ಅನಂತ ಹೆಗಡೆ ಹೇಳಿಕೆ ಅನಂತಮೂರ್ತಿ ಅಸಮಾಧಾನ

ಮಣಿಪಾಲ್ ಆಸ್ಪತ್ರೆಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಅನಂತಕುಮಾರ್ ಹೆಗಡೆ ಮಾತನಾಡಿರುವುದು ಸಂವಿಧಾನ ಮತ್ತು ಪ್ರಜಾತಂತ್ರಕ್ಕೆ ವಿರುದ್ಧವಾದುದು. ಇಂತಹವರನ್ನು ಸ್ಪರ್ಧಿಸಲು ಬಿಡಬಾರದು ಎಂದು ಅತೀ ದುಃಖದಿಂದ ಹೇಳುತ್ತಿದ್ದೇನೆ ಎಂದರು. ವರುಣ್ ಗಾಂಧಿ ಮಾತನಾಡಿರುವುದಕ್ಕೂ, ಅನಂತಕುಮಾರ್ ಮಾತನಾಡಿರುವುದಕ್ಕೂ ವ್ಯತ್ಯಾಸವಿದೆ ಎಂದ ಅವರು, ವಯಸ್ಸಿನಲ್ಲಿ ರಾಜಕಾರಣದ ಅನುಭವದಲ್ಲಿ ಅನಂತಕುಮಾರ್ ಹೆಗಡೆ ಹಿರಿಯರು. ಆದರೂ ಹೀಗೆ ಮಾತನಾಡುವುದು ಸಮಾಜಕ್ಕೆ ಒಳಿತಲ್ಲ ಎಂದು ವಿಶ್ಲೇಷಿಸಿದರು.
ಚುನಾವಣೆ ನಂತರ ಆಯ್ಕೆಯಾದವರು ಓಟು ಕೊಡದೇ ಇರುವವರಿಗೂ ಪ್ರತಿನಿಧಿಯೇ. ಇಡೀ ಕ್ಷೇತ್ರದ ಮತದಾರರ ಹಿತ, ಅಭಿವೃದ್ಧಿ ಸಾಧಿಸುವುದು ಆತನ ಜವಾಬ್ದಾರಿ. ಹಾಗಿರುವಾಗ ಅನಂತಕುಮಾರ್ ಹೆಗಡೆ ತನಗೆ ಅಲ್ಪಸಂಖ್ಯಾತರ ಮತ ಬೇಡ ಎಂದಿರುವುದು ಸಂವಿಧಾನ ವಿರೋಧಿ ಕೆಲಸ ಎಂದು ಅಸಮಾಧಾನ ವ್ಯಕ್ತಪಡಿಸಿದರು.
(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು












Click it and Unblock the Notifications