ಮಾಯಾ ಭೋಜನಕೂಟಕ್ಕೆ ಜಯಲಲಿತಾ ಗೈರು

ಭೋಜನಕೂಟಕ್ಕೆ ಗೈರು ಹಾಜರಾಗಿರುವ ಜಯಲಲಿತಾ ಅವರ ಬಗ್ಗೆ ಅನೇಕ ಸಂಶಯಗಳು ಗಿರಕಿ ಹೊಡೆಯತೊಡಗಿವೆ. ತೃತೀಯ ರಂಗಕ್ಕೆ ನಾಮಕಾವಾಸ್ತೆ ಬೆಂಬಲ ನೀಡಿರುವ ಜಯಲಲಿತಾ ಅವರು ಚುನಾವಣೆ ನಂತರ ಬೇರೆ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಅವರ ವಿರೋಧಿ ಪಕ್ಷ ಡಿಎಂಕೆ ಮುಖಂಡರು ಟೀಕಿಸುತ್ತಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡ ನೇತೃತ್ವದಲ್ಲಿ ತುಮಕೂರಿನಲ್ಲಿ ನಡೆದ ತೃತೀಯ ರಂಗದ ಉದ್ಘಾಟನೆ ಹಾಗೂ ನವದೆಹಲಿಯಲ್ಲಿ ಕರೆಯಲಾಗಿದ್ದ ಭೋಜನಕೂಟ ಮತ್ತು ಚರ್ಚೆಯಲ್ಲಿ ಜಯಲಲಿತಾ ಭಾಗವಹಿಸಿಲ್ಲ. ಈ ಎರಡು ಮಹತ್ವದ ಕಾರ್ಯಕ್ರಮಗಳಿಗೆ ಅವರ ಪ್ರತಿನಿಧಿ ಡಾ ಮೈತ್ರೆಯನ್ ಅವರು ಹಾಜರಾಗಿದ್ದರು. ಆದರೆ ಜಯಲಲಿತಾ ಅವರ ಅನುಪಸ್ಥಿತಿ ಎಕೆ ಎಂದು ಸ್ವತಃ ತೃತೀಯ ರಂಗದ ಮುಖಂಡರಿಗೆ ಗೊತ್ತಿದ್ದಂತೆ ಕಾಣುತ್ತಿಲ್ಲ.
ಭಾನುವಾರ ಮಾಯಾವತಿ ಅವರು, ಬಿಎಸ್ಪಿ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಭೋಜನಕೂಟದಲ್ಲಿ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್, ಸೀತಾರಾಂ ಯೆಚೂರಿ, ಎ ಬಿ ಬರ್ದನ್, ಡಿ ರಾಜಾ, ಆರ್ ಎಸ್ ಪಿ ಮುಖಂಡರಾದ ಚಂದ್ರದ್ರೋಣ, ಅಭಾನಿ ರಾಯ್, ಫಾರ್ವರ್ಡ್ ಬ್ಲಾಕ್ ನ ಡಿ ಬಿಸ್ವಾಸ್, ಜೆಡಿಎಸ್ ಮುಖಂಡ ದೇವೇಗೌಡ, ಟಿಡಿಪಿಯ ಎನ್ ಚಂದ್ರಬಾಬು ನಾಯ್ಡು, ಟಿಆರ್ಎಸ್ ನ ಚಂದ್ರಶೇಖರರಾವ್ ಅವರು ಉಪಸ್ಥಿತರಿದ್ದರು.
(ದಟ್ಸ್ ಕನ್ನಡ ವಾರ್ತೆ)
ಯಾರೊಂದಿಗೂ ಮೈತ್ರಿ ಇಲ್ಲ, ಮಾಯಾವತಿ











Click it and Unblock the Notifications