10 ಜನ ಗಂಡಂದಿರಿಗೆ ಮೋಸ ಮಾಡಿದ ಮಹಾಸಾಧ್ವಿ
ಮುಂಬೈ, ಏ. 6: ಈಕೆಯ ಹೆಸರು ಕೌಸರ್ ಬೇಗಂ, D/o. ಇಕ್ಬಾಲ್ ಪಾಶಾ ಮತ್ತು ತಾಯಿ ಗುಲ್ನಾಡ್, ವಯಸ್ಸು 32. ಬೆಂಗಳೂರು ಮೂಲದ ಈಕೆ ಕಳೆದ 18 ವರ್ಷಗಳಲ್ಲಿ 10 ಜನ ಮುಂಬೈ ಉದ್ಯಮಿಗಳನ್ನು ಮದುವೆಯಾಗಿ ಅವರಿಗೆ ವಂಚಿಸಿ, ಬೆದರಿಸಿ ಅಷ್ಟೂ ಜನರಿಗೆ ವಿಚ್ಛೇದನ ನೀಡಿ ಈಗ ಮುಂಬೈ ಸಿಯಾನ್ ಪೋಲೀಸರ ಅತಿಥಿಯಾಗಿದ್ದಾಳೆ.
ಈ ಕೆಲಸಕ್ಕೆ ಪ್ರೋತ್ಸಾಹಿಸುತ್ತಿದ್ದ ಈಕೆಯ ಹೆತ್ತವರೂ ಕಂಬಿ ಎಣಿಸುತ್ತಿದ್ದಾರೆ. ಸದ್ಯಕ್ಕೆ ಈಕೆಯ ಪತಿಯಾಗಿರುವ (9ನೇ) ಸಯ್ಯದ್ ಅಹ್ಮದ್ ಅನ್ನುವವರು, ತನ್ನ ಪತ್ನಿ ಕೌಸರ್ ಕಳೆದ ಎರಡು ವರ್ಷಗಳಿಂದ ನನ್ನನ್ನು ಬ್ಲಾಕ್ಮೇಲ್ ಮಾಡುತ್ತಿದ್ದಾಳೆ ಎಂದು ದೂರು ದಾಖಲಿಸಿದಾಗ ಈಕೆಯ ಬಣ್ಣ ಬಯಲಾಗಿದೆ.
ಕೌಸರ್ ತನ್ನ ಹೆತ್ತವರೊಂದಿಗೆ ಪಂಚತಾರಾ ಹೋಟೆಲ್ ಗಳಿಗೆ ಭೇಟಿ ನೀಡಿ ಶ್ರೀಮಂತ ವ್ಯಾಪಾರಿಗಳನ್ನು ಬುಟ್ಟಿಗೆ ಹಾಕೆಕೊ೦ಡು ಮದುವೆಯಾಗುತ್ತಿದ್ದಳು. ಮದುವೆಯಾಗಿ ಸ್ವಲ್ಪ ದಿನ ಸಂಸಾರ ನಡೆಸಿ ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿ ಗಂಡನ ಮನೆಯವರ ಮೇಲೆ ವರುದಕ್ಷಿಣೆ ಕಿರುಕುಳ ಕೇಸು ದಾಖಲಿಸುತ್ತಿದ್ದಳು ಎಂದು 'ಗಂಡ ನಂಬರ್ 9' ಪರ ವಕೀಲರು ಹೇಳಿದ್ದಾರೆ.
2006ರಲ್ಲಿ ಈಕೆಗೆ ಇವರ ಜೊತೆ ಮದುವೆಯಾಗಿತ್ತು. ಮದುವೆ ಸಮಯದಲ್ಲಿ ಗಂಡನ ಮನೆಯವರು ನೀಡಿದ್ದ ಚಿನ್ನ, ವಜ್ರಾಭರಣಗಳೊಂದಿಗೆ ಬೆಂಗಳೂರಿಗೆ ಪರಾರಿಯಾಗಿದ್ದಳು. ಅಷ್ಟೇ ಅಲ್ಲದೆ ಸಿಯಾನ್ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿ, ಅಹಮದ್ ಅವರಿಗೆ ಮದುವೆಯ ಸಮಯದಲ್ಲಿ ವರದಕ್ಷಿಣೆ ರೂಪವಾಗಿ 15 ಲಕ್ಷ ರುಪಾಯಿ ನೀಡಿದ್ದೆವು ಅದನ್ನು ಹಿಂದಿರುಗಿಸಿ ಕೊಡಬೇಕೆಂದು ದೂರಿನಲ್ಲಿ ಕೇಳಿಕೊಂಡಿದ್ದಳು. ಪೋಲೀಸರ ತೀವ್ರ ವಿಚಾರಣೆಯ ನಂತರ ಸತ್ಯ ಹೊರಗೆ ಬಂದಿದ್ದು , ಈಕೆಯ ಹತ್ತನೇ ಪತಿ ವೃತ್ತಿಯಲ್ಲಿ ವೈದ್ಯನಾಗಿದ್ದು, ದುಬೈನಲ್ಲಿ ನೆಲೆಸಿದ್ದಾನೆ.
(ದಟ್ಸ್ ಕನ್ನಡ ವಾರ್ತೆ)
-
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral












Click it and Unblock the Notifications