ಮತ್ತೆ ಸೆಟಗೊಂಡ ಜೇಟ್ಲಿ - ರಾಜನಾಥ್
ನವದೆಹಲಿ, ಏ. 2 : ಉತ್ತರಪ್ರದೇಶದ ಎರಡನೇ ಅತಿ ಹೆಚ್ಚು ಭ್ರಷ್ಟ ಅಧಿಕಾರಿಗಳ ಎಂಬ ಆರೋಪಕ್ಕೆ ಒಳಗಾಗಿರುವ ನೀರಾ ಯಾದವ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿರುವ ವಿಷಯಕ್ಕೆ ಸಂಬಂಧಿಸಿದಂತೆ ಮತ್ತೆ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಮತ್ತು ಪಕ್ಷದ ಹಿರಿಯ ನಾಯಕ ಅರುಣ್ ಜೇಟ್ಲಿ ನಡುವಿನ ವಿರಸ ಇನ್ನಷ್ಟು ಹೆಚ್ಚಿಸಲು ಕಾರಣವಾಗಿದೆ ಎನ್ನಲಾಗಿದೆ.
ರಾಜನಾಥ್ ಸಿಂಗ್ ಅವರ ಕ್ಷೇತ್ರವಾದ ಗಾಜಿಯಾಬಾದ್ ಕ್ಷೇತ್ರದಿಂದ ತ್ಯಾಗಿ ಸಮುದಾಯಕ್ಕೆ ಸೇರಿದ ನೀರಾ ಯಾದವ್ ತಮ್ಮ ಪತಿ ಮಹೇದ್ರ ಸಿಂಗ್ ಯಾದವ್ ಜೊತೆ ಬಿಜೆಪಿ ಸೇರಿದ್ದರು. ಈ ಕ್ಷೇತ್ರದಲ್ಲಿ ತ್ಯಾಗಿ ಸಮುದಾಯದ ಮತ ಹೆಚ್ಚಿದ್ದು, ನೀರಾ ಯಾದವ್ ಸೇರ್ಪಡೆಯಿಂದ ಉಪಯೋಗವಾಗಲಿದೆ ಎನ್ನುವ ಲೆಕ್ಕಾಚಾರ ಈ ಬೆಳವಣಿಗೆಗೆ ಕಾರಣ ಎಂದು ಹೇಳಲಾಗಿದೆ.
ಆದರೆ, ಪಕ್ಷದ ಮೂಲಗಳ ಪ್ರಕಾರ ಆಡ್ವಾಣಿ, ಜೇಟ್ಲಿ ಹಾಗೂ ಉತ್ತರಪ್ರದೇಶದ ಚುನಾವಣಾ ಉಸ್ತುವಾರಿ ನೋಡಿಕೊಳ್ಳುತ್ತಿರುವ ಕಲರಾಜ್ ಮಿಶ್ರಾ ಅವರ ಗಮನಕ್ಕೆ ಬಾರದೇ ಈ ಬೆಳವಣಿಗೆ ನಡೆದಿದೆ. ಈ ಹಿಂದೆ ರಾಜನಾಥ್, ಸುಧಾಂಶು ಮಿತ್ತಲ್ ಅವರನ್ನು ಈಶಾನ್ಯ ರಾಜ್ಯಗಳ ಚುನಾವಣೆ ಉಸ್ತುವಾರಿಗೆ ನೇಮಕ ಮಾಡಿದಾಗಲೂ ಜೇಟ್ಲಿ ಮುನಿಸಿಕೊಂಡಿದ್ದರು. ಒಟ್ಟಿನಲ್ಲಿ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದನ್ನು ಪದೆಪದೇ ಈ ಇಬ್ಬರು ನಾಯಕರು ಬಹಿರಂಗಪಡಿಸುತ್ತಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications