ದೇಶದ ಸಮಗ್ರತೆಗೆ ಕಮಲಕ್ಕೆ ಮತ ನೀಡಿ : ಸಿಎಂ

ಹುಬ್ಬಳ್ಳಿ, ಏ. 23 : ಪ್ರಜ್ಞಾವಂತರ ಮತದಾರರೇ ದಯವಿಟ್ಟು ಮತ ನೀಡಿ. ಮತದಾನಕ್ಕೆ ಹೋಗುವ ಮುಂಚೆ ಒಂದೇ ಒಂದು ಬಾರಿ ಮುಂಬೈ ಭಯೋತ್ಪಾದನೆಯನ್ನು ನೆನೆಪಿಸಿಕೊಳ್ಳಿ, ವೀರ ಯೋಧ ಸಂದೀಪ ಉನ್ನಿಕೃಷ್ಣನ್ ಅವರನ್ನು ನೆನಪಿಸಿಕೊಂಡು ಮತ ನೀಡಿ. ದೇಶದ ಸಮಗ್ರತೆ, ಅಖಂಡತೆ ಹಾಗೂ ಏತಕೆ ಕಾಯುವುದು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು.

ಲಾಲ್ ಕೃಷ್ಣ ಅಡ್ವಾಣಿ ಅವರು ದೇಶದ ಪ್ರಧಾನಮಂತ್ರಿ ಮಾಡಬೇಕೆನ್ನುವುದು ಎಲ್ಲರ ಆಸೆ. ಅಂಥ ದೀಮಂತ ರಾಜಕೀಯ ಮುತ್ಸದ್ಧಿಯಿಂದ ಮಾತ್ರ ದೇಶದ ಸಮಗ್ರತೆ, ಏಕತೆಯನ್ನು ಕಾಪಾಡಿಕೊಂಡು ಹೋಗಲು ಮಾತ್ರ ಸಾಧ್ಯ. ದೇಶದ ಸಮೃದ್ಧಿ, ಅಭಿವೃದ್ಧಿ ಕಾಣಬೇಕಾದರೆ ಕಮಲಕ್ಕೆ ನಿಮ್ಮ ಅಮೂಲ್ಯ ಮತ ಅವಶ್ಯಕ. ಈ ಹಿನ್ನೆಲೆಯಲ್ಲಿ ಕಮಲದ ಗುರುತಿಗೆ ನಿಮ್ಮ ಮತ ನೀಡಿ ಎಂದು ಅವರು ಕೇಳಿಕೊಂಡರು.

ರಾಜ್ಯ 28 ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ 23 ರಿಂದ 24 ಸ್ಥಾನಗಳನ್ನು ಗೆಲ್ಲುವುದು ಖಚಿತ. ಮೊದಲ ಹಂತದ 17 ಕ್ಷೇತ್ರಗಳಲ್ಲಿ 15 ಬಿಜೆಪಿ ಜಯಭೇರಿ ಸಾಧಿಸಲಿದೆ ಎಂದು ಅವರು ವಿಶ್ವಾಸದಿಂದ ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+