ತೃತೀಯ ರಂಗದೊಂದಿಗೆ ಹೊರಟ ಎನ್ ಸಿಪಿ

ಯುಪಿಎಗೆ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಹಾಗೂ ಎನ್ ಡಿಎದ ಬಿಜೆಡಿ ಪಕ್ಷ ತೃತೀಯ ರಂಗದ ಕಡೆಗೆ ಆಸಕ್ತಿ ವಹಿಸಿರುವ ವಾಸನೆ ಕಂಡು ಬರತೊಡಗಿದೆ. ಈ ಹಿನ್ನೆಲೆಯಲ್ಲಿ ನಾಳೆ ಭುಬನೇಶ್ವರದಲ್ಲಿ ನಡೆಯಬೇಕಿರುವ ತೃತೀಯ ರಂಗದ ಸಮಾವೇಶದಲ್ಲಿ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಪಾಲ್ಗೊಳ್ಳುವುದು ಬಹುತೇಕ ಖಚಿತವಾಗಿದೆ ಎನ್ನಲಾಗಿದೆ.
ಏ 3 ರಂದು ಭುಬನೇಶ್ವರದಲ್ಲಿ ನಡೆಯುತ್ತಿರುವ ತೃತೀಯ ರಂಗದ ಸಮಾವೇಶದಲ್ಲಿ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್, ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಎಬಿ ಬರ್ಧನ್, ಡಿ ರಾಜಾ, ಬಿಜೆಡಿ ನಾಯಕ ಹಾಗೂ ಒರಿಸ್ಸಾ ಮುಖ್ಯಮಂತ್ರಿ ನವೀನ ಪಟ್ನಾಯಕ್ ಅವರೊಂದಿಗೆ ಶರದ್ ಪವಾರ್ ವೇದಿಕೆ ಹಂಚಿಕೊಳ್ಳುತ್ತಾರೆ. ಇದು ಯುಪಿಎ ಮೈತ್ರಿಕೂಟಕ್ಕೆ ಭಾರಿ ಹಿನ್ನೆಡೆ ಎಂದು ಭಾವಿಸಿಲಾಗಿದೆ. ಎನ್ ಡಿಎ ದಿಂದ ಹೊರಹೋಗಿರುವ ಬಿಜೆಡಿ ಕೂಡಾ ಭಾರಿ ಹೊಡೆತ ನೀಡಿರುವುದು ಸುಳ್ಳಲ್ಲ. ಶರದ್ ಯಾದವ್ ಪ್ರಧಾನಿ ಹುದ್ದೆಯ ಆಕಾಂಕ್ಷಿ ಆದರೆ, ಯುಪಿಎ ಒಕ್ಕೂಟದ ಪ್ರಮುಖ ಪಕ್ಷ ಕಾಂಗ್ರೆಸ್ ಪಕ್ಷ ಇದನ್ನು ಸಾರಾಸಗಟಾಗಿ ತಳ್ಳಿಹಾಕಿರುವುದು ಈ ಬೆಳವಣಿಗೆಗೆ ಕಾರಣ ಎನ್ನಲಾಗಿದೆ.
(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ 2009 ಸುದ್ದಿಗಳು
ಯಡಿಯೂರಪ್ಪ ಕುರಿಗಳು ಹೇಳಿಕೆಗೆ ದೇವೇಗೌಡ ಕಿಡಿ











Click it and Unblock the Notifications