : ನಕ್ಸಲರ ಅಟ್ಟಹಾಸಕ್ಕೆ 17 ಸಾವು/news/2009/04/16/lok-sabha-election-first-phase-naxals-attack.htmlನವದೆಹಲಿ, ಏ. 16 : ಮೊದಲ ಹಂತದ ಚುನಾವಣೆ ನಡೆದ ಬಿಹಾರ್, ಜಾರ್ಖಂಡ್, ಛತ್ತೀಸ್ ಗಢ್ ಹಾಗೂ ಒರಿಸ್ಸಾದಲ್ಲಿ ನಕ್ಸಲರು ಅಟ್ಟಹಾಸ ಮೆರೆದಿದ್ದಾರೆ. 5 ಮಂದಿ ಚುನಾವಣೆ ಮತಗಟ್ಟೆ ಅಧಿಕಾರಿಗಳು ಸೇರಿದಂತೆ ಒಟ್ಟು 17 ಮಂದಿಯನ್ನು ನಕ್ಸಲರು ಹತ್ಯೆಗೈದಿದ್ದಾರೆ. ಕೆಲವಡೆ ಮತದಾನದ ಕೇಂದ್ರಗಳಿಗೆ ನುಗ್ಗಿ ಅಲ್ಲಿದ್ದ ಮತಯಂತ್ರಗಳನ್ನು ಅಪಹರಣ ಮತ್ತು ನಾಶ ಮಾಡಿರುವ ಘಟನೆಗಳು ನಡೆದಿರುವುದು ದೇಶದ 36007http://kannada.oneindia.com/img/2009/04/16-naxal-attack1.jpg382435votingಮತದಾರರೇ, ನಿಮ್ಮ ಓಟು ಯಾರಿಗೆ?/news/2009/04/22/golden-opportunity-to-elect-right-candidate.htmlಇದು ಸಮ್ಮಿಶ್ರ ಸರಕಾರಗಳ ಯುಗ. ನಾಲ್ಕುನಾಲ್ಕು ರಂಗಗಳು ಉದ್ಭವವಾಗಿರುವುದರಿಂದ ಏಕೈಕ ರಾಷ್ಟ್ರೀಯ ಪಕ್ಷಕ್ಕೆ ಇನ್ನೆಂದೂ ಬಹುಮತ ಪಡೆಯುವ ಸಾಧ್ಯತೆ ಬರಲಾರದು. ಸಣ್ಣಪುಟ್ಟ ಪಕ್ಷಗಳು ಅಷ್ಟೇ ಏಕೆ ಒಬ್ಬಂಟಿ ಸಂಸದನೂ ಸರಕಾರವನ್ನು ಉಳಿಸುವಲ್ಲಿ ಅಥವಾ ಉರುಳಿಸುವಲ್ಲಿ ನಿರ್ಣಾಯಕ ಪಾತ್ರವಹಿಸಬಲ್ಲ. ಆದ್ದರಿಂದ ಸಮರ್ಥ ನಾಯಕನನ್ನು ನೋಡಿ ಜನ ಮತ ಹಾಕಬೇಕೆ ಹೊರತು ಪಕ್ಷ ನೋಡಿ ಅಲ್ಲ.* ಪ್ರಸಾದ ನಾಯಿಕ15ನೇ ಲೋಕಸಭೆ 36143http://kannada.oneindia.com/img/2009/04/22-vote1.jpgnews"> ಮತದಾರರಾದ ನಾವಾದರೂ ಎಂಥವರು? | Voters' responsibility | General election | Anandarama Shastry - ಮತದಾರರಾದ ನಾವಾದರೂ ಎಂಥವರು? - Kannada Oneindia

ಮತದಾರರಾದ ನಾವಾದರೂ ಎಂಥವರು?

