ಪಕ್ಷ ವಿರೋಧಿ ಚಟುವಟಿಕೆ : ರಾಮಭಟ್ ಉಚ್ಚಾಟನೆ?

ರಾಮಭಟ್ ರು ಅತ್ಯಂತ ಹಿರಿಯ ರಾಜಕಾರಣಿ. ಕಳೆದ ಬಾರಿ ಶಕುಂತಲಾ ಶೆಟ್ಟಿ ಪ್ರಕರಣದಲ್ಲಿ ನೇರವಾಗಿ ಪಕ್ಷದ ವಿರುದ್ಧ ಕೆಲಸ ಮಾಡಿದ್ದಾರೆ. ಐದು ದಶಕಗಳ ಕಾಲ ಸಿದ್ಧಾಂತಕ್ಕೆ ದುಡಿದಿದ್ದನ್ನು ಗೌರವಿಸಿ, ಅವರ ವಿರುದ್ಧ ಕ್ರಮಕೈಗೊಂಡಿರಲಿಲ್ಲ. ಆದರೆ, ಈ ಬಾರಿ ಸುಮ್ಮನಿರಲು ಸಾಧ್ಯವಿಲ್ಲ. ಶಿಸ್ತು ಕ್ರಮ ಅನಿವಾರ್ಯ. ಆ ಕೆಲಸ ನಾನೇ ಮಾಡಬೇಕಾಗುತ್ತದೆ. ಅಧಿಕೃತವಾಗಿ ರಾಮಭಟ್ ರು ತಮ್ಮ ಕಾರ್ಯ ಆರಂಭಿಸಿದೊಡನೆ ಪಕ್ಷದಿಂದ ಹೊರಹಾಕುತ್ತೇನೆ ಎಂದು ಹೇಳಿದರು.
ರಾಮಭಟ್ ರು ವಿಫಲ ಶಾಸಕ, ಎರಡು ಬಾರಿ ಶಾಸಕರಾಗಿಯೂ ಜನರ ನಿರೀಕ್ಷೆಗೆ ತಕ್ಕಂತೆ ದುಡಿಯಲಿಲ್ಲ. ಆದ್ದರಿಂದಲೇ ನಮ್ಮ ಪಕ್ಷಕ್ಕೆ ಹಿನ್ನೆಡೆಯಾಯಿತು ಎಂದು ದೂರಿದರು. ಸ್ವಾಭಿಮಾನಿ ವೇದಿಕೆ ಜೊತೆಗೆ ಯಾವುದೇ ಮಾತುಕತೆ ಇಲ್ಲ. ಒಂದೊಮ್ಮೆ ವೇದಿಕೆಯಲ್ಲಿ ಗುರುತಿಸಿಕೊಂಡವರು ಬಿದೆಪಿ ಕಾರ್ಯಕರ್ತರಾಗಿ ಬರಬೇಕಾದರೆ ಅದಕ್ಕೆ ಸ್ಥಳೀಯ ಬಿಜೆಪಿ ಘಚಕಗಳ ಪೂರ್ವಾನುಮತಿ ಬೇಕು ಎಂದು ಸ್ಪಷ್ಟಪಡಿಸಿದರು.
ಸಂಸದ ಯತ್ನಾಳ್ ಅವರ ವಿಷಯ ಮುಗಿದ ಅಧ್ಯಾಯ. ಅವರಿಗೆ ರಾಜ್ಯ ಬಿಜೆಪಿಯಲ್ಲಿ ಯಾವುದೇ ಸ್ಥಾನ ಮಾನ ಸಿಗದು. ಅವರನ್ನು ಪಕ್ಷದಿಂದ ಉಚ್ಚಾಟಿಸುವ ಘೋಷಣೆ ಮಾತ್ರ ಬಾಕಿ ಉಳಿದಿದೆ ಎಂದರು.
(ದಟ್ಸ್ ಕನ್ನಡ ವಾರ್ತೆ)
ಯತ್ನಾಳ್ ತಪ್ಪನ್ನು ತಿದ್ದಿಕೊಳ್ಳಲಿ, ಯಡಿಯೂರಪ್ಪ












Click it and Unblock the Notifications