ಮತ್ತೆ ಬಿಜೆಡಿ ಎನ್ ಡಿಎ ತೆಕ್ಕೆಗೆ, ಶರದ್ ಆಶಾವಾದ

NDA still hopeful of post-poll alliance with BJD
ನವದೆಹಲಿ, ಮಾ. 10 : ಎನ್ ಡಿಎ ಬಳಗದಿಂದ ತೃತೀಯ ರಂಗದ ತೆಕ್ಕೆಗೆ ಸೇರಿಕೊಂಡಿರುವ ಬಿಜೆಡಿ ಬಗ್ಗೆ ಎನ್ ಡಿಎ ಇನ್ನೂ ಆಶಾವಾದ ಇಟ್ಟುಕೊಂಡಿದೆ. ಲೋಕಸಭೆ ಚುನಾವಣೆ ಬಳಿಕ ನವೀನ ಪಟ್ನಾಯಕ್ ಮತ್ತೆ ಎನ್ ಡಿಎಯೊಂದಿಗೆ ಸೇರಲಿದ್ದಾರೆ ಎಂದು ಎನ್ ಡಿಎ ಸಂಚಾಲಕ ಶರದ್ ಯಾದವ್ ಭರವಸೆಯ ಮಾತುಗಳನ್ನು ಆಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಬಿಜೆಡಿ ಒರಿಸ್ಸಾ ವಿಧಾನಸಭೆಗೆ ಮಾತ್ರ ತೃತೀಯ ರಂಗದೊಂದಿಗೆ ಗುರುತಿಸಿಕೊಳ್ಳತೊಡಗಿದೆ. ಲೋಕಸಭೆ ಚುನಾವಣೆಯಲ್ಲಿ ಖಂಡಿತವಾಗಿಯೂ ಎನ್ ಡಿಎ ಜೊತೆ ಬರಲಿದ್ದಾರೆ ಎಂದರು. ಬಿಜೆಡಿ ಪಕ್ಷ ಬಿಜೆಪಿ ಕೈಕೊಟ್ಟ ಎಡಪಕ್ಷಗಳತ್ತ ಮುಖ ಮಾಡಿರುವುದು ಒರಿಸ್ಸಾ ವಿಧಾನಸಭೆ ಚುನಾವಣೆಯಲ್ಲದೆ, ಲೋಕಸಭೆ ಚುನಾವಣೆಯಲ್ಲಿ ಕೂಡ ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ನಾಳೆ ಒರಿಸ್ಸಾ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆಯಲ್ಲಿ ಎಡಪಕ್ಷಗಳ ಬೆಂಬಲದಿಂದ ಬಿಜೆಡಿ ಗೆಲುವು ಸಾಧಿಸಿದಲ್ಲಿ, ಶಾಶ್ವತವಾಗಿ ಬಿಜೆಡಿ ತೃತೀಯ ರಂಗದ ಕಡೆಗೆ ವಾಲಬಹುದು. ಆಕಸ್ಮಾತ ಆಗಿ ವಿಶ್ವಾಸಮತಕ್ಕೆ ಸೋಲುಂಟಾದರೆ ಬಿಜೆಡಿ ಹಳೆ ಗಂಡನ ಪಾದವೇ ಗತಿ ಎಂದು ಮರಳಿ ಎನ್ ಡಿಎ ಸೇರಿಕೊಳ್ಳಬಹುದು. ಎಲ್ಲದಕ್ಕೂ ನಾಳೆವರೆಗೂ ಕಾಯಬೇಕಿದೆ.

(ದಟ್ಸ್ ಕನ್ನಡ ವಾರ್ತೆ)
ತೃತೀಯರಂಗ ಸಭೆಗೆ ನಾನು ಬರಲ್ಲ, ದೇವೇಗೌಡ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+