Every citizen should vote
ಪ್ರಜಾತಂತ್ರವೆಂಬುದು ಯಾವುದೋ ಒಬ್ಬ ಪ್ರತಿನಿಧಿಯನ್ನು ಸಂಸತ್ತಿಗೆ ಆರಿಸಿ ಕಳುಹಿಸಿ ಅಧಿಕಾರ ಚುಕ್ಕಾಣಿ ಆತನ ಕೈಗೆ ಕೊಟ್ಟು ಸುಮ್ಮನೆ ನೋಡುತ್ತ ಕುಳಿತುಕೊಳ್ಳುವುದಲ್ಲ. ಮತದಾರರಾದ ನಮ್ಮ ಜವಾಬ್ದಾರಿಯನ್ನು ಅರಿತು ಪ್ರಜ್ಞಾವಂತಿಕೆಯಿಂದ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. 'ಅಯ್ಯೋ...' ಎಂದು ರಾಗ ಎಳೆಯದೆ, ಸಿನಕತನ ತೋರದೆ ಜಾಗೃತಿಯನ್ನು ಬೆಳೆಸಿಕೊಳ್ಳಬೇಕಾಗಿದೆ. ಯೋಗ್ಯ ಅಭ್ಯರ್ಥಿಯನ್ನು ಆರಿಸುವ ಜವಾಬ್ದಾರಿ ನಮ್ಮದೇ ಎಂದು ಪ್ರತಿಯೊಬ್ಬರೂ ಅರಿಯಬೇಕು.

* ಎಚ್. ಆನಂದರಾಮ ಶಾಸ್ತ್ರೀ, ಬೆಂಗಳೂರು

ನಮ್ಮ ರಾಜಕಾರಣಿಗಳ ಗೋಸುಂಬೆತನವನ್ನು ಕಂಡಾಗ ನಮಗೆ ಅಸಹ್ಯವೆನ್ನಿಸುತ್ತದೆ; ಅವರ ಗೋಮುಖವ್ಯಾಘ್ರರೂಪವನ್ನು ಅರಿತಾಗ ನಮಗೆ ಕೋಪ ಉಕ್ಕಿಬರುತ್ತದೆ. ಚುನಾವಣೆಯ ಸಮಯದಲ್ಲಿ ಅವರು, 'ಕಲ್ಲುಸಕ್ಕರೆ ಕೊಳ್ಳಿರೋ', ಎಂದು ಸಿಹಿಮಾತಿನ ಕಲ್ಲುಸಕ್ಕರೆ ಕೊಡಲು ನಮ್ಮ ಬಳಿ ಬಂದಾಗ, ಅವರನ್ನು ಹೊಡೆದಟ್ಟಲು 'ಕಲ್ಲು ಸಿಕ್ಕರೆ ಕೊಳ್ಳಿರೋ', ಎಂದೆನ್ನಬೇಕೆನ್ನಿಸುತ್ತದೆ ನಮಗೆ. ಸರಿಯೇ. ಆದರೆ ಮತದಾರರಾದ ನಾವೆಂಥವರು?

ಚುನಾವಣೆಯ ದಿನ ಮತದಾನ ಮಾಡಬೇಕಾದ ಕರ್ತವ್ಯವನ್ನು ನಾವು ಅದೆಷ್ಟು ಮಂದಿ ತಪ್ಪದೇ ಪಾಲಿಸುತ್ತೇವೆ? ಅರ್ಧಕ್ಕೂ ಹೆಚ್ಚು ಜನ ಆ ದಿನ ಮತದಾನ ಮಾಡದೆ ಮನೆಯಲ್ಲೇ ಕುಳಿತುಕೊಳ್ಳುತ್ತೇವಲ್ಲಾ, ರಾಜಕಾರಣಿಗಳು ಮಾತ್ರವಲ್ಲ, ನಾವೂ ಸರಿಯಾಗಬೇಕಲ್ಲವೆ?

