ನನ್ನ ತಂದೆ ಸಾವಿಗೆ ಕಾಂಗ್ರೆಸ್ ಕಾರಣ: ಸಂಜು ಬಾಬ

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿದ್ದ ನನ್ನ ತಂದೆಗೆ ಶಿವಸೇನೆ ಮುಖಂಡ ಸಂಜಯ್ ನಿರುಪಮ ಸೇರಿ ಕೆಲ ಕಾಂಗ್ರೆಸ್ ನಾಯಕರು ಅವರಿಗೆ ನೀಡಿರುವ ಮಾನಸಿಕ ಚಿತ್ರಹಿಂಸೆ ತಾಳಲಾರದೇ ನನ್ನ ತಂದೆ ಸಾವನ್ನಪ್ಪಿದ್ದಾರೆ. ಈ ವಿಷಯವನ್ನು ನನ್ನ ತಂದೆ ಸಾಯುವ ನಾಲ್ಕು ದಿನಗಳ ಮುಂಚೆ ನನ್ನಲ್ಲಿ ಹೇಳಿದ್ದರು ಎಂದು ನಟ ಸಂಜಯ್ ದತ್ ಕಾರಣ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷದ ರಾಜಕೀಯದ ಬಗ್ಗೆ ನಂಬಿಕೆ ಹೊರಟುಹೋಗಿದೆ ಎಂದು ಸಂಜಯ್ ದತ್, ತಂದೆಯನ್ನು ಕೊಂದಿರುವ ಪಕ್ಷದಲ್ಲಿ ಇರುವುದು ಬೇಡ ಎಂದು ಸಹೋದರಿ ಪ್ರಿಯಾ ದತ್ ಅವರಿಗೆ ಕಿವಿ ಮಾತು ಹೇಳಿದ್ದಾರೆ. ಒಟ್ಟಿನಲ್ಲಿ ಲಖನೌ ಲೋಕಸಭೆ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಮೂಲಕ ಅಖಾಡಕ್ಕೆ ಇಳಿಯಲು ಸಿದ್ಧರಾಗಿದ್ದ ಸಂಜಯ್ ದತ್ ಗೆ ಸುಪ್ರಿಕೋರ್ಟ್ ಅವಕಾಶ ನೀಡದಿರುವುದು ಅವರ ಕೋಪಕ್ಕೆ ಕಾರಣವಾಗಿದೆ ಎನ್ನುವುದು ಮೇಲ್ನೋಟಕ್ಕೆ ಸಾಬೀತಾಗಿದೆ.
(ದಟ್ಸ್ ಕನ್ನಡ ವಾರ್ತೆ)
ಸಂಜಯ್ ದತ್ತ್ ಸ್ಪರ್ಧಿಸುವಂತಿಲ್ಲ: ಸು. ಕೋರ್ಟ್











Click it and Unblock the Notifications