ಚೌಧರಿ ನೇಮಕಕ್ಕೆ ಪಾಕ್ ಒಪ್ಪಿಗೆ, ಷರೀಫ್ ಗೆ ಜಯ
ಇಸ್ಲಾಮಾಬಾದ್. ಮಾ. 16 : ಪಾಕಿಸ್ತಾನ ಮುಸ್ಲಿಂ ಲೀಗ್ ಮುಖಂಡ, ಮಾಜಿ ಪ್ರಧಾನಮಂತ್ರಿ ನವಾಜ್ ಷರೀಫ್ ಅವರಿಗೆ ಕೂನೆಗೂ ಜಯ ದಕ್ಕಿದೆ. ಅಮಾನತುಗೊಂಡಿರುವ ಸುಪ್ರಿಂಕೋರ್ಟ್ ನ ಮುಖ್ಯನ್ಯಾಯಮೂರ್ತಿ ಇಫ್ತೀಕಾರ್ ಮೊಹಮ್ಮದ್ ಚೌಧರಿ ಅವರನ್ನು ಪುನರ್ ನೇಮಕ ಮಾಡಿ ಎಂದು ಮುಷರಫ್ ಆಡಳಿತದಲ್ಲಿದ್ದಾಗ ಆರಂಭಿಸಿದ ಪ್ರತಿಭಟನೆ ನಿನ್ನೆ ಮೊನ್ನೆಯವರೆಗೂ ಇದೇ ಬೇಡಿಕೆ ಮುಂದಿಟ್ಟುಕೊಂಡು ಹೋರಾಟ ನಡೆಸಿದ್ದರು. ಕೊನೆಗೂ ಪಾಕ್ ಸರ್ಕಾರ ಷರೀಫ್ ಅವರ ಒತ್ತಾಯಕ್ಕೆ ಮಣಿದು ಚೌಧರಿ ಅವರನ್ನು ಮರುನೇಮಕ ಮಾಡುವುದಾಗಿ ಘೋಷಿಸಿದೆ.
ಪಾಕಿಸ್ತಾನ ಪ್ರಧಾನಮಂತ್ರಿ ಯೂಸೆಫ್ ರಾಜಾ ಗಿಲಾನಿ, ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಅಮಾನತುಗೊಂಡಿರುವ ಸುಪ್ರಿಂಕೋರ್ಟ್ ಮುಖ್ಯ ನ್ಯಾಯಾಧೀಶ ಇಫ್ತೀಕಾರ್ ಚೌಧರಿ ಅವರನ್ನು ಮರುನೇಮಕ ಮಾಡಲಾಗುವುದು. ಮತ್ತು ಅಮಾನತುಗೊಳಿಸಲಾಗಿರುವ ಪಂಜಾಬ ಸರ್ಕಾರವನ್ನು ಕೂಡ ಮರು ಸ್ಥಾಪನೆ ಮಾಡುವುದಾಗಿ ಭರವಸೆ ನೀಡಿದರು.
ಇಫ್ತೀಕಾರ್ ಚೌಧರಿ ನೇಮಕ್ಕೆ ಷರೀಫ್ ಅವರು ಲಾಂಗ್ ಮಾರ್ಚ್ ಪ್ರತಿಭಟನೆಗೆ ಇಳಿದಿದ್ದರು. ಕಳೆದ ಒಂದು ವಾರದಿಂದ ಪಾಕಿಸ್ತಾನದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿತ್ತು. ದೇಶದಲ್ಲಿ ಉಂಚಾಗಿರುವ ಅರಾಜಕತೆಯಿಂದ ಸೇನಾ ನಾಯಕ ಕಯಾನಿ ಅವರು, ದೇಶದಲ್ಲಿ ಶಾಂತಿ ಸ್ಥಾಪಿಸಿ ಇಲ್ಲವೆ ಜಾಗ ಖಾಲಿ ಎಂಬರ್ಥ ಬರುವ ರೀತಿಯಲ್ಲಿ ಸರ್ಕಾರಕ್ಕೆ ಸೂಚನೆ ನೀಡಿದ್ದರು. ಇದರಿಂದ ಪಾಕ್ ನಲ್ಲಿ ಇನ್ನೊಂದು ಅವಧಿಗೆ ಸೇನಾಪಡೆ ಅಧಿಕಾರ ಚುಕ್ಕಾಣಿ ಹಿಡಿಯುವ ಸಾಧ್ಯತೆಗಳಿದ್ದವು. 1997 ರಲ್ಲಿ ಸೇನಾ ಮುಖ್ಯಸ್ಥ ಪರ್ವೇಜ್ ಮುಷರಫ್ ಕ್ಷಿಪ್ರ ಕ್ರಾಂತಿ ಮೂಲಕ ದೇಶದ ಅಧಿಕಾರ ಚುಕ್ಕಾಣಿ ಹಿಡಿದಿದ್ದರು. ಆಗ ಚೌಧರಿ ಅವರನ್ನು ಅಮಾನತು ಮಾಡಿದ್ದರು. ಚೌಧರಿ ಅವರು ಷರೀಫ್ ಅವರ ಆಪ್ತರು ಎನ್ನಲಾಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications