ಕಸಬ್ ಪರ ವಕೀಲರಾಗಿ ಅಬ್ಬಾಸ್ ಕಜ್ಮಿ ನೇಮಕ

ಕಸಬ್ ಪರ ವಕಾಲತ್ತು ನಡೆಸಲು ಮುಂದಾಗಿದ್ದ ವಕೀಲೆ ಅಂಜಲಿ ವಾಗ್ಮಾರೆ ಅವರನ್ನು ವೃತ್ತಿ ಧರ್ಮಕ್ಕೆ ಅಗೌರವ ಸೂಚಿಸಿದ ಹಿನ್ನೆಲೆಯಲ್ಲಿ ಮುಂಬೈ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಂ ಎಲ್ ತೆಹಲಿಯಾನಿ ಕೇಸಿನಿಂದ ಕಿತ್ತುಹಾಕಿದ್ದರು. ಮುಂಬೈ ದಾಳಿಯಲ್ಲಿ ಹತ್ಯೆಯಾದವರ ಪರ ಅಂಜಲಿ ವಕಾಲತ್ತು ವಹಿಸಿದ್ದರು. ಅದರ ಜೊತೆಗೆ ಕಸಬ್ ಪರವೂ ಅವರು ವಕಾಲತ್ತು ವಹಿಸಲು ಮುಂದಾಗಿದ್ದರು.
ಈ ಸಂಗತಿಯನ್ನು ನ್ಯಾಯಾಲಯದ ಮುಂದೆ ಅಂಜಲಿ ಮುಕ್ತವಾಗಿ ಹೇಳಿರಲಿಲ್ಲ. ಏಕಕಾಲದಲ್ಲಿ ಒಬ್ಬ ವಕೀಲರಿಂದ ಫಿರ್ಯಾದಿದಾರ ಮತ್ತು ಆರೋಪಿ ಪರ ವಕಾಲತ್ತು ವಹಿಸಲು ಸಾಧ್ಯವಿಲ್ಲದ ಕಾರಣ ಅಂಜಲಿ ವಾಗ್ಮಾರೆ ಅವರನ್ನು ವಜಾಗೊಳಿಸಲಾಗಿತ್ತು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications