ಬಿಜೆಪಿ-ಶಿವಸೇನೆ ಬಿಕ್ಕಟ್ಟು ಶಮನ
ಮುಂಬೈ, ಮಾ. 13 : ಮಹಾರಾಷ್ಟ್ರದಲ್ಲಿ ಭಾರತೀಯ ಜನತಾ ಪಕ್ಷ ಮತ್ತು ಶಿವಸೇನೆ ನಡುವಣ ಬಿಕ್ಕಟ್ಟು ಅಂತ್ಯಗೊಂಡಿದ್ದು, ಬರುವ ಲೋಕಸಭಾ ಚುನಾವಣೆಯಲ್ಲಿ ಸೀಟು ಹೊಂದಾಣಿಕೆ ಮಾಡಿಕೊಂಡು ಕಣಕ್ಕಿಳಿಯಲು ನಿರ್ಧರಿಸಿವೆ. 2004 ರ ಚುನಾವಣೆಯಂತೆ ಬಿಜೆಪಿ 26 ಮತ್ತು ಶಿವಸೇನೆ 22 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ.
ನಮ್ಮ ನಡುವೆ ಇದ್ದ ಎಲ್ಲಾ ಬಿಕ್ಕಟ್ಟುಗಳಿಗೆ ಅಂತ್ಯ ಹಾಡಲಾಗಿದೆ. ಮುಖ್ಯವಾಗಿ ಐದು ಕ್ಷೇತ್ರಗಳಲ್ಲಿ ಯಾವ ಪಕ್ಷದ ಅಭ್ಯರ್ಥಿಯನ್ನು ನಿಲ್ಲಿಸಬೇಕೆನ್ನುವುದು ಮಾತುಕತೆಯಲ್ಲಿ ನಿರ್ಧಾರವಾಗಿದ್ದು , ಮುಂಬೈ ದಕ್ಷಿಣ, ವಾಷಿಂ, ಕಲ್ಯಾಣ್ ನಲ್ಲಿ ಶಿವಸೇನೆ ಮತ್ತು ಭಿವಂಡಿ ಮತ್ತು ಜಲಗಾ೦ವ್ ನಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಗುರುವಾರ ತಡರಾತ್ರಿಯವರೆಗೆ ಎರಡೂ ಪಕ್ಷದ ರಾಜಕೀಯ ನಾಯಕರುಗಳ ಮಾತುಕತೆಯ ನಂತರ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಎರಡೂ ಪಕ್ಷದ ನಾಯಕರುಗಳು ಜಂಟಿಯಾಗಿ ಇಂದು ರಾತ್ರಿ ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಿದ್ದಾರೆ ಎಂದು ಶಿವಸೇನೆ ಮೂಲಗಳು ತಿಳಿಸಿವೆ.
(ದಟ್ಸ್ ಕನ್ನಡ ವಾರ್ತೆ)
ಯತ್ನಾಳ್ ತಪ್ಪನ್ನು ತಿದ್ದಿಕೊಳ್ಳಲಿ, ಯಡಿಯೂರಪ್ಪ












Click it and Unblock the Notifications