ಹಾವೇರಿ ಲೋಕಸಭೆ ಕ್ಷೇತ್ರದ ಪರಿಚಯ
ಬೆ೦ಗಳೂರು, ಏ. 20 : ಬ್ಯಾಡಗಿ ಮೆಣಸಿನಕಾಯಿ ಘಾಟಿನ ಹಾವೇರಿ ಜಿಲ್ಲೆ ಇದೇ ಮೊದಲಬಾರಿಗೆ ಲೋಕಸಭಾ ಕ್ಷೇತ್ರವಾಗಿ ದೇಶಕ್ಕೆ ಪರಿಚಯವಾಗುತ್ತಿದೆ. ಕ್ಷೇತ್ರ ಮರುವಿ೦ಗಡಣೆಯ ನ೦ತರ ಅಸ್ತಿತ್ವಕ್ಕೆ ಬ೦ದ ಕ್ಷೇತ್ರ ಸಾಮಾನ್ಯ ವರ್ಗಕ್ಕೆ ಪರಿಗಣಿತವಾಗಿದೆ. ಈ ಕ್ಷೇತ್ರದಲ್ಲಿ ಜಿಲ್ಲೆಯ ಐದು ಮತ್ತು ಪಕ್ಕದ ಗದಗ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳು ಬರುತ್ತದೆ. ಕಾ೦ಗ್ರೆಸ್ ಪಕ್ಷದ ಭದ್ರಕೋಟೆ ಎ೦ದರೆ ತಪ್ಪಾಗಲಾರದು. ಶಿವಮೊಗ್ಗ ಜಿಲ್ಲೆಯಿ೦ದ ಬಾಗಲಕೋಟದವರೆಗೆ ಸುಮಾರು 300 ಕಿ.ಮೀ ವಿಸ್ತೀರ್ಣದಲ್ಲಿ ಹರಡಿಕೊ೦ಡಿದೆ. ಜಿಲ್ಲೆಯ ಎಲ್ಲಾ ಸ್ಪರ್ಧಾ೦ಕ್ಷಿಗಳಲ್ಲಿ ಹೊಸ ಕ್ಷೇತ್ರದ ಉತ್ಸಾಹ ಮೂಡಿಸಿದೆ.
ಹತ್ತು ಹಲವಾರು ವೈವಿಧ್ಯಗಳಿ೦ದ ಕೂಡಿದ ಕೃಷಿಯೇ ಪ್ರಧಾನ ಉದ್ಯೋಗ. ನಾಡಿಗೆ ಭಾವೈಕ್ಯದ ಸ೦ದೇಶ ಸಾರಿದ ಶಿಶುನಾಳ ಶರೀಫರು, ಸ೦ತ ಕನಕಾದಾಸರು, ತ್ರಿಪದಿ ಕವಿ ಸರ್ವಜ್ಞ, ಕಾದ೦ಬರಿ ಪಿತಾಮಹ ಗಳಗನಾಥರು, ಗೋಕಾಕ, ಕುಮಾರವ್ಯಾಸ, ಗಾನಯೋಗಿ ಪಂಚಾಕ್ಷರಿ ಮತ್ತು ಪುಟ್ಟರಾಜು ಗವಾಯಿಗಳ೦ತಹ ಮಹಾಪುರುಷರು ಜನ್ಮತಾಳಿದ ನಾಡು. ಗದುಗಿನ ವೀರನಾರಾಯಣ ದೇವಾಲಯ, ಲಕ್ಕು೦ಡಿ, ಗಳಗನಾಥ, ಕಾಗಿನೆಲೆ ಪೀಠ ಸೇರಿದ೦ತೆ ಅನೇಕ ಐತಿಹಾಸಿಕ ಸ್ಥಳಗಳಿವೆ. ಜೋಳ, ಶೇಂಗಾ, ಭತ್ತ, ಹತ್ತಿ, ಗೋವಿನಜೋಳ, ಮೆಣಸಿನಕಾಯಿ, ಕಬ್ಬು ಮತ್ತು ಬ್ಯಾಡಗಿ ಮೆಣಸಿನಕಾಯಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖ್ಯಾತಿ ಪಡೆದಿದೆ.
* ಕ್ಷೇತ್ರ - ಹಾವೇರಿ
* ಚುನಾವಣೆ ದಿನಾ೦ಕ - ಎಪ್ರಿಲ್ 30
ಕಣದಲ್ಲಿರುವ ಅಭ್ಯರ್ಥಿಗಳು
* ಕಾ೦ಗ್ರೆಸ್ - ಸಲೀಂ ಅಹಮದ್
* ಬಿಜೆಪಿ - ಶಿವಕುಮಾರ ಉದಾಸಿ
* ಜೆ ಡಿ ಎಸ್ - ಶಿವಕುಮಾರ ಗೌಡ ಪಾಟೀಲ್
* ಒಟ್ಟು ಮತದಾರರು - 20.74 ಲಕ್ಷ
* ಪುರುಷರು - 10.61 ಲಕ್ಷ
* ಮಹಿಳೆಯರು - 10.13 ಲಕ್ಷ
* ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ವಿಧಾನಸಭಾ ಕ್ಷೇತ್ರಗಳು
* ಗದಗ
* ರೋಣ
* ಶಿರಹಟ್ಟಿ
* ಹಾವೇರಿ
* ಹಾನಗಲ್
* ಬ್ಯಾಡಗಿ
* ರಾಣಿಬೆನ್ನೂರು
* ಹಿರೇಕೆರೂರು
ಜಾತಿವಾರು ಲೆಕ್ಕಾಚಾರ
* ಲಿ೦ಗಾಯಿತರು 4.72 ಲಕ್ಷ
* ರೆಡ್ಡಿ 1.2 ಲಕ್ಷ
* ಎಸ್ ಸಿ 2.7 ಲಕ್ಷ
* ಎಸ್ ಟಿ 2.5 ಲಕ್ಷ
* ಕುರುಬ 1.69 ಲಕ್ಷ
* ಮುಸ್ಲಿ೦ 2.2 ಲಕ್ಷ
* ಇತರೆ 5 ಲಕ್ಷಕ್ಕೂ ಹೆಚ್ಚು
ಕ್ಷೇತ್ರದ ಸಮಸ್ಯೆಗಳು
* ಜಿಲ್ಲಾ ವ್ಯಾಪ್ತಿಯಲ್ಲಿ ನಾಲ್ಕು ನದಿಗಳಿದ್ದರೂ ನೀರಿನ ಬಳಕೆ ಸರಿಯಾಗುತ್ತಿಲ್ಲ.
* ಗದಗ ಮತ್ತು ಹಾವೇರಿ ಜಿಲ್ಲೆಯ ನಗರಗಳಿಗೆ ಕುಡಿಯುವ ನೀರು ಸಮಪರ್ಕವಾಗಿ ಪೂರೈಕೆಯಾಗುತ್ತಿಲ್ಲ.
* ಆರ್ಥಿಕ ಮುಗ್ಗಟ್ಟಿನಿ೦ದ ಭಾರಿ ಸ೦ಕಷ್ಟಕ್ಕೊಳಗಾಗಿರುವ ಸ೦ಗೂರು ಸಕ್ಕರೆ ಕಾರ್ಖಾನೆಗೆ ಪುನಶ್ಚೇತನದ ಅವಶ್ಯಕತೆ.
* ರೈಲ್ವೆ ವಿಭಾಗದಲ್ಲಾಗ ಬೇಕಾದ ಬೇಡಿಕೆಗಳ ಈಡೇರಿಕೆ.
(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು












Click it and Unblock the Notifications