ಅಸ್ಸಾಂನಲ್ಲಿ ಪ್ರಬಲ ಬಾಂಬ್ ಸ್ಫೋಟ, 1 ಸಾವು
ಗುವಹಾಟಿ, ಮಾ. 31: ಇಲ್ಲಿನ ಮಾರುಕಟ್ಟೆ ಸಮೀಪ ಇಂದು ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಒಬ್ಬ ಸಾವನ್ನಪ್ಪಿದ್ದು, 10 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸ್ಫೋಟ ಸಂಭವಿಸಿದ ಲಾಲ್ ಗಣೇಶ್ ಪ್ರದೇಶದಿಂದ ಮೂರು ಕಿ.ಮೀ ದೂರದಲ್ಲಿ ಕಾಂಗ್ರೆಸ್ ನಾಯಕ ಪ್ರಣಬ್ ಮುಖರ್ಜಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು ಎನ್ನಲಾಗಿದೆ.
ಸಂಜೆ ವೇಳೆ ಮಾರುಕಟ್ಟೆಯಲ್ಲಿ ಜನದಟ್ಟಣೆ ಹೆಚ್ಚಿರುತ್ತದೆ ಎಂದು ತಿಳಿದು ಬಾಂಬ್ ಅನ್ನು ಇಡಲಾಗಿತ್ತು. ಮಾರುಕಟ್ಟೆ ಸಮೀಪದಲ್ಲಿ ನಿಲ್ಲಿಸಿದ್ದ ಮೋಟರ್ ಸೈಕಲ್ ನಲ್ಲಿದ್ದ ಬಾಂಬ್ ಸ್ಫೋಟಗೊಂಡಿತು ಎಂದು ಪೊಲೀಸರು ಹೇಳಿದ್ದಾರೆ. ಪಾನ್ ಬಜಾರ್ ನ ಹೋಟೆಲ್ ವೊಂದರಲ್ಲಿ ಪ್ರಣಬ್ ಮುಖರ್ಜಿ ಸುದ್ದಿಗೋಷ್ಠಿ ನಡೆಸಿದ್ದರು. ಉಗ್ರರ ದಾಳಿ ಇದಾಗಿರಬಹುದು ಎಂದು ಸಚಿವ ಪ್ರಣಬ್ ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ, ಉಗ್ರರ ತಂತ್ರಗಳನ್ನು ವಿಫಲಗೊಳಿಸಲು ಸಿದ್ಧರಾಗಿರುವುದಾಗಿ ಹೇಳಿದರು.
(ಏಜೆನ್ಸೀಸ್)
ನವರಂಗ್ ಬಳಿ ಸಿಕ್ಕ ಬಾಂಬ್ ನಿಷ್ಕ್ರಿಯ : ಪೊಲೀಸ್












Click it and Unblock the Notifications