Get Updates
Get notified of breaking news, exclusive insights, and must-see stories!

ನನ್ನನ್ನು ಪಿಎಂ ಅಭ್ಯರ್ಥಿ ಎಂದು ಘೋಷಿಸಿ: ಮಾಯಾ

BSP leader Mayawati
ನವದೆಹಲಿ, ಮಾ. 12 : ಭಾರಿ ಉತ್ಸಾಹದ ಅಲೆಯಲ್ಲಿ ತೇಲುತ್ತಿರುವ ತೃತೀಯ ರಂಗ ಮುಖಂಡರಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ಸರಿಯಾದ ಗುದ್ದು ನೀಡಿದ್ದಾರೆ. ತೃತೀಯ ರಂಗದ ಪ್ರಧಾನಮಂತ್ರಿ ಅಭ್ಯರ್ಥಿ ಎಂದು ತಮ್ಮನ್ನು ಘೋಷಿಸಬೇಕು ಎಂದು ಪಟ್ಟುಹಿಡಿದಿರುವ ಅವರು, ಮಾರ್ಚ್ 15 ಅಂತಿಮ ಗಡುವು ನೀಡಿದ್ದಾರೆ ಎಂಬ ಸಂಗತಿ ಬೆಳಕಿಗೆ ಬಂದಿದೆ.

ಗುರುವಾರವಷ್ಟೇ ತೃತೀಯ ರಂಗದ ಒಂಬತ್ತು ಮಂದಿ ಘಟಾನುಘಟಿ ನಾಯಕರು ಕರ್ನಾಟಕದಿಂದ ಅಧಿಕೃತವಾಗಿ ತೃತೀಯ ರಂಗಕ್ಕೆ ಚಾಲನೆ ನೀಡಿದ್ದರು. ತೃತೀಯ ರಂಗ ಸಮಾವೇಶಕ್ಕೆ ಬೆಂಬಲವಾಗಿ ಮಾಯಾವತಿ ತಮ್ಮ ಆಪ್ತರು ಎನ್ನಲಾದ ಸತೀಶ್ ಮಿಶ್ರಾ ಅವರನ್ನು ಕಳುಹಿಸಿಕೊಟ್ಟಿದ್ದರು. ಆದರೆ ಇಂದು ಸಭೆ ಸೇರಿ ಏಕಾಏಕಿ ತೃತೀಯ ರಂಗದ ಮುಖಂಡರ ಮೇಲೆ ಬಾಂಬ್ ಎಸೆದಿರುವ ನುಂಗಲಾರದ ತುತ್ತಾಗಿದೆ.

ಪ್ರಧಾನಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಮಾಯಾವತಿ ಇಂದು ಪಕ್ಷ ಹಿರಿಯರೊಂದಿಗೆ ಮಹತ್ವದ ಸಭೆ ನಡೆಸಿ ತಮ್ಮನ್ನು ತೃತೀಯ ರಂಗದ ಪ್ರಧಾನಮಂತ್ರಿ ಹುದ್ದೆಯ ಅಭ್ಯರ್ಥಿ ಎಂದು ಘೋಷಸಿಬೇಕು ಎಂಬ ನಿರ್ಣಾಯಕ ತೀರ್ಮಾನ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಭಾರಿ ಉತ್ಸಾಹದಿಂದ ತೃತೀಯ ರಂಗದ ಸಮಾವೇಶವನ್ನು ಆಯೋಜಿಸಿದ್ದ ಎಚ್ ಡಿ ದೇವೇಗೌಡರು ಕೂಡ ಪ್ರಧಾನಮಂತ್ರಿ ಹುದ್ದೆಯ ಅಭ್ಯರ್ಥಿಯಾಗಿದ್ದಾರೆ.

ತೃತೀಯ ರಂಗದಲ್ಲಿ ಹಿರಿಯ ನಾಯಕರಾಗಿರುವ ಗೌಡರು, ಈಗಾಗಲೇ ಈ ಹುದ್ದೆ ಅನುಭವಿಸಿದ್ದು, ಪಿಎಂ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುತ್ತಾರೆ ಎಂಬ ಭರವಸೆ ಇದೆ. ಈ ವಿಷಯದಲ್ಲಿ ಎಡಪಕ್ಷಗಳು ಹಾಗೂ ಟಿಡಿಪಿ ಸಹಮತವಿದೆ ಎನ್ನಲಾಗಿದೆ. ಆದರೆ, ಮಾಯಾವತಿ ಪಿಎಂ ಅಭ್ಯರ್ಥಿ ಘೋಷಿಸಿ ಎಂದು ತೃತೀಯ ರಂಗದ ಮುಖಂಡರಿಗೆ ದುಂಬಾಲು ಬಿದ್ದಿರುವುದು ತೃತೀಯ ರಂಗದ ಭವಿಷ್ಯ ನಿರ್ಣಾಯಕಘಟ್ಟ ತಲುಪಿದಂತಾಗಿದೆ.

(ದಟ್ಸ್ ಕನ್ನಡ ವಾರ್ತೆ)
ಬಿಜೆಪಿ ಸೋಲಿಸಲು ಪ್ರಕಾಶ್ ಕಾರಟ್ ಮನವಿ
ಬಿಜೆಪಿ ಕಿತ್ತೊಗೆಯಲು ತೃತೀಯ ರಂಗದ ಸಮಾವೇಶ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+