ಶ್ರೀಲಂಕಾದಲ್ಲಿ ಆತ್ಮಹತ್ಯಾ ದಾಳಿ , 17 ಸಾವು
ಕೊಲಂಬೊ, ಏ. 20 : ಶ್ರೀಲಂಕಾ ದ್ವೀಪದ ಉತ್ತರ ಭಾಗದಲ್ಲಿ ತಮಿಳು ಉಗ್ರರು ನಡೆಸಿದ ಆತ್ಮಹತ್ಯಾ ದಾಳಿಯಲ್ಲಿ 17 ಜನ ನಾಗರಿಕರು ಸಾವನ್ನಪ್ಪಿದ್ದಾರೆ. ಪುತ್ತುಮಾಟಳನ ಎನ್ನುವ ದಾಳಿ ನಿರೋಧಕ ವಲಯದಲ್ಲಿ ಈ ದಾಳಿಯನ್ನು ಉಗ್ರರು ನಡೆಸಿದ್ದಾರೆ.
ಈ ಪ್ರದೇಶದಲ್ಲಿದ್ದ ಸುಮಾರು ಹತ್ತು ಸಾವಿರದಷ್ಟು ಶ್ರೀಲಂಕಾದ ತಮಿಳು ನಾಗರಿಕರನ್ನು ರಕ್ಷಿಸುವ ಕೆಲಸದಲ್ಲಿ ಶ್ರೀಲಂಕಾ ಸೇನೆ ನಿರತವಾಗಿದ್ದಾಗ ಎಲ್ ಟಿಟಿಇ ಉಗ್ರರು ಈ ದಾಳಿ ನಡೆಸಿದ್ದಾರೆಂದು ಶ್ರೀಲಂಕಾ ರಕ್ಷಣಾ ಸಚಿವಾಲಯ ಹೇಳಿಕೆ ನೀಡಿದೆ. ಶ್ರೀಲಂಕಾ ಉತ್ತರ ಭಾಗದ 20 ಕಿ.ಮೀ ದೂರದಲ್ಲಿರುವ ಈ ಪ್ರದೇಶದಲ್ಲಿ ಇನ್ನೂ ಒಂದು ಲಕ್ಷಕ್ಕೂ ಹೆಚ್ಚು ಮಂದಿ ನಾಗರಿಕರು ವಾಸಿಸುತ್ತಿದ್ದು, ಈ ಪ್ರದೇಶ ಇನ್ನೂ ಎಲ್ ಟಿಟಿಇ ವಶದಲ್ಲಿದೆ ಎಂದು ಸಚಿವಾಲಯ ಹೇಳಿಕೆ ನೀಡಿದೆ. 1983ರಿಂದ ಎಲ್ ಟಿಟಿಇ ಮತ್ತು ಶ್ರೀಲಂಕಾ ಸೇನೆ ನಡುವೆ ನಡೆಯುತ್ತಿರುವ ಈ ಕಾಳಗದಲ್ಲಿ ಸುಮಾರು ಎಪ್ಪತ್ತು ಸಾವಿರಕ್ಕೂ ಹೆಚ್ಚು ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಎಲ್ ಟಿಟಿಇ ಪ್ರಭಾಕರನ್ ಉಗ್ರನಲ್ಲ, ಕರುಣಾನಿಧಿ












Click it and Unblock the Notifications