ಮತದಾನ ಮಾಡದಿರುವವರಲ್ಲಿ ಸುಶಿಕ್ಷಿತರದೇ ಸಿಂಹಪಾಲು ಎಂಬುದು ನಾಚಿಕೆಗೇಡಿನ ವಿಷಯವಲ್ಲವೆ? ಅಕ್ಷರಜ್ಞಾನವಿಲ್ಲದವರು ಮತಗಟ್ಟೆಗೆ ಹೋಗಿ ಮತ ನೀಡುವಾಗ ಸುಶಿಕ್ಷಿತರಾದ ನಾವು ಮನೆಯಲ್ಲೇ ಉಳಿದರೆ ನಮಗೆ ಒಳ್ಳೆಯ ಆಡಳಿತ ದೊರೆಯುವುದಾದರೂ ಹೇಗೆ? ಅಶಿಕ್ಷಿತ ಮತದಾರರನ್ನು ಓಲೈಸಿ, ಹಣ-ಹೆಂಡ-ಉಡುಗೊರೆಗಳ ಆಮಿಷಕ್ಕೊಳಪಡಿಸಿ ಈ ನಮ್ಮ ರಾಜಕಾರಣಿಗಳು ದಾರಿ ತಪ್ಪಿಸಲೆತ್ನಿಸುವಾಗ ವಿದ್ಯಾವಂತ ನಾಗರಿಕರಾದ ನಾವು ಸ್ವಯಂ ಮತ ನೀಡುವುದಷ್ಟೇ ಅಲ್ಲ, ತಿಳಿವಳಿಕೆಯಿಲ್ಲದ ಮುಗ್ಧರಿಗೆ ಸೂಕ್ತ ಮಾರ್ಗದರ್ಶನವನ್ನೂ ಮಾಡಬೇಕಲ್ಲವೆ? ಹಾಗಿರುವಾಗ ನಾವೇ ಮತ ನೀಡದೆ ಮನೆಯಲ್ಲಿ ಕುಳಿತರೆ ಒಳ್ಳೆಯ ಆಡಳಿತ ಬರುವುದಾದರೂ ಹೇಗೆ? ಆಮೇಲೆ ಸರ್ಕಾರವನ್ನು ದೂರುವವರೂ ನಾವೇ ಅಲ್ಲವೆ?

'ಎಲ್ಲ ಪಕ್ಷಗಳವರೂ ಅಯೋಗ್ಯರೇ; ಹಾಗಿರುವಾಗ ಮತದಾನ ಮಾಡಿದರೆಷ್ಟು ಬಿಟ್ಟರೆಷ್ಟು', ಎಂದು ಸಿನಿಕರಂತೆ ಮಾತನಾಡುವ ವಿದ್ಯಾವಂತರಿಗೆ ನನ್ನ ಪ್ರಶ್ನೆ ಇಷ್ಟೆ, ನೀವು ಹೋಗಿ ಇದ್ದುದರಲ್ಲೇ ಯೋಗ್ಯರಿಗೆ ಮತ ನೀಡಿದರೆ ಫಲಿತಾಂಶ ಬೇರೆಯೇ ಆಗಬಹುದಲ್ಲವೆ? ಇದ್ದುದರಲ್ಲೇ ಉತ್ತಮವಾಗಬಹುದಲ್ಲವೆ? ಯೋಗ್ಯನಾದ ಪಕ್ಷೇತರ ಅಭ್ಯರ್ಥಿಗೂ ನೀವು ಮತ ನೀಡಿ ಪ್ರೋತ್ಸಾಹಿಸಬಹುದಲ್ಲವೆ? ಅಂಥ ಅಭ್ಯರ್ಥಿಯನ್ನು ಆರಿಸಬಹುದಲ್ಲವೆ? ಮುಂದಿನ ಆಮೂಲಾಗ್ರ ಬದಲಾವಣೆಗೆ ಈ ನಿಮ್ಮ ಕ್ರಮವು ನಾಂದಿಯಾಗಬಹುದಲ್ಲವೆ? ವಿವಿಧ ಪಕ್ಷಗಳಿಗೆ ನೀವು ಚುರುಕು ಮುಟ್ಟಿಸಿದಂತಾಗಿ, ಮುಂದಿನ ಸಲ ಆ ಪಕ್ಷಗಳು ಬೆಟರ್ ಕ್ಯಾಂಡಿಡೇಟನ್ನು ಚುನಾವಣೆಗೆ ನಿಲ್ಲಿಸಿಯಾವಲ್ಲವೆ? ಹೀಗೆ ಆರಂಭವಾದ ಸಕರಾತ್ಮಕ ಬದಲಾವಣೆಯು ಕಾಲಕ್ರಮದಲ್ಲಿ ಪರಿಪೂರ್ಣತೆಯ ಹಂತವನ್ನು ತಲುಪುವುದು ನಿಶ್ಚಿತ ತಾನೆ?

