ಬೀದರ್ ಲೋಕಸಭಾ ಕ್ಷೇತ್ರದ ಪರಿಚಯ
ಬೆಂಗಳೂರು, ಏ. 16 : ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಬೀದರ್ ಕ್ಷೇತ್ರ ಇದೀಗ ಸಾಮಾನ್ಯ ವರ್ಗಕ್ಕೆ ಬದಲಾಗಿದೆ. ಜಿದ್ದಾಜಿದ್ದಿನ ಹೋರಾಟಕ್ಕೆ ಪ್ರಮುಖ ಪಕ್ಷಗಳ ರಂಗತಾಲೀಮು ಶುರುವಾಗಿದೆ. ಪ್ರಬಲ ಲಿಂಗಾಯಿತ ಸಮಾಜದವರು ಕ್ಷೇತ್ರವನ್ನು ತಮ್ಮ ತೆಕ್ಕೆಗೆ ಹಾಕಿಕೊಳ್ಳಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ. ವ್ಯಕ್ತಿ ಮತ್ತು ಪಕ್ಷಕ್ಕಿಂತ ಇಲ್ಲಿ ಜಾತಿ ಬಲವೇ ಮೇಲುಗೈ ಸಾಧಿಸುತ್ತಿರುವುದು ಗಮನಾರ್ಹ. ಕಾಂಗ್ರೆಸ್ ಮತ್ತು ಬಿಜೆಪಿ ಬಿಟ್ಟರೆ ಅನ್ಯ ಪಕ್ಷದವರು ಇಲ್ಲಿ ನೆಲೆ ಕಾಣಲಿಲ್ಲ. ಮೀಸಲು ಕ್ಷೇತ್ರವಾಗಿದ್ದರಿಂದ ಮೇಲ್ವರ್ಗದ ಜನನಾಯಕರು ಅಭಿವೃದ್ದಿ ಬಗ್ಗೆ ತಲೆಕೆಡಿಸಿಕೊಂಡಿಲ್ಲ.
12ನೇ ಶತಮಾನದಲ್ಲಿ ಬಸವಣ್ಣನವರ ಸಾಮಾಜಿಕ ಕ್ರಾಂತಿ, ಅನುಭವ ಮಂಟಪ ರೂಪದಲ್ಲಿ ವಿಶ್ವಕ್ಕೆ ಪ್ರಥಮ ಸಂಸತ್ತು ನೀಡಿದ ಮತ್ತು ಶ್ರೇಷ್ಠ ವಚನ ಸಾಹಿತ್ಯ ಕೂಟದ ಪ್ರಖ್ಯಾತಿಯ ನಾಡು. ಶರಣರು ಸ್ತ್ರೀ ಸಮಾನತೆ ಜಾರಿಗೆ ತಂದರೂ ಯಾವುದೇ ಪಕ್ಷ ಇದುವರೆಗೆ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸಲಿಲ್ಲ. ಹೈದರಾಬಾದ್ ಕರ್ನಾಟಕಕ್ಕೆ ಹೊಸ ರೂಪ ನೀಡಿದ ಭೂಮಿ. ಅಸ್ಟೂರಿನ ಅಹಮದ್ ಷಾವಾಲಿ ದರ್ಗಾದಲ್ಲಿ ಅಲ್ಲಮ ಪ್ರಭುಗಳ ಜಾತ್ರೆ ನಡೆಯುತ್ತದೆ. ನಾನಕ್ ಜಿ ಪಾದ ಸ್ಪರ್ಶಿಸಿದ ಪಾವನಭೂಮಿ. ಎರಡು ಮೂರು ದಶಕಗಳ ಹಿಂದೆ ತಲೆಯೆತ್ತಿದ ಬಹುತೇಕ ಕೈಗಾರಿಕೆಗಳು ಈಗ ರೋಗಗ್ರಸ್ತ. ಕಬ್ಬು, ತೊಗರಿ ಕ್ಷೇತ್ರದ ಪ್ರಮುಖ ವಾಣಿಜ್ಯ ಬೆಳೆಗಳು.
* ಕ್ಷೇತ್ರ - ಬೀದರ್ ಲೋಕಸಭೆ ಕ್ಷೇತ್ರ
* ಚುನಾವಣೆ ದಿನಾಂಕ - ಏಪ್ರಿಲ್ 23
ಅಭ್ಯರ್ಥಿಗಳು
* ಕಾಂಗ್ರೆಸ್ - ಎನ್ ಧರಂ ಸಿಂಗ್
* ಬಿಜೆಪಿ - ಗುರುಪಾದಪ್ಪ ನಾಗಮಾರಪಲ್ಲಿ
* ಜನತಾದಳ (ಎಸ್) - ಸುಭಾಷ್ ತಿಪ್ಪಣ್ಣ ನೇಳಗಿ
* ಬಿಎಸ್ಪಿ - ಬುಳ್ಳಾ ಸುಬ್ಬರಾವ್
ಕ್ಷೇತ್ರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳು
* ಔರಾದ್
* ಭಾಲ್ಕಿ
* ಬೀದರ್
* ಬೀದರ್ ದಕ್ಷಿಣ
* ಬಸವಕಲ್ಯಾಣ
* ಹುಮನಾಬಾದ್
* ಆಳಂದ
* ಚಿಂಚೋಳಿ
* ಒಟ್ಟು ಮತದಾರರು - 14.64ಲಕ್ಷ
* ಪುರುಷರು - 7.56 ಲಕ್ಷ
* ಮಹಿಳೆಯರು - 7.07 ಲಕ್ಷ
ಜಾತಿವಾರು ಲೆಕ್ಕಾಚಾರ
* ಲಿಂಗಾಯತ 3 ಲಕ್ಷ
* ಮುಸ್ಲಿಂ 2.60 ಲಕ್ಷ
* ಪರಿಶಿಷ್ಟ ಜಾತಿ 2.95 ಲಕ್ಷ
* ಮರಾಠ 1.70 ಲಕ್ಷ
* ಕುರುಬ 1.55 ಲಕ್ಷ
* ಕಬ್ಬಲಿಗ 55 ಸಾವಿರ
* ಕ್ರಿಶ್ಚಿಯನ್ 60 ಸಾವಿರ
* ಇತರ 1.65 ಲಕ್ಷ
ಕ್ಷೇತ್ರದ ಸಮಸ್ಯೆಗಳು
* ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಕಾರಂಜಿ ಯೋಜನೆ
* ಆಮೆಗತಿಯಿಂದ ಸಾಗುತ್ತಿರುವ ಬೀದರ್ - ಗುಲ್ಬರ್ಗ ರೈಲ್ವೆ ಕಾಮಗಾರಿ ಯೋಜನೆ
* ವಿಮಾನ ನಿಲ್ದಾಣ ಸಿದ್ಧವಾಗಿದ್ದರೂ ವಿಮಾನ ಹಾರಾಟಕ್ಕೆ ಕೇಂದ್ರದಿಂದ ಇನ್ನೂ ಅನುಮತಿಯಿಲ್ಲ.
* ನೆರೆ, ಪ್ರಕೃತಿ ವಿಕೋಪದಿಂದ ರೈತ ತತ್ತರ.
* ರೋಗಗ್ರಸ್ತ ಕಾರ್ಖಾನೆ ಪುನಶ್ಚೇತನಕ್ಕೆ ಕ್ರಮವಿಲ್ಲ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications