ನಿಮ್ಮ ಮರ್ಜಿಯಂತೆ ಇಗರ್ಜಿ, ಮಂದಿರ ಕಟ್ಟುವಂತಿಲ್ಲ

''ಕಡುಬಡವನೊಬ್ಬ ಒಂದು ತುಂಡು ಭೂಮಿಯನ್ನು ಒತ್ತುವರಿ ಮಾಡಿದರೆ ಅದನ್ನೇ ದೊಡ್ಡ ವಿಷಯ ಮಾಡುತ್ತೀರಿ. ಅದೇ ದೇವರ ಹೆಸರಿನಲ್ಲಿ ಭೂಮಿ ಕಬಳಿಸಿದರೆ ನೀವು ಕಣ್ಮುಚ್ಚಿ ಸುಮ್ಮನಿರುತ್ತೀರಿ. ಕಾನೂನು ಎಲ್ಲರಿಗೂ ಒಂದೇ. ದೇವರಾದರೂ ಅಷ್ಟೆ ಯಾರಾದರೂ ಅಷ್ಟೇ ಕ್ರಮ ಕೈಗೊಳ್ಳಿ" ಎಂದು ಹೈಕೋರ್ಟ್ ಆಜ್ಞೆ ಮಾಡಿದೆ.
"ಸಾರ್ವಜನಿಕ ಸ್ಥಳಗಳಲ್ಲಿ ಮಸೀದಿ, ಮಂದಿರ ಅಥವಾ ಚರ್ಚು ಇರಬಾರದು. ಇದು ನ್ಯಾಯಾಲಯದ ನಿರ್ಧಾರ. ಈ ವಿಷಯದಲ್ಲಿ ಭಾವನಾತ್ಮಕ ವಿಷಯಗಳನ್ನು ಬದಿಗಿಟ್ಟು ಕಠಿಣ ಕ್ರಮ ಕೈಗೊಳ್ಳಿ " ಎಂದು ಮುಖ್ಯ ನಾಯಾಧೀಶರನ್ನು ಒಳಗೊಂಡ ವಿಭಾಗೀಯ ಪೀಠ ಕಟ್ಟುನಿಟ್ಟಾಗಿ ಹೇಳಿದೆ. ಓಕಳಿಪುರಂನ ಲಕ್ಷ್ಮಣರಾವ್ ಉದ್ಯಾನವನವನ್ನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿತ್ತು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications