ಅನಂತ್ ಜೊತೆ ಭಿನ್ನಾಭಿಪ್ರಾಯವಿಲ್ಲ, ಬಿಎಸ್ ವೈ
ಬೆಂಗಳೂರು,
ಮಾ. 13 : ನನ್ನ ಮತ್ತು ಅನಂತ್ ಕುಮಾರ್ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಅನಂತಕುಮಾರ್ ರಾಷ್ಟ್ರೀಯ ನಾಯಕರಾಗಿದ್ದಾರೆ. ಇದು ಅನಗತ್ಯವಾಗಿ ಸೃಷ್ಟಿಯಾದದ್ದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು. ಗುರುವಾರ ಸಂಜೆ ನಗರಕ್ಕೆ ಆಗಮಿಸಿದ ಅವರು ಹೆಲಿಪ್ಯಾಡ್ ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. id="toptextpromo">ಲೋಕಸಭೆ
ಅಭ್ಯರ್ಥಿಗಳ ಪಟ್ಟಿಯನ್ನು ವೆಂಕಯ್ಯ ನಾಯ್ಡು ನೇತೃತ್ವದಲ್ಲೇ ಅಂತಿಮಗೊಳಿಸಲಾಗಿದೆ. ಸಚಿವ ಸುರೇಶಕುಮಾರ್ ಅವರಿಗೂ ಈ ಬಗ್ಗೆ ಮಾಹಿತಿ ಇದೆ. ಬೇಕಿದ್ದರೆ ಅವರನ್ನೇ ಕೇಳಿ ಎಂದರು. ದೊಡ್ಡ ಪಕ್ಷವಾದ್ದರಿಂದ ಲೋಪದೋಷಗಳು ಸಹಜ. ಅಸಮಾಧಾನ ಇದೆ ಎಂದು ಅವನರು ಒಪ್ಪಿಕೊಂಡರು. ಶೀಘ್ರದಲ್ಲಿ ಭಿನ್ನಮತ ಶಮನಕ್ಕೆ ಪ್ರಯತ್ನಿಸಲಾಗುವುದು ಎಂದ ಹೇಳಿದರು. id='are-slot-1' class='oiad oi-axt oiadv'> id='top-searched-articles'>(ದಟ್ಸ್
ಕನ್ನಡ ವಾರ್ತೆ)











Click it and Unblock the Notifications