ಯಾರೊಂದಿಗೂ ಮೈತ್ರಿ ಇಲ್ಲ, ಮಾಯಾವತಿ
ನವದೆಹಲಿ, ಮಾ. 15 : ಲೋಕಸಭೆ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷ ಯಾವ ಪಕ್ಷದೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ. ಕಾಂಗ್ರೆಸ್, ಬಿಜೆಪಿ ಉಳ್ಳವರ ಪಕ್ಷವಾಗಿದ್ದು, ಬಿಎಸ್ಪಿಯೊಂದೆ ದೇಶದ ಆಶಾಕಿರಣ ಎಂದು ಉತ್ತರ ಪ್ರದೇಶ ಮಾಯಾವತಿ ಹೇಳಿದರು.
ಬಿಎಸ್ಪಿ ಪಕ್ಷದ ಸಂಸ್ಥಾಪಕ ಕಾನ್ಸಿರಾಮ್ ಅವರ ಹುಟ್ಟುಹಬ್ಬದ ಅಂಗವಾಗಿ ತೃತೀಯ ರಂಗದ ಮುಖಂಡರನ್ನು ಭೋಜನಕ್ಕೆ ಆಹ್ವಾನಿಸಿರುವ ಅವರು, ಕಾರ್ಯಕ್ರಮಕ್ಕೂ ಮುಂಚೆ ಪತ್ರಿಕಾಗೋಷ್ಠಿ ನಡೆಸಿದರು. ಚುನಾವಣೆ ನಂತರ ಬಿಎಸ್ಪಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಿದೆ ಎಂದು ಎಸ್ಪಿ ಮುಖಂಡ ಮುಲಾಯಂ ಸಿಂಗ್ ಯಾದವ್ ಅವರ ಆರೋಪವನ್ನು ತಳ್ಳಿಹಾಕಿದ ಅವರು, ಬಿಎಸ್ಪಿ ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಕಣಕ್ಕೆ ಇಳಿಯಲಿದೆ ಸ್ಪಷ್ಟಪಡಿಸಿದರು.
ಯುಪಿಎ ಹಾಗೂ ಎನ್ ಡಿಎ ಒಕ್ಕೂಟಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಅವರು, ಈ ಎರಡು ಒಕ್ಕೂಟಗಳ ಆಡಳಿತದಿಂದ ಜನರು ತೀವ್ರ ಬೇಸತ್ತು ಹೋಗಿದ್ದಾರೆ. ದೇಶದ ಜನತೆ ಬದಲಾವಣಿ ಬಯಸಿದ್ದು, ತೃತೀಯ ರಂಗದ ಎಲ್ಲ ಪಕ್ಷಗಳಿಗೂ ಜನರು ಆಶೀರ್ದಾವ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
(ದಟ್ಸ್ ಕನ್ನಡ ವಾರ್ತೆ)
ಸರ್ಕಾರ ರಚನೆಗೆ ಸೋನಿಯಾ ಬೆಂಬಲ ಅಗತ್ಯ, ಎಸ್ಪಿ












Click it and Unblock the Notifications