ಯುಪಿಎಗಿಂತ ಎನ್ ಡಿಎ ಮುಂದೆ, ಸಮೀಕ್ಷೆ
ನವದೆಹಲಿ, ಏ. 7 : ಬಿಜೆಪಿ ನೇತೃತ್ವದ ಎನ್ ಡಿಎ ಒಕ್ಕೂಟ ಕಾಂಗ್ರೆಸ್ ನೇತೃತ್ವದ ಯುಪಿಎಗಿಂತ ಮುಂದಿದ್ದರೂ ಅಧಿಕಾರದ ಗದ್ದುಗೆ ಏರಲು ತೃತೀಯ ಮತ್ತು ನಾಲ್ಕನೇ ರಂಗ ಪ್ರಧಾನ ಪಾತ್ರ ವಹಿಸಲಿವೆ ಎಂದು ಇಂಡಿಯಾ ಟಿವಿ ತನ್ನ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ತಿಳಿಸಿದೆ. ಕರ್ನಾಟಕದಲ್ಲಿ ಜನತಾದಳ ಕಳೆದ ಚುನಾವಣೆಗೆ ಹೋಲಿಸಿದರೆ ಬಲವೃದ್ದಿಗೊಳ್ಳಲಿದ್ದು, ನಾಲ್ಕು ಕ್ಷೇತ್ರದಲ್ಲಿ ಜಯಗಳಿಸಿದರೆ, ಬಿಜೆಪಿ ಮತ್ತು ಕಾಂಗ್ರೆಸ್ ಗೆ ತಲಾ ಒಂದೊಂದು ಸೀಟ್ ನಷ್ಟವಾಗಬಹುದು ಎಂದು ರಜತ್ ಶರ್ಮ ನಡೆಸಿಕೊಟ್ಟ ಇಂಡಿಯಾ ಟಿವಿ ತನ್ನ ಸಮೀಕ್ಷೆಯಲ್ಲಿ ತಿಳಿಸಿದೆ.
ಸಮೀಕ್ಷೆಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಪಕ್ಷ 144 ಸ್ಥಾನ ಮತ್ತು ಕಾಂಗ್ರೆಸ್ 133 ಕ್ಷೇತ್ರದಲ್ಲಿ ಜಯಗಳಿಸುತ್ತದೆ ಎಂದಿದೆ. ಹೆಚ್ಚಿನ ವಿವರಗಳು ಇಂತಿವೆ :
ಎನ್ ಡಿ ಎ 187 ( ಬಿಜೆಪಿ 144, ಜೆಡಿಯು 19, ಶಿವಸೇನೆ 12, ಅಕಾಲಿದಳ 4, ಆರ್ಎಲ್ಡಿ 3, ಅಸ್ಸಾ೦ಗಣ ಪರಿಷತ್ 4, ಐಎನ್ಎಲ್ಡಿ 1)
ಯುಪಿಎ 178 ( ಕಾಂಗ್ರೆಸ್ 133, ಎನ್ಸಿಪಿ 14, ಟಿಎಂಸಿ 11, ಡಿ ಎಂ ಕೆ 7, ಯುಡಿಎಫ್ 8, ಜೆಎಂಎಂ 2)
ತೃತೀಯರಂಗ 121 ( ಬಿಎಸ್ಪಿ 26, ಟಿಡಿಪಿ/ಟಿಆರ್ಎಸ್ 14, ಎಡಪಕ್ಷಗಳು 35, ಜೆಡಿಎಸ್ 4, ಬಿಜೆಡಿ 10, ಎಐಡಿಎಂಕೆ 31, ಇತರ 1)
ನಾಲ್ಕನೇರಂಗ 57 ( ಎಸ್ಪಿ 30, ಆರ್ ಜೆ ಡಿ, ಎಲ್ಜೆಪಿ 15, ಪಿಆರ್ಪಿ 6, ಇತರ 6)
ಪ್ರಮುಖ ರಾಜ್ಯಗಳಲ್ಲಿ ನಡೆಸಿದ ಪ್ರಕಾರ
ಉತ್ತರಪ್ರದೇಶದಲ್ಲಿ - ಎಸ್ಪಿ 30, ಬಿಎಸ್ಪಿ 26 ಮತ್ತು ಬಿಜೆಪಿ 15 ಕ್ಷೇತ್ರದಲ್ಲಿ ಜಯಗಳಿಸುತ್ತದೆ.
ಗುಜರಾತ್ ನಲ್ಲಿ - ಬಿಜೆಪಿ 18 ಮತ್ತು ಕಾಂಗ್ರೆಸ್ 8 ಕ್ಷೇತ್ರದಲ್ಲಿ ಜಯಗಳಿಸುತ್ತದೆ.
ತಮಿಳುನಾಡಿನಲ್ಲಿ - ಎಐಡಿಎಂಕೆ 31 ಮತ್ತು ಡಿಎಂಕೆ 7 ಕ್ಷೇತ್ರದಲ್ಲಿ ಜಯಗಳಿಸುತ್ತದೆ.
ಮಧ್ಯಪ್ರದೇಶದಲ್ಲಿ - ಬಿಜೆಪಿ 20 ಮತ್ತು ಕಾಂಗ್ರೆಸ್ 9 ಕ್ಷೇತ್ರದಲ್ಲಿ ಜಯಗಳಿಸುತ್ತದೆ.
ಮಹಾರಾಷ್ಟ್ರದಲ್ಲಿ - ಬಿಜೆಪಿ 13, ಶಿವಸೇನೆ 12 ಮತ್ತು ಕಾಂಗ್ರೆಸ್ 11 ಕ್ಷೇತ್ರದಲ್ಲಿ ಜಯಗಳಿಸುತ್ತದೆ.
ಬಿಹಾರ್ ನಲ್ಲಿ - ಜೆಡಿಯು 18, ಆರ್ ಜೆ ಡಿ, ಎಲ್ಜೆಪಿ 14 ಮತ್ತು ಬಿಜೆಪಿ 8 ಕ್ಷೇತ್ರದಲ್ಲಿ ಜಯಗಳಿಸುತ್ತದೆ.
ಪಶ್ಚಿಮಬಂಗಾಳದಲ್ಲಿ - ಎಡಪಕ್ಷಗಳು 25, ತೃಣಮೂಲ ಕಾಂಗ್ರೆಸ್ 11 ಮತ್ತು ಕಾಂಗ್ರೆಸ್ 6 ಕ್ಷೇತ್ರದಲ್ಲಿ ಜಯಗಳಿಸುತ್ತದೆ.
(ಏಜನ್ಸೀಸ್)
ಲೋಕಸಭೆ ಚುನಾವಣೆ, ಇಂಡಿಯಾ ಟುಡೇ ಸಮೀಕ್ಷೆ
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications