ಜೆಡಿಎಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ದೇವೇಗೌಡ

Devegowda release s JD(S) election manifesto
ನವದೆಹಲಿ, ಏ. 6 : ಲೋಕಸಭೆ ಚುನಾವಣೆಯ ನಂತರ ರಾಷ್ಟ್ರ ರಾಜಕಾರಣದಲ್ಲಿ ಮಹತ್ತರ ಪಾತ್ರ ವಹಿಸಬೇಕು ಎಂಬ ಮಹತ್ವಾಕಾಂಕ್ಷೆ ಇರಿಸಿಕೊಂಡಿರುವ ಜೆಡಿಎಸ್ ಪಕ್ಷದ ಅಧ್ಯಕ್ಷ ಎಚ್ ಡಿ ದೇವೇಗೌಡ ಅವರ ಸೋಮವಾರ ನವದೆಹಲಿಯಲ್ಲಿ ಪಕ್ಷದ ಚುನಾವಣೆ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಗ್ರಾಮೀಣ ಪ್ರದೇಶದ ಜನ ಮತ್ತು ರೈತರ ಓಲೈಕೆಗೆ ಹೆಚ್ಚು ಆದ್ಯತೆ ನೀಡಿರುವ ಗೌಡರು, ಸಾಲ ಮನ್ನಾ, ಮಾಸಾಶನ ಮತ್ತಿತರ ಮತ ಗಳಿಕೆ ಗಿಮಿಕ್ ಗಳನ್ನು ಉಪಯೋಗಿಸಿದ್ದಾರೆ. ಮುಖ್ಯವಾಗಿ ಶ್ರೀರಾಮಸೇನೆ ಹಾಗೂ ಭಜರಂದಗದಳವನ್ನು ನಿಷೇಧಿಸುವುದಾಗಿ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದ್ದಾರೆ.

ಪ್ರಣಾಳಿಕೆ ಮುಖ್ಯಾಂಶಗಳು

* ಸಹಕಾರಿ ಸಂಘಗಳಿಂದ ಸಾಲ ಪಡೆದ ಸಣ್ಣ ಮತ್ತು ಮಧ್ಯಮ ರೈತರ ಸಾಲ ಮನ್ನಾ
* ನೀರಾವರಿಗೆ ವಿಶೇಷ ಆಧ್ಯತೆ
* 60 ವರ್ಷ ಮೇಲ್ಪಟ್ಟ ರೈತರಿಗೆ ತಿಂಗಳಿಗೆ ಮಾಸಿಕ 500 ರುಪಾಯಿ.
* ರಾಷ್ಟ್ರೀಯ ಬ್ಯಾಂಕುಗಳ ಸಾಲ ನೀತಿ ತಿದ್ದುಪಡಿ
* ಗ್ರಾಮೀಣ ಮೂಲಭೂತ ಸೌಲಭ್ಯಗಳ ಅಭಿವೃದ್ಧಿ
* ಗ್ರಾಮೀಣ ಬಡಜನರಿಗೆ ಗೃಹ ನೀತಿ
* ಸಮಗ್ರ ಆರೋಗ್ಯ ವಿಮೆ
* ಶ್ರೀರಾಮಸೇನೆ ಹಾಗೂ ಭಜರಂಗದಳ ನಿಷೇಧ
* ನೀರು, ರಸ್ತೆ, ವಸತಿ, ಶಿಕ್ಷಣ ಮತ್ತು ಆರೋಗ್ಯ ಕೇಂದ್ರಗಳ ನವೀಕರಣ
* ಗ್ರಾಮೀಣ ಸ್ತ್ರೀ ಶಕ್ತಿ ಸಂಘಗಳಿಂದ ಮಹಿಳೆಯರಿಗೆ ಆರ್ಥಿಕ ನೆರವು
* ಬಡತನ ರೇಖೆಗಿಂತ ಕೆಳಗಿನವರಿಗೆ ವಸತಿ ನೀಡುವುದು
* ವಿದ್ಯಾವಂತ ವಿರುದ್ಯೋಗಿಗಳ ಸ್ವ ಉದ್ಯೋಗಕ್ಕೆ ಬ್ಯಾಂಕ್ ಗಳ ಮೂಲಕ ಸಾಲ
* ಕೋಳಿ ಸಾಗಣಿಕೆ, ಪಶು ಸಂಗೋಪನೆ, ಮೀನು, ಹೈನುಗಾರಿಕೆ ಮತ್ತು ತೋಟಗಾರಿಕೆ ಹೆಚ್ಚಿನ ಆದ್ಯತೆ
* ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗೆ ಶೇ. 5ರ ಬಡ್ಡಿದರದಲ್ಲಿ ಸಾಲ
* ಮಹಿಳೆ ಮೀಸಲಾತಿಗೆ ಸಂಸತ್ತಿನಲ್ಲಿ ಬೆಂಬಲ
* 60 ವರ್ಷ ಮೇಲ್ಪಟ್ಟ ಕಲಾವಿದರಿಗೆ 1000 ತಿಂಗಳು ಮಾಸಾಶನ
* ಅಸಂಘಟಿತ ಕಾರ್ಮಿಕರಿಗೆ ಸಾಮಾಜಿತ ಭದ್ರತೆ
* ವಿದೇಶಾಂಗ ನೀತಿ ಪರಿಷ್ಕರಣೆ

(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+