ಮತ್ತೆ ಬಿಜೆಡಿ ಎನ್ ಡಿಎ ತೆಕ್ಕೆಗೆ, ಶರದ್ ಆಶಾವಾದ

ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಬಿಜೆಡಿ ಒರಿಸ್ಸಾ ವಿಧಾನಸಭೆಗೆ ಮಾತ್ರ ತೃತೀಯ ರಂಗದೊಂದಿಗೆ ಗುರುತಿಸಿಕೊಳ್ಳತೊಡಗಿದೆ. ಲೋಕಸಭೆ ಚುನಾವಣೆಯಲ್ಲಿ ಖಂಡಿತವಾಗಿಯೂ ಎನ್ ಡಿಎ ಜೊತೆ ಬರಲಿದ್ದಾರೆ ಎಂದರು. ಬಿಜೆಡಿ ಪಕ್ಷ ಬಿಜೆಪಿ ಕೈಕೊಟ್ಟ ಎಡಪಕ್ಷಗಳತ್ತ ಮುಖ ಮಾಡಿರುವುದು ಒರಿಸ್ಸಾ ವಿಧಾನಸಭೆ ಚುನಾವಣೆಯಲ್ಲದೆ, ಲೋಕಸಭೆ ಚುನಾವಣೆಯಲ್ಲಿ ಕೂಡ ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ನಾಳೆ ಒರಿಸ್ಸಾ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆಯಲ್ಲಿ ಎಡಪಕ್ಷಗಳ ಬೆಂಬಲದಿಂದ ಬಿಜೆಡಿ ಗೆಲುವು ಸಾಧಿಸಿದಲ್ಲಿ, ಶಾಶ್ವತವಾಗಿ ಬಿಜೆಡಿ ತೃತೀಯ ರಂಗದ ಕಡೆಗೆ ವಾಲಬಹುದು. ಆಕಸ್ಮಾತ ಆಗಿ ವಿಶ್ವಾಸಮತಕ್ಕೆ ಸೋಲುಂಟಾದರೆ ಬಿಜೆಡಿ ಹಳೆ ಗಂಡನ ಪಾದವೇ ಗತಿ ಎಂದು ಮರಳಿ ಎನ್ ಡಿಎ ಸೇರಿಕೊಳ್ಳಬಹುದು. ಎಲ್ಲದಕ್ಕೂ ನಾಳೆವರೆಗೂ ಕಾಯಬೇಕಿದೆ.
(ದಟ್ಸ್ ಕನ್ನಡ ವಾರ್ತೆ)
ತೃತೀಯರಂಗ ಸಭೆಗೆ ನಾನು ಬರಲ್ಲ, ದೇವೇಗೌಡ












Click it and Unblock the Notifications