ಸುಶಿಕ್ಷಿತರಾದ ನಾವು ಮತದಾನ ಮಾಡದಿರುವುದರಿಂದ, ಮತ್ತು, ಮತದಾನ ಮಾಡುವವರಲ್ಲಿ ಬಹುತೇಕರು ಸ್ವಜಾತಿ, ಸ್ವಮತ ಹಾಗೂ ನಿರ್ದಿಷ್ಟ ಪಕ್ಷದ ಒಲವಿನಿಂದ ಮತದಾನ ಮಾಡುವುದರಿಂದ ಎಷ್ಟೋ ಕ್ಷೇತ್ರಗಳಲ್ಲಿ 'ಅತಿ ಹೆಚ್ಚು ಅಯೋಗ್ಯ' ಅಭ್ಯರ್ಥಿಯೇ ಆಯ್ಕೆಯಾಗಿರುತ್ತಾನೆ. ನಮ್ಮ ಯೋಗ್ಯತೆಗೆ ತಕ್ಕ ಸರ್ಕಾರ! ಏನಂತೀರಿ?

'ಮೂರ್ಖರಾದರು ಜನರು ಲೋಕದೊಳಗೆ, ಏಕದೈವವ ಬಿಟ್ಟು ಕಾಕುದೈವವ ಭಜಿಸಿ', ಎಂಬ ದಾಸವಾಣಿಯಂತೆ, 'ಮೂರ್ಖರಾದೆವು ನಾವು ದೇಶದೊಳಗೆ, ಯೋಗ್ಯ ಮನುಜನ ಬಿಟ್ಟಯೋಗ್ಯನನು ನಾವ್ ಗೆಲಿಸಿ', ಎಂಬಂತಾಗುತ್ತದೆ ಆಗ ನಮ್ಮ ಕಥೆ. ಆಮೇಲೆ ನಾವು, 'ಮೋಸಹೋದೆವಲ್ಲ, ತಿಳಿಯದೆ ಮೋಸಹೋದೆವಲ್ಲ, ಕ್ಲೇಶನಾಶವನು ಮಾಡುವ ಶ್ರೀ ಸುಯೋಗ್ಯನನು ಲೇಸಾಗಿ ಆರಿಸದೆ!' ಎಂದು ಧನ್ಯಾಸಿ ರಾಗದಲ್ಲಿ ಅಲವತ್ತುಕೊಂಡರೆ ಏನು ಪ್ರಯೋಜನ? 'ಏಕೆ ಮೂರ್ಖನಾದ್ಯೋ, ಮನವೇ, ಏಕೆ ಮೂರ್ಖನಾದ್ಯೋ?' ಎಂದು ಆಗ ನಾವು ಕಾಂಭೋದಿ ರಾಗದಲ್ಲಿ ನಮ್ಮನ್ನೇ ಹಳಿದುಕೊಳ್ಳಬೇಕಾಗುತ್ತದೆ. ಕೊನೆಗೆ ನಾವು ಹತಾಶರಾಗಿ, 'ಲೊಳಲೊಟ್ಟೆ, ಎಲ್ಲಾ ಲೊಳಲೊಟ್ಟೆ', ಎಂದು ಶಂಕರಾಭರಣ ರಾಗದಲ್ಲಿ ಹಾಡತೊಡಗುತ್ತೇವೆ. ಹೀಗೆ 'ಧನ್ಯಾಸಿ-ಸನ್ಯಾಸಿ'ಗಳಾಗುವ ಬದಲು ನಾವು ಮತಗಟ್ಟೆಗೆ ಬಿಜಯಂಗೈದು ಮತದಾನ ಮಾಡುವ ಮೂಲಕ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಯತ್ನಿಸಬಹುದಲ್ಲ? ಬದಲಾವಣೆಯೆಂಬುದು ನಮ್ಮಿಂದಲೇ ಆರಂಭವಾಗಬೇಕೇ ಹೊರತು ಇನ್ನ್ಯಾರೋ ಬದಲಾಯಿಸುತ್ತಾರೆಂದು ಕೂರುವುದು ತರವಲ್ಲ ತಾನೆ?

