Get Updates
Get notified of breaking news, exclusive insights, and must-see stories!

ಮಾಯಾ ಭೋಜನಕೂಟಕ್ಕೆ ಜಯಲಲಿತಾ ಗೈರು

AIADMK skips Maya's political dinner
ನವದೆಹಲಿ, ಮಾ. 16 : ಎನ್ ಡಿಎ ಹಾಗೂ ಯುಪಿಎ ರಂಗಗಳಿಗೆ ಪರ್ಯಾಯವಾಗಿ ಉದಯವಾಗಿರುವ ತೃತೀಯ ರಂಗದ ಮುಖಂಡರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯಾವತಿ ಅವರು ದಿವಂಗತ ಕಾನ್ಸಿರಾಂ ಅವದ ಜನ್ಮದಿನದ ಅಂಗವಾಗಿ ಕರೆದಿದ್ದ ಭೋಜನಕೂಟಕ್ಕೆ ಎಐಎಡಿಎಂಕೆ ನಾಯಕಿ ಜಯಲಲಿತಾ ಗೈರು ಹಾಜರಾಗಿರುವುದು ತೀವ್ರ ಕುತೂಹಲ ಸೃಷ್ಟಿಸಿದೆ.

ಭೋಜನಕೂಟಕ್ಕೆ ಗೈರು ಹಾಜರಾಗಿರುವ ಜಯಲಲಿತಾ ಅವರ ಬಗ್ಗೆ ಅನೇಕ ಸಂಶಯಗಳು ಗಿರಕಿ ಹೊಡೆಯತೊಡಗಿವೆ. ತೃತೀಯ ರಂಗಕ್ಕೆ ನಾಮಕಾವಾಸ್ತೆ ಬೆಂಬಲ ನೀಡಿರುವ ಜಯಲಲಿತಾ ಅವರು ಚುನಾವಣೆ ನಂತರ ಬೇರೆ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಅವರ ವಿರೋಧಿ ಪಕ್ಷ ಡಿಎಂಕೆ ಮುಖಂಡರು ಟೀಕಿಸುತ್ತಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡ ನೇತೃತ್ವದಲ್ಲಿ ತುಮಕೂರಿನಲ್ಲಿ ನಡೆದ ತೃತೀಯ ರಂಗದ ಉದ್ಘಾಟನೆ ಹಾಗೂ ನವದೆಹಲಿಯಲ್ಲಿ ಕರೆಯಲಾಗಿದ್ದ ಭೋಜನಕೂಟ ಮತ್ತು ಚರ್ಚೆಯಲ್ಲಿ ಜಯಲಲಿತಾ ಭಾಗವಹಿಸಿಲ್ಲ. ಈ ಎರಡು ಮಹತ್ವದ ಕಾರ್ಯಕ್ರಮಗಳಿಗೆ ಅವರ ಪ್ರತಿನಿಧಿ ಡಾ ಮೈತ್ರೆಯನ್ ಅವರು ಹಾಜರಾಗಿದ್ದರು. ಆದರೆ ಜಯಲಲಿತಾ ಅವರ ಅನುಪಸ್ಥಿತಿ ಎಕೆ ಎಂದು ಸ್ವತಃ ತೃತೀಯ ರಂಗದ ಮುಖಂಡರಿಗೆ ಗೊತ್ತಿದ್ದಂತೆ ಕಾಣುತ್ತಿಲ್ಲ.

ಭಾನುವಾರ ಮಾಯಾವತಿ ಅವರು, ಬಿಎಸ್ಪಿ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಭೋಜನಕೂಟದಲ್ಲಿ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್, ಸೀತಾರಾಂ ಯೆಚೂರಿ, ಎ ಬಿ ಬರ್ದನ್, ಡಿ ರಾಜಾ, ಆರ್ ಎಸ್ ಪಿ ಮುಖಂಡರಾದ ಚಂದ್ರದ್ರೋಣ, ಅಭಾನಿ ರಾಯ್, ಫಾರ್ವರ್ಡ್ ಬ್ಲಾಕ್ ನ ಡಿ ಬಿಸ್ವಾಸ್, ಜೆಡಿಎಸ್ ಮುಖಂಡ ದೇವೇಗೌಡ, ಟಿಡಿಪಿಯ ಎನ್ ಚಂದ್ರಬಾಬು ನಾಯ್ಡು, ಟಿಆರ್ಎಸ್ ನ ಚಂದ್ರಶೇಖರರಾವ್ ಅವರು ಉಪಸ್ಥಿತರಿದ್ದರು.

(ದಟ್ಸ್ ಕನ್ನಡ ವಾರ್ತೆ)
ಯಾರೊಂದಿಗೂ ಮೈತ್ರಿ ಇಲ್ಲ, ಮಾಯಾವತಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+