ಯಡಿಯೂರಪ್ಪ ಕುರಿಗಳು ಹೇಳಿಕೆಗೆ ದೇವೇಗೌಡ ಕಿಡಿ

ಆಪರೇಷನ್ ಕಮಲದಂತಹ ಅಶ್ಲೀಲ ರಾಜಕಾರಣದ ತಡೆಗೆ ಜನಪ್ರತಿನಿಧಿ ಕಾಯಿದೆಗೆ ತಿದ್ದುಪಡಿ ತರುವ ಅಗತ್ಯವಿದೆ. ಅಧಿಕಾರದ ಆಸೆಗೆ ಪಕ್ಷದಿಂದ ಪಕ್ಷಕ್ಕೆ ನೆಗೆಯುವವರ ಸಂಖ್ಯೆ ಹೆಚ್ಚಿದರೂ ಏನೂ ಮಾಡಲಾಗುತ್ತಿಲ್ಲ. ತೃತೀಯರಂಗದಲ್ಲಿ ಪ್ರಧಾನಿಗಳೇ ತುಂಬಿದ್ದಾರೆ ಎಂದರೆ, ಅದು ತೃತೀಯರಂಗದ ಬಲ, ಕಾಂಗ್ರೆಸ್ ನಲ್ಲಿ ಅಂತ ಪ್ರಭಾವಿಗಳಿಲ್ಲವೆಂದರೆ ಅದು ಅವರ ಬಲಹೀನತೆ ಎಂದು ದೇವೇಗೌಡ ಲೇವಡಿ ಮಾಡಿದರು.
ಜನತಾದಳದ ಅಭ್ಯರ್ಥಿಗಳನ್ನು ಕುರಿಗಳೆಂದು ಮುಖ್ಯಮಂತ್ರಿ ಯಡಿಯೂರಪ್ಪ ಲೇವಡಿ ಮಾಡಿದ್ದಾರೆ. ನಿಮ್ಮ ಆಶೀರ್ವಾದವಿರಲಿ, ಇದೇ ಕುರಿಗಳು ಟಗರುಗಳಾಗಿ ಇಂತಹ ಹೇಳಿಕೆ ನೀಡಿದವರ ಮರ್ಮಾ೦ಗವನ್ನು ಒದೆಯುತ್ತವೆ ಎಂದು ದೇವೇಗೌಡ ಹುಬ್ಬಳ್ಳಿ ಏರ್ಪಡಿಸಲಾಗಿದ್ದ ಸಮಾವೇಶದಲ್ಲಿ ಕಿಡಿಕಾರಿದರು.
ನಾನು ಕೂಡಾ ಒಬ್ಬ ಹಿಂದೂ. ರಾಜ್ಯದಲ್ಲಿ ಮತ್ತು ಪಕ್ಕದ ತಮಿಳುನಾಡಿನಲ್ಲಿ ಹಲವಾರು ಹಿಂದೂ ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸಿದವನು. ಆರ್ಎಸ್ಎಸ್ ಮತ್ತು ಸಂಘ ಪರಿವಾರದಿಂದ ಬಂದವರು ಮಾತ್ರ ಹಿಂದೂಗಳು ಎನ್ನುವ ತಪ್ಪು ಭಾವನೆ ಬಿಜೆಪಿ ಬಿತ್ತಿದೆ. ನಾನು ಒಬ್ಬ ಅಪ್ಪಟ ಹಿಂದೂ ಎಂದು ಬಿಜೆಪಿಗೆ ಖಂಡಿತ ತೋರಿಸಿ ಕೊಡುತ್ತೇನೆ ಎಂದು ವಿಭಿನ್ನ ಹೇಳಿಕೆ ನೀಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ತೃತೀಯ ರಂಗಕ್ಕೆ ಅಸ್ತಿತ್ವ ಇಲ್ಲ : ಎಲ್ ಕೆ ಅಡ್ವಾಣಿ












Click it and Unblock the Notifications