ರಾಜಸ್ಥಾನ : ವೋಟಿಗಾಗಿ ನೋಟು ಹಂಚಿದ ಬಿಜೆಪಿ
ನವದೆಹಲಿ. ಏ. 1 : ವೋಟಿಗಾಗಿ ನೋಟು ಹಂಚಿಕೆ ಸಂಬಂಧಿಸಿದಂತೆ ನೀತಿ ಸಂಹಿತೆ ಆರೋಪದ ಮೇಲೆ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಗೆ ಚುನಾವಣೆ ಆಯೋಗ ನೋಟಿಸ್ ನೀಡಿರುವ ಬೆನ್ನಲ್ಲೇ ಬಿಜೆಪಿ ಹಿರಿಯ ಮುಖಂಡ ಜಸ್ವಂತ್ ಸಿಂಗ್ ಅವರು ರಾಜಸ್ಥಾನದ ಬರ್ಮಾರ್ ಲೋಕಸಭಾ ಕ್ಷೇತ್ರದಲ್ಲಿ ನೋಟು ಹಂಚಿ ಸಿಕ್ಕಿಬಿದ್ದಿರುವ ಪ್ರಕರಣ ಮಂಗಳವಾರ ನಡೆದಿದೆ.
ರಾಜಸ್ಥಾನದ ಬರ್ಮಾರ್ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಜಸ್ವಂತ್ ಸಿಂಗ್ ಮಗ ಮನ್ವೇಂದ್ರ ಸಿಂಗ್ ಪರ ಪ್ರಚಾರ ಕಾರ್ಯ ಕೈಗೊಂಡಿದ್ದ ಸಂದರ್ಭದಲ್ಲಿ ಜಸ್ವಂತ್ ಸಿಂಗ್ ಹಣ ಹಂಚಿದ್ದಾರೆ. ಮತದಾರರಿಗೆ ಲಂಚ ನೀಡುವ ದೃಶ್ಯ ಸ್ಪಷ್ಟವಾಗಿ ಕ್ಯಾಮರಾದಲ್ಲಿ ದಾಖಲಾಗಿದೆ. ಸಮಾವೇಶದಲ್ಲಿ ಭಾಗವಹಿಸಿದ ಮಹಿಳೆಯೊಬ್ಬರಿಗೆ ಜಸ್ವಂತ್ ಸಿಂಗ್ 10 ಸಾವಿರ ರುಪಾಯಿ ನೀಡುತ್ತಿರುವುದು ದೃಶ್ಯ ನೇರವಾಗಿ ಕಂಡು ಬಂದಿದೆ. ಹಣ ಹಂಚುವ ದೃಶ್ಯವಿರುವ ವಿಡಿಯೋ ಚಿತ್ರೀಕರಣವನ್ನು ರಾಜ್ಯ ಚುನಾವಣಾ ಆಯೋಗಕ್ಕೆ ಕಳುಹಿಸಿಕೊಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ತೃತೀಯ ರಂಗಕ್ಕೆ ಅಸ್ತಿತ್ವ ಇಲ್ಲ : ಎಲ್ ಕೆ ಅಡ್ವಾಣಿ











Click it and Unblock the Notifications