10 ಜನ ಗಂಡಂದಿರಿಗೆ ಮೋಸ ಮಾಡಿದ ಮಹಾಸಾಧ್ವಿ
ಮುಂಬೈ, ಏ. 6: ಈಕೆಯ ಹೆಸರು ಕೌಸರ್ ಬೇಗಂ, D/o. ಇಕ್ಬಾಲ್ ಪಾಶಾ ಮತ್ತು ತಾಯಿ ಗುಲ್ನಾಡ್, ವಯಸ್ಸು 32. ಬೆಂಗಳೂರು ಮೂಲದ ಈಕೆ ಕಳೆದ 18 ವರ್ಷಗಳಲ್ಲಿ 10 ಜನ ಮುಂಬೈ ಉದ್ಯಮಿಗಳನ್ನು ಮದುವೆಯಾಗಿ ಅವರಿಗೆ ವಂಚಿಸಿ, ಬೆದರಿಸಿ ಅಷ್ಟೂ ಜನರಿಗೆ ವಿಚ್ಛೇದನ ನೀಡಿ ಈಗ ಮುಂಬೈ ಸಿಯಾನ್ ಪೋಲೀಸರ ಅತಿಥಿಯಾಗಿದ್ದಾಳೆ.
ಈ ಕೆಲಸಕ್ಕೆ ಪ್ರೋತ್ಸಾಹಿಸುತ್ತಿದ್ದ ಈಕೆಯ ಹೆತ್ತವರೂ ಕಂಬಿ ಎಣಿಸುತ್ತಿದ್ದಾರೆ. ಸದ್ಯಕ್ಕೆ ಈಕೆಯ ಪತಿಯಾಗಿರುವ (9ನೇ) ಸಯ್ಯದ್ ಅಹ್ಮದ್ ಅನ್ನುವವರು, ತನ್ನ ಪತ್ನಿ ಕೌಸರ್ ಕಳೆದ ಎರಡು ವರ್ಷಗಳಿಂದ ನನ್ನನ್ನು ಬ್ಲಾಕ್ಮೇಲ್ ಮಾಡುತ್ತಿದ್ದಾಳೆ ಎಂದು ದೂರು ದಾಖಲಿಸಿದಾಗ ಈಕೆಯ ಬಣ್ಣ ಬಯಲಾಗಿದೆ.
ಕೌಸರ್ ತನ್ನ ಹೆತ್ತವರೊಂದಿಗೆ ಪಂಚತಾರಾ ಹೋಟೆಲ್ ಗಳಿಗೆ ಭೇಟಿ ನೀಡಿ ಶ್ರೀಮಂತ ವ್ಯಾಪಾರಿಗಳನ್ನು ಬುಟ್ಟಿಗೆ ಹಾಕೆಕೊ೦ಡು ಮದುವೆಯಾಗುತ್ತಿದ್ದಳು. ಮದುವೆಯಾಗಿ ಸ್ವಲ್ಪ ದಿನ ಸಂಸಾರ ನಡೆಸಿ ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿ ಗಂಡನ ಮನೆಯವರ ಮೇಲೆ ವರುದಕ್ಷಿಣೆ ಕಿರುಕುಳ ಕೇಸು ದಾಖಲಿಸುತ್ತಿದ್ದಳು ಎಂದು 'ಗಂಡ ನಂಬರ್ 9' ಪರ ವಕೀಲರು ಹೇಳಿದ್ದಾರೆ.
2006ರಲ್ಲಿ ಈಕೆಗೆ ಇವರ ಜೊತೆ ಮದುವೆಯಾಗಿತ್ತು. ಮದುವೆ ಸಮಯದಲ್ಲಿ ಗಂಡನ ಮನೆಯವರು ನೀಡಿದ್ದ ಚಿನ್ನ, ವಜ್ರಾಭರಣಗಳೊಂದಿಗೆ ಬೆಂಗಳೂರಿಗೆ ಪರಾರಿಯಾಗಿದ್ದಳು. ಅಷ್ಟೇ ಅಲ್ಲದೆ ಸಿಯಾನ್ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿ, ಅಹಮದ್ ಅವರಿಗೆ ಮದುವೆಯ ಸಮಯದಲ್ಲಿ ವರದಕ್ಷಿಣೆ ರೂಪವಾಗಿ 15 ಲಕ್ಷ ರುಪಾಯಿ ನೀಡಿದ್ದೆವು ಅದನ್ನು ಹಿಂದಿರುಗಿಸಿ ಕೊಡಬೇಕೆಂದು ದೂರಿನಲ್ಲಿ ಕೇಳಿಕೊಂಡಿದ್ದಳು. ಪೋಲೀಸರ ತೀವ್ರ ವಿಚಾರಣೆಯ ನಂತರ ಸತ್ಯ ಹೊರಗೆ ಬಂದಿದ್ದು , ಈಕೆಯ ಹತ್ತನೇ ಪತಿ ವೃತ್ತಿಯಲ್ಲಿ ವೈದ್ಯನಾಗಿದ್ದು, ದುಬೈನಲ್ಲಿ ನೆಲೆಸಿದ್ದಾನೆ.
(ದಟ್ಸ್ ಕನ್ನಡ ವಾರ್ತೆ)
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications