ಇನ್ಫಿ ಬಿಪಿಓ ಉದ್ಯೋಗಿ ಕೊಲೆ ಪ್ರಕರಣ ಬಹಿರಂಗ
ಬೆಂಗಳೂರು, ಏ. 15 : ಕಳೆದ ತಿಂಗಳು ನಡೆದಿದ್ದ ಇನ್ಫೋಸಿಸ್ ಸಂಸ್ಥೆಯ ಬಿಪಿಓ ಉದ್ಯೋಗಿ ಕೊಲೆ ಪ್ರಕರಣವನ್ನು ಬೇಧಿಸವಲ್ಲಿ ಬಾಣಸವಾಡಿ ಪೊಲೀಸರು ಸಫಲರಾಗಿದ್ದು, ಮೃತನ ಪತ್ನಿ ಹಾಗೂ ಅಕೆಯ ಪ್ರಿಯಕರ ಸೇರಿಕೊಂಡು ಕೊಲೆ ಮಾಡಿದ್ದ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ರಾಮಸ್ವಾಮಿ ಪಾಳ್ಯದ ನಿವಾಸಿ ಉಮೇಶ್ ಕೃಷ್ಣನ್ (26) ಅವರ ಮನೆಗೆ ಮಾರ್ಚ್ 3 ರಂದು ನುಗ್ಗಿದ್ದು ದುಷ್ಕರ್ಮಿಗಳು ಅವರ ಬಾಯಿ ಮತ್ತು ಮೂಗಿಗೆ ಪ್ಲಾಸ್ಟರ್ ಸುತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಉಮೇಶ್ ಅವರ ಪತ್ನಿ ಹನಿಮೇರಿ ಮತ್ತು ಬಿಪಿನ್ ಕುಮಾರ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಮದುವೆಯಾದ ಕೇವಲ ಆರು ತಿಂಗಳಲ್ಲೇ ಆಕೆ ಪತಿಯನ್ನು ಕೊಲೆ ಮಾಡಿಸಿದ್ದಾಳೆ. ಪ್ರಿಯಕರನ ಜೊತೆ ಲಂಡನ್ ಗೆ ಹೋಗಲು ಯೋಚಿಸಿದ್ದಳು ಎಂದು ಬೆಂಗಳೂರು ಪೊಲೀಸ್ ಆಯುಕ್ತ ಶಂಕರ ಬಿದರಿ ಬಹಿರಂಗಪಡಿಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಹನಿಮೇರಿ, ಪ್ರಿಯಕರ ತಮಿಳುನಾಡಿನ ತಿರುನೆಲ್ವೇಲಿಯ ಇಂಜಿನಿಯರ್ ಮುತ್ತುಕುಮಾರ್, ಆತನ ಸ್ನೇಹಿತ ಇಂಜಿನಿಯರ್ ಚಂಚಲ್, ಜಾರ್ಖಂಡ್ ಪತ್ರಕರ್ತ ಚಂದನ್ ಕುಮಾರ್ ಹಾಗೂ ಪಾಸ್ಕಲ್ ಎಂಬುವವರು ತಲೆಮರೆಸಿಕೊಂಡಿದ್ದಾರೆ. ಹನಿಮೇರಿ ಬಿಇಡ್ ಓದುತ್ತಿರುವುದಾಗ ಇಂಜಿನಿಯರಿಂಗ್ ಓದುತ್ತಿದ್ದ ಮುತ್ತುಕುಮಾರ್ ನ ಪರಿಚಯವಾಗಿತ್ತು. ನಂತರ ಇಬ್ಬರೂ ಪರಸ್ಪರ ಪ್ರೀತಿಸಲು ಆರಂಭಿಸಿದರು ಎಂದು ಬಿದರಿ ವಿವರಿಸಿದರು.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications