ಭದ್ರಾವತಿಯಲ್ಲಿ ಬಂಗಾರಪ್ಪ ಎದೆಗೆ ಕಲ್ಲು

Stone pelting on Bangarappa
ಭದ್ರಾವತಿ, ಏ. 23 : ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಶಾಸಕ ಸಂಗಮೇಶ್ ಬೆಂಬಲಿಗರು ಮತ್ತು ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್ ಹುರಿಯಾಳು ಎಸ್ ಬಂಗಾರಪ್ಪ ಬೆಂಬಲಿಗರ ನಡುವೆ ಘರ್ಷಣೆ ನಡೆದಿದೆ. ಈ ಸಂದರ್ಭದಲ್ಲಿ ಉಂಟಾದ ಗೊಂದಲದಿಂದ ಗುಂಪು ಚೆದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರಿಂದ ನಾಲ್ವರು ಪತ್ರಕರ್ತರು ಹಾಗೂ ಒಬ್ಬ ಮಹಿಳೆಯ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಭಾಷಣ ಮಾಡುತ್ತಿದ್ದ ಬಂಗಾರಪ್ಪ ಅವರ ಎದೆಗೆ ಕಲ್ಲು ಬಿದ್ದಿದ್ದರಿಂದ ಅವರು ಕೂಡಾ ಪ್ರಚಾರ ಕೈಬಿಟ್ಟು ವೇದಿಕೆಯಿಂದ ನಿರ್ಗಮಿಸಿದ ಪ್ರಸಂಗವೂ ನಡೆಯಿತು.

ಇಂದು ಕಾಂಗ್ರೆಸ್ ಪರ ಭದ್ರಾವತಿಯಲ್ಲಿ ಪ್ರಚಾರಕ್ಕೆ ಸಭೆ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಆಗಮಿಸುವ ಕಾರ್ಯಕ್ರಮವಿತ್ತು. ಬಿಜೆಪಿ ಪರ ಪ್ರಚಾರ ಕೈಗೊಂಡಿದ್ದಾರೆ ಎಂಬ ಆರೋಪದ ಮೇರೆಗೆ ಸ್ಥಳೀಯ ಕಾಂಗ್ರೆಸ್ ಶಾಸಕ ಸಂಗಮೇಶ್ ಅವರನ್ನು ಬಂಗಾರಪ್ಪ ಬೆಂಬಲಿಗರು ವೇದಿಕೆ ಹತ್ತಲು ಬಿಡಲಿಲ್ಲ. ಇದರಿಂದ ಸಂಗಮೇಶ್ ವೇದಿಕೆಯಿಂದ ಹೊರನಡೆದರು.

ಸ್ವಲ್ಪ ಹೊತ್ತಿನ ನಂತರ ಶಾಸಕ ಸಂಗಮೇಶ್ ಪರ ಬೆಂಬಲಿಗರು ಬಂಗಾರಪ್ಪ ವಿರುದ್ಧ ಧಿಕ್ಕಾರ ಘೋಷಣೆ ಕೂಗತೊಡಗುತ್ತಾ, ವೇದಿಕೆ ಏರಿ ಬಂಗಾರಪ್ಪ ಅವರಿಗೆ ಮುತ್ತಿಗೆ ಹಾಕಿದರು. ಇದರಿಂದ ಗೊಂದಲ ಉಂಟಾಯಿತು. ಪರಿಸ್ಥಿತಿ ಕೈಮೀರಿದ್ದರಿಂದ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಈ ಘಟನೆಯಲ್ಲಿ ವಿವಿಧ ಪತ್ರಿಕೆಗಳ ನಾಲ್ಕು ಪತ್ರಕರ್ತರು ಹಾಗೂ ಒಬ್ಬ ಮಹಿಳೆ ಗಾಯಗೊಂಡಿದ್ದಾರೆ.

ಈ ಮಧ್ಯೆ ಭಾಷಣಕ್ಕೆ ನಿಂತ ಬಂಗಾರಪ್ಪ ಅವರ ಎದೆಗೆ ಕಲ್ಲೇಟು ಬಿದ್ದಿದ್ದರಿಂದ ಅವರ ವೇದಿಕೆಯಿಂದ ನಿರ್ಮಿಸಿದರು. ಸಂಗಮೇಶ್ ಅವರು ಕಾಂಗ್ರೆಸ್ ನಲ್ಲಿದ್ದರೂ ಇತ್ತೀಚೆಗೆ ಅವರು ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದರಿಂದ ಬಂಗಾರಪ್ಪ ಪರ ಬೆಂಬಲಿಗರು ಸಂಗಮೇಶ್ ವೇದಿಕೆಯಲ್ಲಿ ಕೂರಿಸಲು ನಿರಾಕರಿಸಿದ್ದೇ ಈ ಘಟನೆಗೆ ಕಾರಣವಾಗಿದೆ.

(ದಟ್ಸ್ ಕನ್ನಡ ವಾರ್ತೆ)

ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+