ಇದು ನನ್ನ ಕೊನೆಯ ಚುನಾವಣೆ, ಪ್ರಣವ್ ಮುಖರ್ಜಿ

ಇದು ನನ್ನ ರಾಜಕೀಯ ಜೀವನದ ಕೊನೆಯ ಚುನಾವಣೆ, ದೇಶದ ರಾಜಕಾರಣದಲ್ಲಿ ಸುದೀರ್ಘವಾಗಿ ಸೇವೆಯಲ್ಲಿ ಸಲ್ಲಿಸಲು ನಿಮ್ಮ ಹಾರೈಕೆಯೇ ಕಾರಣವಾಗಿದೆ. ಇದು ಒಂದು ಸಾರಿ ಮತ ನೀಡಿ, ಇನ್ನೊಂದು ಸಲ ನಿಮ್ಮ ಬಳಿ ನಾನು ಮತ ಕೇಳಲು ಬರುವ ಸಾಧ್ಯತೆಗಳು ಕಡಿಮೆ ಎಂದು ಮುಖರ್ಜಿ ಹೇಳಿದರು. ನಿಮ್ಮ ಮತದಿಂದ ನಾನು ರಾಷ್ಟ್ರ ರಾಜಕಾರಣದಲ್ಲಿ ಮುಂಚೂಣಿಗೆ ಬರಲು ಸಾದ್ಯವಾಯಿತು ಎಂದು ಮತದಾರರ ಋಣವನ್ನು ಸ್ಮರಿಸಲು ಅವರು ಮರೆಯಲಿಲ್ಲ.
ಪ್ರಣವ್ ಮುಖರ್ಜಿ ಕಾಂಗ್ರೆಸ್ ಪಕ್ಷದ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿದ್ದು, ಯುಪಿಎ ಸರ್ಕಾರ ಅಷ್ಟೂ ಕೀಲಿ ಕೈ ಮುಖರ್ಜಿ ಬಳಿ ಇದ್ದದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಮನಮೋಹನ್ ಸಿಂಗ್ ಪ್ರಧಾನಮಂತ್ರಿಯಾಗಿದ್ದರೂ ಮುಖರ್ಜಿ ಸಮ್ಮತಿ ಇಲ್ಲದೇ ಯಾವುದೇ ಕಾರ್ಯಕ್ರಮಗಳು ಸರ್ಕಾರದಲ್ಲಾಗಲಿ, ಕಾಂಗ್ರೆಸ್ ಪಕ್ಷದಲ್ಲಾಗಲಿ ನೆರವೇರಲು ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ಮುಖರ್ಜಿ ತಮ್ಮ ಪ್ರಭಾವನನ್ನು ಬೆಳೆಸಿಕೊಂಡಿದ್ದಾರೆ.
ಇತ್ತೀಚೆಗೆ ಪ್ರಧಾನಮಂತ್ರಿ ಮವಮೋಹನ್ ಸಿಂಗ್ ಹೃದಯ ಸಂಬಂಧಿ ಚಿಕಿತ್ಸೆಗೆ ಒಳಗಾದಾಗ ಹಣಕಾಸು ಖಾತೆಯನ್ನು ವಹಿಸಿಕೊಂಡ ಮುಖರ್ಜಿ, ಯಶಸ್ವಿಯಾಗಿ ದೇಶದ ಬಜೆಟ್ ಮಂಡಿಸಿದ್ದಾರೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಖರ್ಜಿ ಪ್ರಧಾನಮಂತ್ರಿ ಆಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
(ದಟ್ಸ್ ಕನ್ನಡ ವಾರ್ತೆ)
ತೃತೀಯರಂಗಕ್ಕೆ ಕೈ ಬೆಂಬಲ ಕೋರಿಕೆ, ಕಾರಟ್












Click it and Unblock the Notifications