ತೃತೀಯ ರಂಗಕ್ಕೆ ಅಸ್ತಿತ್ವ ಇಲ್ಲ : ಎಲ್ ಕೆ ಅಡ್ವಾಣಿ

ದೇಶದ ಎರಡು ಪ್ರಮುಖ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಅನ್ನು ಹೊರತು ಪಡಿಸಿ ಉಳಿದ ರಾಜಕೀಯ ಪಕ್ಷಗಳು ಒಂದೆಡೆ ಸೇರಿ ತೃತೀಯ ರಂಗ ರಚನೆ, ಅಧಿಕಾರದ ಕನಸು ಕಾಣುತ್ತಿದ್ದಾರೆ. ಇದು ಸಾಧ್ಯವಿಲ್ಲ ಎಂದು ಅಡ್ವಾಣಿ ಹೇಳಿದರು.
ಮುಸ್ಲಿಂ ಮತಗಳನ್ನು ಪಡೆಯಲು ಪ್ರಾದೇಶಿಕ ಪಕ್ಷಗಳು ಅನೇಕ ತಂತ್ರಗಳನ್ನು ಹೂಡಿವೆ. ಆದರೆ ಚುನಾವಣೆ ನಂತರ ಆ ಪಕ್ಷಗಳು ಎನ್ ಡಿಎಯೊಂದಿಗೆ ವಿಲೀನವಾಗುವುದು ಖಂಡಿತಾ. ಕಾಂಗ್ರೆಸ್ ಪಕ್ಷದ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿ ಬಿಜೆಪಿ ಉದಯವಾಯಿತು. ಆಗಿನಿಂದಲೂ ರಾಷ್ಟ್ರೀಯ ಮಟ್ಟದಲ್ಲಿ ಈ ಎರಡು ಪಕ್ಷಗಳೇ ಪ್ರಮುಖ ಪಾತ್ರ ವಹಿಸಿವೇ ಹೊರತು ಇತರ ಪಕ್ಷಗಳಲ್ಲ. ಅವಕಾಶವಾದಿಗಳೆಲ್ಲ ಒಂದೆಡೆ ಸೇರಿದ ತಕ್ಷಣ ಅಧಿಕಾರ ಸಿಕ್ಕ ಹಾಗೆ ಎಂದೆನಿಸುವುದು ತಪ್ಪು ಎಂದರು.
ಕಾಂಗ್ರೆಸ್ ನೇತೃತ್ವದ ಯುಪಿಎ ಛಿದ್ರಗೊಳ್ಳುತ್ತಿದ್ದು, ಆರ್ ಜೆಡಿ, ಎಲ್ ಜೆಪಿ ಹಾಗೂ ಎಸ್ ಪಿ ಉತ್ತರಪ್ರದೇಶದಲ್ಲಿ ಕೈ ಜೋಡಿಸಿರುವುದು ಮುಂಬರುವ ಚುನಾವಣಾ ದೃಷ್ಟಿಯಿಂದ ಯುಪಿಎಗೆ ಶುಭಸೂಚನೆ ಅಲ್ಲ ಎಂದು ಅಡ್ವಾಣಿ ನುಡಿದರು.
(ಏಜೆನ್ಸೀಸ್)
ಆಡ್ವಾಣಿ ಪ್ರಧಾನಿಯಾದರೆ ಲಾಲೂ ನಿವೃತ್ತಿ












Click it and Unblock the Notifications