ವ್ಯವಸ್ಥೆಯಲ್ಲಿ ಬದಲಾವಣೆಯೆಂಬುದು ತಂತಾನೇ ಆಗುವಂಥದೂ ಅಲ್ಲ; ನಾವೇ ಪ್ರಯತ್ನಪೂರ್ವಕವಾಗಿ ಮಾಡಬೇಕಾದುದು ಅದು. ಅದು ದಿಢೀರನೆ ಆಗುವಂಥದೂ ಅಲ್ಲ. ಹಾಕಿಕೊಂಡ ಶರ್ಟ್ ಬದಲಾಯಿಸಲೂ ನಮಗೆ ನಿಮಿಷಗಳ ಸಮಯ ಬೇಕಾಗುತ್ತದೆ. ಸುಶಿಕ್ಷಿತರ ಮತದಾನದ ಮೂಲಕ, ಎಲ್ಲರೂ ತಪ್ಪದೇ ಮತದಾನ ಮಾಡುವ ಮೂಲಕ ಮತ್ತು ಜಾತಿ, ಮತ, ಪಕ್ಷಗಳ ಒಲವನ್ನು ಮೀರಿ (ಇದ್ದುದರಲ್ಲಿಯೇ) ಉತ್ತಮ ಅಭ್ಯರ್ಥಿಗೆ ಮತ ನೀಡುವ ಮೂಲಕ ಕಾಲಕ್ರಮದಲ್ಲಿ ವ್ಯವಸ್ಥೆಯಲ್ಲಿ ಇತ್ಯಾತ್ಮಕ ಬದಲಾವಣೆಯನ್ನು ನಾವೇ ತರಬೇಕು ಮತ್ತು ಇದು ನಮ್ಮಿಂದ ಖಂಡಿತ ಸಾಧ್ಯ. ಮತದಾರರಾದ ನಮಗೆ ನಂಬಿಕೆ ಬೇಕು, ತಾಳ್ಮೆ ಬೇಕು ಮತ್ತು ಕರ್ತವ್ಯಪ್ರಜ್ಞೆ ಬೇಕು ಅಷ್ಟೆ.

ಈ ಸಲದ ಚುನಾವಣೆಯಲ್ಲಿ ನಾವೆಲ್ಲ ಈ ಕರ್ತವ್ಯಪ್ರಜ್ಞೆ ಮೆರೆಯೋಣ. ತಪ್ಪದೇ ಮತಗಟ್ಟೆಗೆ ಹೋಗಿ ಮತದಾನ ಮಾಡೋಣ. ಇದ್ದುದರಲ್ಲಿಯೇ ಯೋಗ್ಯ ಅಭ್ಯರ್ಥಿಗೆ ಮತ ನೀಡೋಣ. ತನ್ಮೂಲಕ ವ್ಯವಸ್ಥೆಯ ಬದಲಾವಣೆಗೆ ನಾಂದಿ ಹಾಡೋಣ.

ಓದಿ : ನಮ್ಮ ರಾಜಕಾರಣಿಗಳು ಎಂಥವರೆಂದರೆ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+