ರಾಜಕೀಯ ವ್ಯಭಿಚಾರ ಹೇಳಿಕೆಗೆ ಯಡಿಯೂರಪ್ಪ ಆಕ್ಷೇಪ

ಅಂಬೇಡ್ಕರ್ ಜಯಂತಿ ಹಿನ್ನೆಲೆಯಲ್ಲಿ ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ ಮಾಡಿ ನಂತರ ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಯಡಿಯೂರಪ್ಪ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ರಾಜ್ಯದಲ್ಲಿ ದೃವೀಕರಣ ನಡೆದಿದೆ. ಅನ್ಯ ಪಕ್ಷಗಳ ಮುಖಂಡರು ಬಿಜೆಪಿಗೆ ಸೇರುತ್ತಿರುವುದನ್ನು ಸಹಿಸದ ದೇವೇಗೌಡರು, ಈ ದೃವೀಕಣವನ್ನು ರಾಜಕೀಯ ವ್ಯಭೀಚಾರ ಎನ್ನುವ ಮೂಲಕ ಕೀಳು ಹೇಳಿಕೆ ನೀಡುತ್ತಿದ್ದಾರೆ. ಇದು ಮಾಜಿ ಪ್ರಧಾನಮಂತ್ರಿಯೊಬ್ಬರಿಂದ ಬರುವೇ ಮಾತೇ ಎಂದು ಖಾರವಾಗಿ ಪ್ರಶ್ನಿಸಿದರು.
ನಿಮ್ಮ ಮಗನ ಕೈಹಿಡಿದು ಅವರನ್ನು ಮುಖ್ಯಮಂತ್ರಿ ಮಾಡಿದೆವಲ್ಲ. ಅದು ಕೂಡಾ ಒಂದು ರೀತಿಯ ರಾಜಕೀಯ ದೃವೀಕರಣ ಅಲ್ಲವೇ ? ಅದಕ್ಕೆ ಏನೆಂದು ಹೆಸರಿಡುತ್ತೀರಿ ಎಂದು ಯಡಿಯೂರಪ್ಪ ಪ್ರಶ್ನಿಸಿದರು. ನಂತರ ಕಾಂಗ್ರೆಸ್ ಪಕ್ಷವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಯಡಿಯೂರಪ್ಪ, ದೀನ-ದಲಿತರ ಚಾಂಪಿಯನ್ನರು ಎಂದು ಹೇಳಿಕೊಳ್ಳುವ ತಾಂಗ್ರೆಸ್ಸಿಗರು ಅವರ ಉದ್ಧಾರಕ್ಕೆ ಯಾವ ಘನಂಧಾರಿ ಕೆಲಸ ಮಾಡಿದ್ದಾರೆ. ಒಬ್ಬ ಹಿರಿಯ ನಾಯಕ, ಮುಖ್ಯಮಂತ್ರಿ ಹುದ್ದೆಯ ಅಕಾಂಕ್ಷಿ ಮಲ್ಲಿಕಾರ್ಜುನ ಖರ್ಗೆ ಅವರ ಖುರ್ಚಿ ಕಸಿದುಕೊಂಡಿರೆಲ್ಲ ನಿಮ್ಮ ಕ್ರಮ ಸರಿಯೇ ? ದಲಿತರಿಗೆ ಮಾಡಿರುವ ಅನ್ಯಾಯ ಇದಕ್ಕಿಂತ ಬೇರೆ ಬೇಕೆ ಎಂದು ಪ್ರಶ್ನಿಸಿದರು.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications